ಪುಟ:ಶ್ರೀ ಕೃಷ್ಣ ಲೀಲೆ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಂಕಿಂ CA* ಸುಂದರನಾದ ನೀನು, ಈ ಸಮಯದಲ್ಲಿ ಮಾತ್ರ ನನ್ನನ್ನು ಬಿಟ್ಟು ಹೋಗಬಹುದೇ ? ಅಕ್ಷಣೆ:-ಶೆ | ಪ್ರಣತಕಾಮದ, ಪದ್ಮಚಾರ್ಚಿತಂ | ಧರಣಿಮಂಡನಂ, ಧೈಯಮಾಪದಿ | ಚರಣಸಂಕದ೦, ಶಂತಮಂಚತೇ | ರಮಣನಸ್ತನೇ, ಸ್ವರ್ಪ ಯಾದಿರ್ಹ || ಶ್ರೀಕೃಷ್ಣಾ ! ಕರಣಾ ತಭಾವದಿಂದ ನಿನ್ನ ಮರೆಹೊಕ್ಕವರ ಇಷ್ಟಾರ್ಥಗಳನ್ನು ಅನುಗ್ರಹಿಸತಕ್ಕದಾಗಿಯೂ, ಬ್ರಹ್ಮಾದಿಗಳಿಗೂ ಪೂಜ್ಯವಾಗಿಯೂ, ಭೂಮಿಗೆ ಅಲಂಕಾರಪ್ರಾಯವಾಗಿಯೂ, ಸಂಕಟ ಸಮಯದಲ್ಲಿ ಧ್ಯಾನಿಸಲ್ಪಡತಕ್ಕುದಾಗಿಯೂ, ಸಂತತ ಸುಖಪ್ರದವಾಗಿ ಯೂ ಇರುವ ನಿನ್ನ ಪಾದಪದ್ಯಗಳನ್ನು ನಮ್ಮ ವಕ್ಷೇಜಗಳಿಗೆ ಅಲಂಕರಿಸಿ ನಮ್ಮ ಹೃದಯಗಳನ್ನು ವೇದಿಸುತ್ತಿರುವ ಸಂತಾನವನ್ನು ಗಗಿಹರಿಸು ! ವನಲತೆ:-ಶ್ಲೋ|| ಸುರತವರ್ಧನಂ, ಶೋಕನಾಶನಂ | ಸ್ವರಿತವೇಣುನಾ, ಸುಷ್ಟು ಚು೦ಭಿತಂ | ಇತರರಾಗವಿ, ಸ್ಯಾರಣಂನೃಣಾಂ | ವಿತರವೀರನಃ, ತೇ೭ಧರಾಮೃತಂ || ಶ್ರೀಕೃಷ್ಣಾ! ವೀರವಿಕ್ರಮಾ | ಲೋಕಾಭಿರಾಮವಾದ ಸಾರ ಭೌಮತ್ಯಾದಿ ಪದವಿಗಳಲ್ಲಿ ಮನುಷ್ಯರಿಗಿರತಕ್ಕ ಆಕೆಯನ್ನು ಪರಿಹರಿಸ ತಕ್ಕುದಾಗಿಯೂ, ಪ್ರೇಮಪಾಶಕ್ಕೆ ಸಿಲುಕಿದವರಾದ ನಮ್ಮಂತಹ ಸಿಯರ ಕಾಮಗಾಶಗಳನ್ನು ಪೂರ್ತಿಗೊಳಿಸತಕ್ಕುದಾಗಿಯೂ, ನಂಬಿದವರ ದುಃಖಗಳನ್ನು ಪರಿಹರಿಸತಕ್ಕುದಾಗಿಯೂ, ಮೃದುಮಧುರ ಸರವುಳ ಮುರಳಿಯನ್ನು ಬಾರಿಬಾರಿಗೂ ಚುಂಬಿಸತಕ್ಕುದಾಗಿಯೂ ಇರುವ ನಿನ್ನ ಅಧರಾಮೃತವನ್ನು ನಮಗೆ ಪ್ರಸಾದಿಸಬಾರದೆ ? ರೂಪಮಂಜರಿ:- 1 ಆಟ ತಿಯದ್ಭರ್ವಾ, ಅಕಾನನಂ | ತುಟಯುಗಾಯತ್, ತಾಮಪಶ್ಯತಾಂ |