ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಮಾರಂಭ ಮತ್ತು ಭಾಷಣ ಕರಾವಳಿಯ ಸಾಧಕರ ಸಮ್ಮಾನಗಳಲ್ಲಿ ಒಂದು Trend Setter ಆಯಿತು. ಮುಂದೆ ಡಾ. ಬಿ.ಎ. ವಿವೇಕ ರೈಯವರ ಮುಂದಾಳ್ತನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಸಂಘಟನೆ ಯಲ್ಲಿಯೂ ತೊಡಗಿಸಿಕೊಂಡಿದ್ದರು. ವಿಶ್ವವಿದ್ಯಾನಿಲಯದ ಯಕ್ಷಗಾನ ಕೇಂದ್ರದ ಸಲಹೆಗಾರರಾಗಿಯೂ ಇದ್ದಾರೆ. ಇಂತಹ ಬಹುಮುಖಿ ಸಾಮರ್ಥ್ಯವನ್ನು ಗುರುತಿಸಿ ದಿ. ಶಂಭು ಹೆಗಡೆಯವರು ಜೋಶಿಯವರ ಬಗ್ಗೆ “ನೇತೃತ್ವ, ಕಾರ್ಯಕರ್ತೃತ್ವ, ನಿರ್ವಹಣೆ ಹಾಗೂ ಕಲಾ ಸಾಮರ್ಥ್ಯ ಎಲ್ಲವೂ ಸಹಜವಾಗಿ ಸೇರಿರುವ ವ್ಯಕ್ತಿ” ಎಂದಿದ್ದಾರೆ. ದಿ. ಕೊರ್ಗಿ ವೆಂಕಟೇಶ್ವರ ಉಪಾಧ್ಯರ ಮಾತುಗಳಲ್ಲಿ 'ಜೋಷಿಯವರಿದ್ದಾರೆಂದರೆ ನಮಗೆ ಎಲ್ಲ ಬಗೆಯಲ್ಲೂ ಧೈರ್ಯ, ಕಾರ್ಯಕ್ರಮದ ಸುಗಮತೆಗೆ ನಿರ್ಭೀತಿ.”

ಯಕ್ಷಗಾನ ಕಲೆಯ ಕುರಿತಾಗಿ ವಿಮರ್ಶಾತ್ಮಕ ಲೇಖನಗಳನ್ನೂ ಗ್ರಂಥಗಳನ್ನೂ ಬರೆದಿರುವ ಜೋಶಿಯವರು ಯಕ್ಷಗಾನದ ಪ್ರಥಮ ವೆಬ್‌ಸೈಟ್‌ನ ಸಂಪಾದಕರಾಗಿದ್ದಾರೆ. ಯಕ್ಷಗಾನ ಸಂಶೋಧಕಿ ಮಾರ್ಥಾ ಆಶ್ಚನ್‌ರವರು ಕಟೀಲಿನಲ್ಲಿ ಸಂಯೋಜಿಸಿದ ತೆಂಕುತಿಟ್ಟು ಯಕ್ಷಗಾನದ ನಾಲ್ಕು ದಿನಗಳ ಕಾರ್ಯಾಗಾರದ ಪ್ರಧಾನ ಮಾರ್ಗದರ್ಶಕ ರಾಗಿದ್ದರು. ಹಾಗೆಯೇ ಮಣಿಪಾಲದ ಡಾ. ವಿಜಯನಾಥ ಶೆಣೈಯವರ 'ಯಕ್ಷಮಂಡಲ' ಪ್ರಯೋಗ, ಪ್ರಥಮ ಕರಾವಳಿ ಉತ್ಸವ, ಇಂಗ್ಲಿಷ್ ಯಕ್ಷಗಾನಗಳು, ಕಟೀಲು ಸಪ್ತಾಹ ಮುಂತಾದವುಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅನೇಕ ಹಿರಿಯ ಕಲಾವಿದ ತಂಡವನ್ನು ಸಂಯೋಜಿಸಿ ಮುಂಬೈಯಿಂದ ಕಾಸರಗೋಡು ತನಕವೂ ದುಬ್ಯಾ, ಬಹೈನ್‌ಗಳಲ್ಲೂ ಪ್ರದರ್ಶನಗಳನ್ನು ನೀಡಿದ್ದಾರೆ. ಹೆಗ್ಗೋಡಿನ ನೀನಾಸಂ ಏರ್ಪಡಿಸಿದ ತಾಳಮದ್ದಳೆಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯ ನೇತೃತ್ವ ವಹಿಸಿದ್ದಾರೆ. ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಾರ್ಯಕ್ರಮಗಳ ಯೋಜಕರಾಗಿಯೂ ನೆರವು ನೀಡಿದ್ದಾರೆ.

ಅಗರಿ ಸನ್ಮಾನ, ಮೂಡಂಬೈಲು ಶಾಸ್ತ್ರಿ ಸನ್ಮಾನ, ಡಾ. ರಾಘವ ನಂಬಿಯಾರರ 'ಹಿಮ್ಮೇಳ' ಗ್ರಂಥ ಪ್ರಕಟಣೆಗಾಗಿ ಪರಿಶ್ರಮ, ಅನೇಕ ಯಕ್ಷಗಾನ ಕ್ಯಾಸೆಟ್‌ಗಳ ನಿರ್ಮಾಣಕ್ಕೆ ಸಹಕಾರ, ಅಭಿನಂದನ ಭಾಷಣಗಳನ್ನು ಮಾಡಿದ್ದಲ್ಲದೆ ಪ್ರಧಾನವಾಗಿ ಬಲಿಪ ನಾರಾಯಣ ಭಾಗವತರ ಸುದೀರ್ಘ ಕಲಾ ಸೇವೆಯನ್ನು ಗೌರವಿಸುವ ಅಂಗವಾಗಿ ಸುಮಾರು 17 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 'ಬಲಿಪ ಅಮೃತಭವನ' ನಿರ್ಮಾಣದ ಯೋಜನೆ, ಸಂಗ್ರಹ ಹಾಗೂ ನಿರ್ವಹಣೆಯಲ್ಲಿ ದುಡಿದಿದ್ದಾರೆ. ಯಕ್ಷಗಾನದ ವಿಚಾರ ಸಂಕಿರಣಗಳು, ಧ್ವನಿಮುದ್ರಣಗಳು, ಡಾಕ್ಯುಮೆಂಟರಿಗಳು ಹೀಗೆ ಯಾವುದೇ ಅಕಾಡೆಮಿಕ್ ಯೋಜನೆಗಳು ಕಾರ್ಯಗತವಾಗುವಾಗಿ ಜೋಶಿಯವರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯುವುದು ಅನಿವಾರ್ಯವೆನ್ನುವಷ್ಟು ಜೋಶಿಯವರು ಇಂದು ಛಾಪು ಮೂಡಿಸಿದ್ದಾರೆ.

ಒಬ್ಬ ಕಾಲೇಜು ಶಿಕ್ಷಕ ಇಂತಹ ವಿಸ್ತ್ರತ ಕಾರ್ಯಕ್ರಮಗಳನ್ನು ತನ್ನ ವೃತ್ತಿಗೆ ತೊಂದರೆಯಾಗದಂತೆ ಮಾಡಲು ಸಾಧ್ಯವೇ? ಈ ಪ್ರಶ್ನೆಗೆ ಉತ್ತರ ಜೋಶಿಯವರ

ವಾಗರ್ಥ ಗೌರವ / 18