ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

132
ಪೃಥ್ವಿಯನ್ನೂ ಪಾವನ ಮಾಡುವರು. ಅವರು ತೀರ್ಥಗಳನ್ನು ಹೆಚ್ಚಿನ ತೀರ್ಥಗಳನ್ನಾಗಿ ಮಾಡಿಬಿಡುವರು. ಏಕೆಂದರೆ ಅವರು ಭಗವನ್ಮಯರು, ಭಗವಂತನ ಸಾಕ್ಷಾತ್ಕಾರ ಪಡೆದವರು. ಇಂಥ ಭಕ್ತರ ಪಿತರರು ಆನಂದ ಪಡುವರು. ಅವರನ್ನು ನೋಡಿ ದೇವತೆಗಳು ಆನಂದದಿಂದ ಕುಣಿಯುವರು. ಇದರಿಂದ ಪೃಥ್ವಿಯು ಸನಾಥವಾಗುವದು (ಸಂರಕ್ಷಿಸಲ್ಪಡುವದು). ಅವರಲ್ಲಿ ಜಾತಿ, ವಿದ್ಯಾ, ರೂಪ, ಕುಲ, ಧನ, ಕ್ರಿಯೆ ಇತ್ಯಾದಿಗಳ ಭೇದಗಳು ಇರುವದಿಲ್ಲ, ಏಕೆಂದರೆ ಅವರೆಲ್ಲ ಭಗವಂತನ ಮಕ್ಕಳೇ ಇರುವರು.'೨೮
ಈ ಹಿರಿಯರ ಮಾತುಗಳಲ್ಲಿ ಅಪ್ರತಿಮವಾದ ಸಾಮ್ಯವಿರುವದು. ಏಕೆ ಅಂದರೆ ಶ್ರೀ ಗುರುದೇವ ರಾನಡೆಯವರು ಅರುಹಿದ ಮೇರೆಗೆ
“ಎಲ್ಲ ದೇಶಕಾಲಗಳ ಅನುಭಾವಿಗಳು ಒಂದೇ ಅಧ್ಯಾತ್ಮಿಕ ಜಗತ್ತಿನ ನಿವಾಸಿಗಳಿರುವದರಿಂದ ಅವರು ಒಂದೇ ಬಗೆಯ ಮಾತನ್ನು ಆಡುವರು. ಅವರಲ್ಲಿ ಜಾತೀಯ, ಮತೀಯ, ಹಾಗೂ ರಾಷ್ಟ್ರೀಯ ಪೂರ್ವಗ್ರಹಗಳು ನೆಲೆಸಿರುವದಿಲ್ಲ' The Mystics of all ages and countries have spoken the same language, as they are denizens of the same spiritual world. There are no racial, no communal, no national prejudices among them.
————
೨೮. ಭಸೂ, ಪು. ೨೧
9. P.G.H. Intro. P.2