ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜೋಶಿ

ಒಂದು ಎನ್‌ಸೈಕ್ಲೋಪೀಡಿಯಾ

ಸೇರಾಜೆ ಸೀತಾರಾಮ ಭಟ್ಟ

'ಜೋಶಿಯವರು ಮನುಷ್ಯರಲ್ಲ!' 13-05-2017ರ ಶನಿವಾರದಂದು ಮೈಸೂರಿನ ಜಗಮೋಹನ ಅರಮನೆ ಸಭಾಂಗಣದಲ್ಲಿ 'ಜೋಶಿ ವಾಗರ್ಥ ಗೌರವ' ಸಮಾರಂಭದಮೊದಲನೇ ದಿವಸದಂದು ನಾನು ಭಾಷಣವನ್ನು ಆರಂಭಿಸಿದ್ದು ಹೀಗೆ. ಆದರೆ ಅಲ್ಲಿಗೆ ನನ್ನ ವಾಕ್ಯ ಪೂರ್ತಿಯಾಗುವುದಿಲ್ಲ. ಅದರ ಮುಂದುವರಿದ ತುಂಡು ಅವರೊಂದು 'ಎನ್‌ಸೈಕ್ಲೋಪೀಡಿಯಾ'. 'ಆಡು ಮುಟ್ಟದ ಸೊಪ್ಪಿಲ್ಲ' ಎಂಬ ಉಕ್ತಿಯಂತೆ ಜೋಶಿ ಮುಟ್ಟದ ವಿಷಯವಿಲ್ಲ, ತಟ್ಟದ ವಿಚಾರವಿಲ್ಲ. ಯಾವುದಾದರೊಂದು ವಿಷಯದ ಕುರಿತು ಏನಾದರೂ ಹೇಳುವಾಗ ಅವರು ಆ ವಿಷಯದ ಕುರಿತು ಸಂಪೂರ್ಣ ತಿಳಿದೇ ಮಾತನಾಡುತ್ತಾರೆ. ಅಲ್ಪ ವಿದ್ಯಾ... ಎಂಬ ಹಾಗೆ ಅಲ್ಲ.

ಪೂರ್ವ ನಿಯೋಜಿತವಾಗಿ ವೇದಿಕೆಯ ಮೇಲೆ ಭಾಗವಹಿಸುವುದಕ್ಕಾಗಿ ಬಂದವನು