ಪುಟ:ಶ್ರೀ ಕೃಷ್ಣ ಲೀಲೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪ್ರಥಮಾಕಂ

೯

ವುದರಲ್ಲಿ ಸಂಶಯವೇನಿದೆ ? ಪರಂತು ಜಗದ್ರಕ್ಷಕನಾದ ನಿನ್ನ ಅನುಗ್ರ
ಹಕ್ಕೆ ಪಾತ್ರನಾಗಬೇಕಾದರೆ ನಾನು ಭಾಗ್ಯಶಾಲಿಯೇ ಸರಿ ! ಜಗ
ನ್ಯಾಥಾ ! ಬಿನ್ನವಿಸುವೆನು.
                ರಾಗ-ದರ್ಬಾರ್‌-ರೂಪಕ.
   ಲಾಲಿಸೈ ರಮಾರಮಣನೆ | ಪೇಳುವೆನು ಪ್ರಸಕ್ತವಿಷಯ!||ಪ||
   ಕೂಳರಾದ ಕ೦ಸಶಿಶುಪಾಲಾದಿಗಳದುರಾಗತವನು ||ಲಾ|| ಅ- ಪ॥
   ದುರುಳದನುಜರೆಲ್ಲಕೂಡಿ| ಸುರಪತಿಯನು ಕಾಡಿಸುವರು|
   ವರಪತಿವ್ರತೆಯರ ಕೆಡಿಸು | ತಿರುವ ಪರಿಯನೊರೆವೆನೀಗ ||ಲಾಲಿಸೈ||
   ಯಜ್ಞಯಾಗಗಳನು ತಡೆದು | ಭಗ್ನಮಾಡುತಿರುವರವರ|
   ನಿಗ್ರಹಕ್ಕೆಬೆದರುತಿಹರು | ಯಜ್ಞಗೈವರಿಲ್ಲವಯ್ಯ ||ಲಾಲಿಸೈ||
   ಭವವಿದೂರ ದೇವದೇವ | ಪ್ರವಿಮಲಾತ್ಮಸಾಧುಪೋಷ|
   ಶಿವರಾಮದಾಸವಿನುತ | ಅವಧರಿಸು ಮಹಾನುಭಾವಾ ||ಲಾಲಿಸೈ||

ಭಗವಂತನೆ! "ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾ೦||
           ಧರ್ಮಸಂಸ್ಥಾಪನಾರ್ಥಾಯ| ಸಂಭವಾಮಿ ಯುಗೇ ಯುಗೇ॥”

       ಎಂಬ ನಿನ್ನ ಸನಾತನ ಧರ್ಮವಾಕ್ಯವು ಈ ಸಂದರ್ಭದಲ್ಲಿ ನನ್ನ
ನೆನಪಿಗೆ ಬಂದಿರುತ್ತದೆ. ಲಕ್ಷ್ಮೀರಮಣಾ! ದುಷ್ಟರನ್ನು ಶಿಕ್ಷಿಸುವು
ದಕ್ಕೂ, ಶಿಷ್ಟರನ್ನು ರಕ್ಷಿಸುವದಕ್ಕೂ ಧರ್ಮರನ್ನು ನೆಲೆಗೊಳಿಸುವು
ದಕ್ಕೂ ನೀನಲ್ಲದೆ ಮತ್ತಾರಿರುವರು! ಅನಂತಾ! ನಿನ್ನಂತರಂಗದಲ್ಲಿ
ಸಂಕಲ್ಪಿಸಿದೆಯಾದರೆ, ಅಣುಮಾತ್ರವಾದ ಸಣ್ಣ ಪದಾರ್ಥವೇ ಬ್ರಹ್ಮಾಂಡ
ವಾಗಿ ಪರಿಣಮಿಸುವುದು. ನಿನ್ನಪ್ಪಣೆಯಾದರೆ ಕ್ಷಣಮಾತ್ರದಲ್ಲಿಯೇ
ಮೇರುಪರ್ವತವುಕೂಡಾ ತೃಣಮಾತ್ರವಾಗುವುದು ! ದೇವಾ ! ನೀನು
ಸ್ವತಂತ್ರನು! ಸರ್ವಾವ್ಯಾದಕನು! ಸರ್ವಾಂತರ್ಯಾಮಯು! ಸರ್ವತಂ
ತ್ರ ಸ್ವತಂತ್ರನು! ಸರ್ವಾಧಿಕಾರ ಸಂಪನ್ನನು! ಜಗದೇಕ ಚಕ್ರವರ್ತಿ
ಯು! ನಿನ್ನಿಷ್ಟನಿದ್ದಂತೆ ನಡಿಸು! ನಿನ್ನ ಚಿತ್ತವು !! ನಮ್ಮ ಭಾಗ್ಯವು !!!

ವಿಷ್ಣುವು:-ನಾರದಾ ! ನಿನ್ನ ಮನೋಭಾವವು ನಿಷ್ಕಳಂಕವಾ
ದುದು ! ನೀನು ಧನ್ಯತಮನು ! ನಿನ್ನಿಷ್ಟವನ್ನು ನಾನರಿತೆನು. ಹಾಗೆ
ಯೇ ನಡಿಸುವೆನು!
        ನಾರದ:-ಮಹದಾಜ್ಞೆ|