೨೮ / ವಾಗರ್ಥ
ಒಳಗಿನ ಕಲಾವಿದತ್ವ- 'ಇವೆರಡೂ' ಹೇತುಗಳೇ, ಅವುಗಳ ಸಂಘಟನ
ವಾದಾಗ ಪ್ರಸಂಗದ ಯಥಾವತ್ ಅನುವಾದ ಮಾತ್ರ : ರೂಪುಗೊಳ್ಳು
ವುದು ಅಸಂಭವ. ಅಲ್ಲದೆ ಯಕ್ಷಗಾನ ಪ್ರಸಂಗಗಳು ತಿಳಿಸುವ ಆಶಯ
ಗಳಾಗಲಿ, ಅಲ್ಲಿನ ಕಪ್ಪು-ಬಿಳುಪಿನ ಪಾತ್ರ ಪ್ರಪಂಚವಾಗಲಿ, ಆಧುನಿಕ
ಸಂಸ್ಕಾರದ ಅರ್ಥದಾರಿಗೆ ಇದ್ದಕ್ಕಿದ್ದಂತೆ ಸಮ್ಮತವಾಗುವ ಸಂಭವವಿಲ್ಲ.
ಹಾಗಾಗಿ, ಹೊಸ. ಹೊಂದಾಣಿಕೆಗಳ: ಮತ್ತು ಸಂಸ್ಕೃತಿಯ ಹೊಸ
ಅರ್ಥವಂತಿಕೆಗಳ ಅಗೆತ-ಬಗೆತಗಳು ಸಾಧ್ಯವಾಗುವುದು ಮತ್ತು ಅಂತಹ
ಸಾಧ್ಯತೆಯ ಅಸೀಮ ಅವಕಾಶ ಇರುವುದೇ ತಾಳಮದ್ದಳೆಯ ಜೀವಂತಿಕೆ,
ಪ್ರಸಂಗದ ಅಂದರೆ ಈ ವರೆಗೆ ವ್ಯಾಪಕವಾಗಿ ಬಳಕೆಯಲ್ಲಿ ಇರುವಂತೆ
ಮುಖ್ಯವಾಗಿ ಪ್ರಾಚೀನ ಕಾವ್ಯ, ಪುರಾಣವಸ್ತು ಆಧರಿತ ಪಾತ್ರ, ಘಟನೆ,
ಮೌಲ್ಯಗಳ ಜತೆ ಒಂದು ಸತತವಾದ ಗುದ್ದಾಟ, ಅರ್ಥದಾರಿಯಲ್ಲಿ
ಸಾಗುತ್ತಲೆ ಇರಬೇಕಾದುದು ಈ ಕಲೆಯ ರೂಪದಲ್ಲಿ ಇರುವ ಅಂಶ.
ಈ ಸೃಷ್ಟಿ ಸ್ವಾತಂತ್ರ್ಯವೇ ಕಲಾವಿದನಿಗೆ ಅವಕಾಶವನ್ನೂ ನೀಡುತ್ತದೆ;
ಹೊಣೆಗಾರಿಕೆಯನ್ನೂ ಹೊರಿಸುತ್ತದೆ.
ಹಾಗಾಗಿ, ಈ ಕಲೆಯ ಪ್ರಸ್ತುತತೆ ಅಥವಾ 'ಪ್ರಸ್ತುತೀಕರಣ
ಪ್ರಕ್ರಿಯೆ'ಯಲ್ಲಿ.. ಈ ಕಲೆಗಿರುವ ಶೈಲೀಕೃತ ಸ್ವಭಾವ, ಪ್ರಾದೇಶಿಕ
ಅಭಿವ್ಯಕ್ತಿ ಸ್ವರೂಪ, ಪುರಾಣದ ಮಿತಿ, ಪ್ರಸಂಗದ ಮಿತಿ, ಪ್ರೇಕ್ಷಕ
ನಿರೀಕ್ಷೆಯ ಮಿತಿ- ಇಷ್ಟನ್ನು ಕೂಡ ನ್ಯಾಯವಾಗಿ ಗಣನೆಗೆ ತೆಗೆದುಕೊಳ್ಳ
ಬೇಕಾಗುತ್ತದೆ. ಇವುಗಳ ಮೇಲೆ ಕೆಲಸಮಾಡುವ ಹೊರ-ಒಳ
ಒತ್ತಡಗಳು ಪ್ರಸ್ತುತೀಕರಣವನ್ನು ರೂಪಿಸುತ್ತವೆ. ಅಂದರೆ ಪ್ರಸ್ತುತತೆ
ವಲಯಗಳ ಸೀಮೆಗಳೊಳಗಿಂದ ತುಡಿಯುತ್ತದೆ.
- 8, 9 ಪ್ರಸ್ತುತತೆಯ ಚಲನೆ -
ಹೊರ ಒತ್ತಡಗಳು- ಅಂದರೆ
ಸಾಮಾಜಿಕ, ಸಾಹಿತ್ಯ ಕಲಾಕ್ಷೇತ್ರದಲ್ಲಿ ಆದ ಆವಿಷ್ಕಾರಗಳು.