ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೧೦೭

ಯೆಂದೂ ಕೂಗಿಕೊಳ್ಳುವುದು ರೂಢಿಯಾಗಿದೆ. ಧರ್ಮವು ಎಂದೂ ನಮ್ಮದೇಶದ ಅವನತಿಗೆ ಕಾರಣವಲ್ಲವೇ ಅಲ್ಲ. ಅದಕ್ಕೆ ಕಾರಣವನ್ನು ಬೇರೆಕಡೆ ಹುಡುಕಬೇಕು. ಧರ್ಮವೆಂಬ ತಳಹದಿಯ ಮೇಲೆಯೇ ಸಾವಿರಾರು ವರ್ಷಗಳಿಂದ ಭಾರತೀಯರ ಸಮಾಜ ರೀತಿನೀತಿಗಳು ನಿಂತುಕೊಂಡಿವೆ. ಇಷ್ಟು ದಿನಗಳಾದರೂ ಸ್ವಲ್ಪವೂ ಅಲ್ಲಾಡದಿರುವ ಆ ತಳಹದಿಯ ಮೇಲೆಯೇ ಮುಂದಕ್ಕೂ ಕಟ್ಟಡವನ್ನು ಕಟ್ಟಿಕೊಂಡು ಹೋಗುವುದೇ ನನಗೆ ಸುಖಕರ, ಶ್ರೇಯಸ್ಕರ, ಕ್ಷೇಮಕರ. ಇದಕ್ಕೆ ದೇಶವಾತ್ಸಲ್ಯವ ತುಂಬಿತುಳುಕುತ್ತಿದ್ದ ಸ್ವಾಮಿ ವಿವೇಕಾನಂದರೇ ಉದಾಹರಣೆ. ನಮ್ಮ ಈ ಧರ್ಮದ ಸಹಾಯದಿಂದ ಎಲ್ಲರೂ ಸ್ವಾಮಿ ವಿವೇಕಾನಂದರಂತಾದರೆ ಭಾರತ ಭೂಮಿಯ ಪುಣ್ಯಕ್ಕೆ ಎಣೆಯೇನು ?

ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ |
ನಚಾಶುಶ್ರೂಷವೇ ವಾಚ್ಯಂ ನಚಮಾಂ ಯೋಭ್ಯಸೂಯತಿ