ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
101

ಕೂಡಲಸಂಗಮದೇವರ ಭಕ್ತಿಯ ಚಿಹ್ನ
ಎನ್ನಲ್ಲಿವಿಲ್ಲವಾಗಿ, ಆನು ಡಂಭಕ ಕಾಣಿರೇ !
ಎಂದವನು ಹಾಡತೊಡಗಿದರು.
ಹೀಗಿದ್ದರೂ ಜನರು ಬಸವಣ್ಣನವರ ಭಕ್ತಿಯನ್ನು ಕಂಡು ಅವರ ಚರಣಕ್ಕೆ ಎರಗತೊಡಗಿದರು. ಅವರನ್ನು ತುಂಬ ಹೊಗಳತೊಡಗಿದರು. ಅದರ ಫಲವಾಗಿ ಅವರಿಗೆ ತಿಳಿಯದೆಯೆ ಅವರಲ್ಲಿ ಅಹಂಕಾರವು ತಲೆದೋರಿತು. ಅದರ ಅಸ್ತಿತ್ವದ ಅರಿವಾದೊಡನೆ ಬಸವಣ್ಣನವರು ತುಂಬ ಮರುಗಿದರು. ತಮ್ಮ ಹೊಗಳಿಕೆಯನ್ನು ತಡೆಯಲು ಸಂಗನನ್ನು ಅಂಗಲಾಚಿ ಬೇಡಿಕೊಂಡರು.
ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ,
ಬೆಚ್ಚನೆ ಬೆರೆವೆ ನಾನು : ಕೆಚ್ಚು ಬೆಳಿಯಿತ್ತಯ್ಯಾ.
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು ಬೆಳ್ಳುಕನ ಮಾಡಿ,
ಬೆಳುಗಾರನಂತೆ ಮಾಡು, ಕೂಡಲಸಂಗಮದೇವ,
ಎನ್ನಲ್ಲಿ ಭಕ್ತಿ ಸಾಸವೆಯ ಪಡ್ಭಾಗದನಿತಿಲ್ಲ :
ಎನ್ನ ಭಕ್ತನೆಂಬರು, ಎನ್ನ ಸಮಯಾಚಾರಿಯೆಂಬರು.
ನಾನೇನು ಪಾಪವ ಮಾಡಿದೆನೋ?
ಬೆಳೆಯದ ಮುನ್ನವೆ ಕೊಯ್ದರೆ ? ಹೇಳಾ, ಅಯ್ಯಾ !
ಇರಿಯದ ವೀರ ! ಇಲ್ಲದ ಸೊಬಗವ
ಎಲ್ಲಾ ಒಡೆಯರು ಏರಿಸಿ ನುಡಿವರು.
ಎನಗಿದು ವಿಧಿಯ ಕೂಡಲಸಂಗಮದೇವ.
ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ
ಎನ್ನ ಹೊಗಳತೆ ಎನ್ನ ನಿಮ್ಮೆಲ್ಗೊಂಡಿತ್ತಲ್ಲಾ.
ಅಯ್ಯಾ, ನಿಮ್ಮ ಮನ್ನಣೆಯೇ ಮಸೆದಲಗಾಗಿ ತಾಗಿತ್ತಲ್ಲಾ,
ಅಯ್ಯೋ ! ನೊಂದೆನು, ಸೈರಿಸಲಾರೆನು,
ಕೂಡಲಸಂಗಮದೇವಾ, ನಿನೆನಗೊಳ್ಳಿದನಾದರೆ,
ಎನ್ನ ಹೊಗಳತೆ ಗಡ್ಡ ಬಾರಾ, ಧರ್ಮೀ !