ಪುಟ:ವಿದ್ಯಾರ್ಥಿ ಕರಭೂಷಣ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩ }b ) ಪರಿಚ್ಛೇದ ೧ ಕರೆದುಕೊಂಡು ಹೋಗಬಹುದೆಂದು ದಶರಥನು ಹೇಳಿದನು. ಆಗ ಅರ ಮನೆಯಲ್ಲಿ ಸೇರಿಸಲ್ಪಟ್ಟ ಮಹಾಸಭೆಯಲ್ಲಿ, ಶ್ರೀರಾಮನು ಮಾಡಿದ ಪ್ರಶ್ನೆ ಗಳಿಗೆ ಉತ್ತರವನ್ನು ಕೊಡುವುದು ಅಸಾಧ್ಯವಾಗಿ ತೋರಲು, ವಿಶ್ವಾಮಿ ತ್ರರು ವಸಿಷ್ಠರನ್ನು ಕುರಿತು, ಈ ಪ್ರಶ್ನೆಗಳಿಗೆ ನೀವು ಹೊರತು ಮತ್ತಾರೂ ಸುಯಾದ ಉತ್ತರವನ್ನು ಕೊಡುವುದಕ್ಕೆ ಶಕ್ತರಲ್ಲವೆಂದು ಹೇಳಿ, ಉತ್ತರ ವನ್ನಪ್ಪಣೆಕೊಡಬೇಕೆಂದು ಪ್ರಾರ್ಧಿಸಲು, ವಸಿಷರು, ಶ್ರೀರಾಮನಿಗೆ ಸದ್ಧರ್ಮಗಳನ್ನು ಉಪದೇಶಮಾಡಿ, ಪ್ರವೃತ್ತಿ ಮಾರ್ಗಕ್ಕೆ ಅವನು ಬರು ವಂತೆಯೂ ದುಷ್ಟನಿಗ್ರಹ ಶಿಷ್ಟಸುಪಾಲನೆಗಳಿಂದ ದೇಶವನ್ನು ರಕ್ಷಿಸಿ ಕೃತಕೃತ್ಯನಾಗುವಂತೆಯೂ ಮಾಡಿದರು. ಶ್ರೀರಾಮನು ತೀರ್ಥಯಾತ್ರೆಗೆ ಹೋಗದೆ ದೇಶಾಟನವನ್ನೂ ಪಂಡಿತಭಾಷಣವನ್ನೂ ಮಾಡದೆ ಕೂಪ ಕೂರ್ಮದಂತೆ ಅಯೋಧ್ಯಯಲ್ಲಿಯೆ ಇದ್ದಿದ್ದರೆ, ಎಂದಿಗೂ ಅವತಾರ ಪುರುಷನೆಂದು ಗಣಿಸಲ್ಪಡುತ್ತಿರಲಿಲ್ಲ ; ಸೇತುವಿನಿಂದ ಹಿಡಿದು ಹಿಮಾಚಲ ದವರೆಗೂ ಮಹಾವಿಷ್ಣುವಿನ ಅವತಾರಪುರುಷನೆಂದು ಲಕ್ಷಾಂತರವರುಷ ಗಳಿಂದ ಎಂದಿಗೂ ಪೂಜಿಸಲ್ಪಡುತ್ತಿರಲಿಲ್ಲ ಲೋಕವ್ಯವಹಾರಜ್ಞಾನವೂ, ಮನೋವಾಕ್ಕರಗಳಲ್ಲಿ ಧರ್ಮದಿಂದ ನಡೆಯಬೇಕೆಂಬ ಸಂಕಲ್ಪವೂ, ಈ ಸಂಕಲ್ಪಕ್ಕೆ ವಿರೋಧವಾಗಿ ನಡೆಯುವಂತೆ ಮಾಡತಕ್ಕ ಆಶೆಗೆ ಎಷ್ಟು ಒ೦ದಾಗ್ಯೂ ಅವಕ್ಕಧೀನನಾಗದೆ ಸತ್ಯಕ್ಕೆ ಲೋಪಬರುವುದಾದರೆ ಪ್ರಾಣ ವನ್ನು ಬಿಡುವುದೇ ಉತ್ತಮ ಎಂಬ ನಿಷ್ಕರ್ಷೆಯ ಶ್ರೀರಾಮನಲ್ಲಿ ಪರಿ ಪೂರ್ಣವಾಗಿದ್ದು, ಈ ಗುಣಾತಿಶಯಗಳಿಂದಲೇ, ಶ್ರೀರಾಮನು ಅವತಾರಪುರುಷನಾಗಿ ನುಣಮಿಸಿದನು. ಈ ಚಾನವಾಸಿಷ ದ ಸಾರ