ಪುಟ:ಶ್ರೀ ಕೃಷ್ಣ ಲೀಲೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

                       

ಶ್ರೀರಸ್ತು

ಶ್ರೀಕೃಷ್ಣಲೀಲೆ

ಪ್ರಥಮಾಂಕಂ

ಪ್ರಥಮರಂಗಂ.

ನಾರದ ಮಹಾರುಷಿಗಳು ವೀಣಗಾನಮಾಡುತ್ತಾ

ಪ್ರವೇಶಿಸುವರು

ರಾಗ ಮಧ್ಯಮಾವತಿ-ಅಥವಾ ಮೋಹನ-ಏಕತಾಳ

ಜಲಧಿಸದನ | ದುರಿತಶಮನ | ಪರಮಪಾವನ || ಪ ||
ಕಲಿತೆಸುಗುಣ | ಲಲಿತವದನ | ಪರಮಚರಣ | ದನುಜಹರಣ ||ಅ||ಪ||
ಮಂಗಳಾಂಗಮಾಧವಶೌರೀ | ಮೌನೀ೦ದ್ರವಿಮಲಮಾನಸ ಸಿಹ್ಮಾಸನ
ನಿಲಯಾ | ಸೌಭಾಗ್ಯಧಾತ ಸಂತತಶಿವರಾಮತೋಷಣಾ | ಕಮಲಾರ್ಚಿ
ತ ವಿಮಲಾಂಚಿತ ಕಮನೀಯಗುಣಾಭರಣಾ | ಸಮಸುಶೀಲ ಸುಜನಪಾಲ

ಶ್ರುತಿವಿಲೋಲ ಪಾಲಯ ||ಜಲಧಿ||


ಆಹಾ! ಭಗವಂತನ ಕಲ್ಯಾಣಗುಣಗಳನ್ನು ಸಂಪೂರ್ಣವಾಗಿ

ಬಣ್ಣಿಸಲು ನನ್ನಿಂದಾಗಬಲ್ಲದೇ? ಎಷ್ಟು ಬಣ್ಣಿಸಿದರೂ ಮತ್ತಷ್ಟು ಅಗಾ
ಧವಾಗಿಯೇ ತೋರುವುದು. ಚತುರ್ಮುಖನಾದ ಬ್ರಹ್ಮನಿಗೂ, ಷಣ್ಣು
ಖನಾದ ಕುಮಾರನಿಗೂ, ಸಹಸ್ರಮುಖನಾದ ಆದಿಶೇಷನಿಗೂ ಸಹಾ
ಅಸಾಧ್ಯವಾಗಿರುವಲ್ಲಿ ನನ್ನಂಥವನಿಗೆ ಸಾಧ್ಯವೇ? ಎಂದಿಗೂ ಸಾಧ್ಯವಲ್ಲ!
ಆದಾಗ್ಯೂ ಪರಂಧಾಮನು ಕರುಣಾಸಮುದ್ರನಾದುದರಿಂದ ಭಕ್ತರು
ತಮ್ಮ ಶಕ್ತ್ಯಾನುಸಾರವಾಗಿ ಮಾಡತಕ್ಕ ಸ್ಮರಣೆಗೆ ಸಂತುಷ್ಟನಾಗಿ,
ತನ್ನ ಅವ್ಯಾಜ ಕಾರುಣ್ಯದಿಂದ ಕಟಾಕ್ಷಿಸ ತಕ್ಕವನಾದ ಕಾರಣ ಭಕ್ತರಿಗೆ
ಸುಲಭಸಾಧ್ಯನಾಗಿರುವನು. ಇಂತಹ ಪರಮ ಕಾರುಣ್ಯಮೂರ್ತಿಯ

ವಾತ್ಸಲ್ಯವನ್ನರಿಯದೆ “ಕಂಸಾದಿ ದುಷ್ಟ ರಾಕ್ಷಸರು" ಮಿತಿಮೀರಿದ