ಪುಟ:ವಿದ್ಯಾರ್ಥಿ ಕರಭೂಷಣ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ವಿದ್ಯಾರ್ಥಿ ಕರಭೂಷಣ ಡುವ ಶಕ್ತಿಯ ಸಹನವೂ ಸಂಪಾದಿಸಿಕೊಳ್ಳಲ್ಪಡದಿದ್ದರೆ, ಯಾವ ಕೆಲ ಸವೂ ತೃಪ್ತಿಕರವಾಗಿ ನೆರವೇರುವುದಿಲ್ಲ. ವೃದ್ಧಿಗೆ ಒರಬೇಕೆಂದು ಅಪೇಕ್ಷೆಯುಳ್ಳವರು, ಕೆಲಸಮಾಡುವುದಕ್ಕೆ ಮುಂಚೆ, ಸಾವಧಾನವಾಗಿ, ತಾವು ಮಾಡಬೇಕಾದ ಕೆಲಸದ ಪೂರ್ವಾ ಪರಗಳನ್ನು ನರಾಲೋಚಿಸಬೇಕು. ಅನಂತರ ಆ ಕೆಲಸವನ್ನು ಮಾಡು ವುದಕ್ಕು ಸಕ್ರಮಿಸಬೇಕು, ಯಾವ ಕೆಲಸವೂ, ಉನಕ್ರಮದಲ್ಲಿಯೇ ಚೆನ್ನಾಗಿ ಮಾಡುವುದಕ್ಕಾಗುವುದಿಲ್ಲ. ಲೇಖಕರೂ ಕೂಡ, ಪ್ರಧಮ ತಃ ವಕ್ರವಾಗಿ ಬರೆಯುತ್ತಾರೆ. ಯಾರು ಆತುರಪಡದೆ ಅಪ್ಪನ್ನ ವಾಗಿ ಬೆರಳು ಗಳಿಗೆ ಚೆನ್ನಾಗಿ ಬರೆಯುವುದನ್ನು ಕ್ರಮೇಣ ಅಭ್ಯಾಸಮಾಡಿಸುತ್ತಾ ರೆಯೋ, ಅವರ ಅಕ್ಷರಗಳು ಪರಿಣಾಮದಲ್ಲಿ ಮುಕ್ತಾಫಲಗಳಂತಾಗು ವುವು. ಹಾಗಾಗಬೇಕಾದರೆ, ಅನೇಕ ದಿವಸಗಳ ವರೆಗೂ ಒಳ್ಳೆಯ ಅಕ್ಷರ ಗಳನ್ನು ನೋಡುತ್ತ, ಅವುಗಳಂತೆ ಬರೆಯುವ ಪ್ರಯತ್ನವನ್ನು ಮಾಡುತ್ತ ಬರಬೇಕು, : ಲಸ ನಡೆಯಬೇಕೆಂದು, ಮನಸ್ಸಿಗೆ ಬಂದಹಾಗೆಲ್ಲ ಗೀಚ ಬಾರದು, ಸ್ವಲ್ಪ ಸಾವಕಾಶವಾದಾಗ್ಯೂ ಚಿಂತೆಯಿಲ್ಲ ಎಂಬುದಾಗಿಯೂ, ಲಕ್ಷಣವಾಗಿ ಬರೆಯುವುದೇ ಮುಖ್ಯೋದ್ದೇಶ ಎಂಬುದಾಗಿಯೂ ತಿಳಿದು ಕೊಂಡು, ಕೆಲಸಮಾಡಬೇಕು, ಬರೆಯುವುದರಲ್ಲಿ ಮಾತ್ರವೇ ಈ ಶ್ರದೆ ಯಿರಬೇಕೆಂದರ್ಧವಲ್ಲ, ಯಾವ ಕೆಲಸ ಚೆನ್ನಾಗಿ ಮಾಡಲ್ಪಡಬೇಕಾದರೂ, ಆಲೋಚನೆಯ, ಪೂರ್ವಾಪರಜ್ಞಾನವೂ, ಸಾವಧಾನದಿಂದ ಕೆಲಸಮಾ ಡುವಷ್ಟು ಸಹ ರೂ ಇರಬೇಕು. ಒಂದು ಕೆಲಸವನ್ನು ಮಾಡತಕ್ಕವರು, ಅದೇ ಕೆಲಸವನ್ನು ಇತರರು ಹೇಗೆ ಮಾಡಿರುವರೋ ಅದನ್ನು ಮೇಲು