ಪುಟ:ಶಂಕರ ಕಥಾಸಾರ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



೩೨

ಕಾದಂಬರೀಸಂಗ್ರಹ

ಇಲಿದಾರೆ. ನಾನು ಯೋಗಸಾಮರ್ಥ್ಯದಿಂದ ಆ ರಾಜನ ದೇಹಕ್ಕೆ ನನ್ನ ಆತ್ಮನನ್ನು
ನುಗ್ಗಿಸಿ ಅವರಿಂದ ಕಳಾಶಾಸ್ತ್ರವನ್ನೆಲ್ಲಾ ಕಲಿತುಬರುವೆನು” ಎನ್ನಲು ಸನಂದನನು
ಗುರುಗಳನ್ನು ಕುರಿತು ! ಆಚಾರರೇ ! ಮಂದ್ರಯೋಗಿಯೆಂಬುವನು ಪರಕಾಯ
ಪ್ರವೇಶವಿದ್ಯಾಬಲದಿಂದ ತನ್ನ ದೇಹವನ್ನು ಶಿಷ್ಯನಾದ ಗೋರಕ್ಷನ ಬಳಿ ಇಟ್ಟು ಆತ್ಮ
ವನ್ನು ವ್ಯತನಗಿರುವ ಓರ್ವ ಮಹಾರಾಜನ ದೇಹಕ್ಕೆ ನುಗ್ಗಿಸಲು, ಶವವು ಎದ್ದ
ದ್ದನ್ನು ಕಂಡು ಎಲ್ಲರೂ ಭಯಾಶ್ಚರಯುಕ್ತರಾಗಿ ಆ ದೇಹಕ್ಕೆ ಸಂಸ್ಕಾರಾದಿಗಳು
ಮಾಡಿ ಪಟ್ಟಣಕ್ಕೆ ಕರೆದುಕೊಂಡುಹೋದನಂತರದಲ್ಲಿ ಮಂತ್ರಿಗಳು ಯಾರೋ
ಯೋಗಿಗಳು ನಮ್ಮ ರಾಜನ ಸತ್ತ ದೇಹದಲ್ಲಿ ಸೇರಿ ವಿಲಾಸತೋರಿಸುತ್ತಿರುವುದರಿಂದಲೇ
ದುರ್ಭಿಕ್ಷವು ದೇಶದ ಯಾವಭಾಗದಲ್ಲಿಯೂ ಇಲ್ಲವೆಂದೂಷಿಸಿ ಆತನು ರಾಜಶರೀರ
ವನ್ನು ಬಿಟ್ಟ ಹೋಗದೇ ಇರುವಾಗೆ ಮಾಡಲು, ನವವನಸಂಪನ್ನೆ ಯರಾದ ಅನೇ
ಕಸುಂದರೀಮಣಿಗಳನ್ನು ಕೂಡಿಹಾಕಿ ತನ್ಮೂಲಕ ಆ ಯತಿಗೆ ಮೋಸಗೊಳಿಸಲು
ಆ ಯತಿಯು ತನ್ನ ಸಮಾಧಿಯನ್ನು ಮರೆತು ಕಾಮಕ್ರೀಡಾಲಾಲಸನಾಗಿರುವ ಸಮ
ಯದಲ್ಲಿ ಗೋರಕ್ಷನು ಗುರುದೇಹವನ್ನು ಬೇರೆಜನರ ರಕ್ಷಣೆಯಲ್ಲಿಟ್ಟು; ತಾನು ಭರ
ತಾಚಾರ್ಯನಂತೆ ವೇಷಧರಿಸಿ ಸುಯದ ಸಮಯದಲ್ಲಿ ರಾಜನಿಗೆ ತತ್ತೋಪದೇಶಮಂ
ಮಾಡಿ ಯತಿಯನ್ನು ಆ ದೇಹವನ್ನು ಬಿಟ್ಟು ಬರುವಾಗೆ ಮಾಡಿದನೆಂಬ ಕಥೆಯು
ಪ್ರಸಿದ್ಧವಾಗಿಲ್ಲವೆ? ಎಂದರು. ಅದಕ್ಕೆ ಕೇಳಿ ಆಹಾರ ರು ಎಲೈ ಶಿಷ ನೇ ! ಕೃಷ್ಣ
ನು ರತಿಕ್ರೀಡಾಲೋಲನಾಗಿದ್ದರೂ ವಯೊಲಿಯೆಂಬ ಯೋಗದ ಮಹಿಮೆಯಿಂದ ಇಂದ್ರಿ
ಯಸ್ಟಲನವಿಲ್ಲದವನಾಗಿ ಅನಾಹ್ಮಚಾರಿ ಎಂಬ ಹೆಸರನ್ನು ಹೊಂದಲಿಲ್ಲವೆ?
ಇದಲ್ಲದೇ ಇಂದ್ರನು ಯತಿಗಳನ್ನು ಕೊಂದು ತೋಳಗಳಿಗೆ ಹಾಕಿ ತ್ವಷ್ಟಬ್ರಹ್ಮನ
ಮಗನ “ ಕೊಂದನು. ಹೀಗೆ ಯತಿಪತ್ರೆ ಬ್ರಹ್ಮ ಹತ್ಯೆಗಳೆಂಬ ಮಹಾ ಪಾಪಗಳನ್ನು
ಮಾಡಿದರೂ ತನ್ನ ಒಂದು ರೋಮವೂ ನೋಯಲಿಲ್ಲವೆಂದು ಆತ್ಮಜ್ಞಾನಪ್ರಭಾವ
ವನ್ನು ಹೇಳಿರುವುದು ಖಗೈದದಿಂದ ತಿಳಿದುಬರುತ್ತದೆ; ಮತ್ತು ಜನಕನು ಅನೇಕ
ದಕ್ಷಿಣೆಗಳಿಂದ ಯುಕ್ತಗಳಾದ ಕ್ರತುಗಳನ್ನು ಮಾಡಿ ದೇವತೆಗಳನ್ನೂ ಬ್ರಾಹ್ಮಣರನ್ನೂ
ತೃಪ್ತಿ ಪಡಿಸಿದನು. ಹೀಗೆ ಮಾಡಿದಾಗ್ಯೂ ತತ್ಸಂಭೋಗಾರ್ಹವಾದ ಶರೀರವು ಬರದೇ
ಮೋಕ್ಷವು ಬಂದಿತೆಂದು ಕಾಣ್ಯಶಾಖೋಪನಿಷತ್ತುಗಳಿಂದ ತಿಳಿಯಬರುತ್ತದೆ. ಆದ್ದ
ರಿಂದ ವ್ರತಭಂಗಶಂಕೆಯು ಬರಲಾರದು. ಎಂದು ಹೇಳಿ ತನ್ನ ದೇಹವನ್ನು ಒಂದು