ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
89

ಭಕ್ತಿಯು ಬೆಳೆದಂತೆ ಅವರಲ್ಲಿ ಅರ್ಪಣ ಭಾವವೂ ತುಂಬ ಬೆಳೆಯಿತು. ಅದರ ಫಲವಾಗಿ, ಶಿಲುಬೆಯನ್ನೇರಿದಾಗ ಕ್ರಿಸ್ತ ಮಹಾತ್ಮನು “ನಿನ್ನ ಬಯಕೆಯಂತೆ ಆಗಲಿ!" (Let Thy will be done!) ಎಂದು ಉಸುರಿದ ಮೇರೆಗೆ ಬಸವಣ್ಣನವರೂ ಕೂಡ :
"ಮಾಡುವಾತ ನಾನಲ್ಲವಯ್ಯಾ ! ನಿನಗೆ ನೀ ಮಾಡಿಕೋ' ಎಂದು ತಮ್ಮ ಆತ್ಮಾರ್ಪಣಭಾವವನ್ನು ಕೊನೆಕೊನೆಗೆ ವ್ಯಕ್ತಮಾಡಿರುವರು. ಈ ಭಾವವು ಅವರಲ್ಲಿ ತುಂಬ ಬೆಳೆದ ಮೂಲಕ, “ಭಗವದಿಚ್ಚೆಯಂತಾಗಲಿ ! ಈಶಸಂಕಲ್ಪ ನೆರವೇರಲಿ ! ಎಂದು ಬಗೆದು ಈ ಸಂದರ್ಭದಲ್ಲಿ ತಮ್ಮ ಬಯಕೆಯನ್ನು ನಡೆಯಿಸಿರಲಿಕ್ಕಿಲ್ಲ. ಮೇಲಾಗಿ ಬಸವಣ್ಣನವರ ಅರಿವಿನ ಕಂಗಳಿಗೆ, ಮುಂದೆ ಒದಗುವ ಅನಾಹುತವು ಕಾಣಿಸಿರಬೇಕು, ಈಶಸಂಕಲ್ಪವು ತಿಳಿದಿರಬೇಕು. ಅದಕ್ಕಾಗಿಯೇ ಅವರು ಸಂಗನೆಡೆ ತೆರಳಿರಬೇಕು. “ಹರ ನಿನ್ನ ಮಾಯೆ ತಿಳಿಯದಯ್ಯಾ! ಇದೇ ನಿಜ.