ಈ ಪುಟವನ್ನು ಪ್ರಕಟಿಸಲಾಗಿದೆ
೧೯೨
ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು
ಕೊಡುವೆನು. ಇಷ್ಟೇ ಅಲ್ಲದೇ ಭರತನಿಗೂ ಮತ್ತು ನಿಮ್ಮ ಸಂತಾನಕ್ಕೂ ನಾನು
ಶಾಪ ಕೊಡುವೆನು. ಕ್ರೋಧವನ್ನು ತಡೆಹಿಡಿಯುವ ಸಾಮರ್ಥ್ಯ ನನ್ನಲ್ಲಿಲ್ಲ.”
ದುರ್ವಾಸನ ನುಡಿಯನ್ನು ಕೇಳಿ ಲಕ್ಷ್ಮಣ ಈ ರೀತಿ ಯೋಚಿಸಿದನು.
'ನಾನೊಬ್ಬನು ಮರಣ ಹೊಂದಿದರೂ ಅಡ್ಡಿಯಿಲ್ಲ; ಆದರೆ ಎಲ್ಲರ ನಾಶವಾಗುವದು
ಉಚಿತವಲ್ಲ.'- ಹೀಗೆಂದು ಲಕ್ಷ್ಮಣನು ರಾಮನ ಕಟ್ಟಪ್ಪಣೆಯನ್ನು ಉಲ್ಲಂಘಿಸಿ,
ದುರ್ವಾಸ ಋಷಿಯ ಆಗಮನದ ವಾರ್ತೆಯನ್ನು ರಾಮನಿಗೆ ತಿಳಿಸಿದನು.
ಕಾಲಪುರುಷನು ಹೋದನಂತರ ಲಕ್ಷ್ಮಣನು ರಾಮನಿಗೆ ಈ ರೀತಿ ಎಂದನು-
“ನನ್ನನ್ನು ವಧಿಸಿ ನೀನು ನನ್ನ ಪ್ರತಿಜ್ಞೆಯನ್ನು ಪಾಲಿಸು!”
ನಿಜದಲ್ಲಿ ಈ ಶಾಪವು ಕೊಡಲ್ಪಟ್ಟಿಲ್ಲ.