ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
135

ಸುಧಾರಣೆಗಳು ಅವರ ಮಹಾಕಾರ್ಯದ ಒಂದು ಪ್ರಧಾನ ಅಂಗವಾದರೆ, ಜನರ ಬೌದ್ಧಿಕ ಜೀವನದಲ್ಲಿ ಕ್ರಾಂತಿಯನ್ನು ಎಸಗಬಲ್ಲ ಅವರ ಉಜ್ವಲ ಸ್ಫೂರ್ತಿಪ್ರದ ಸಾಹಿತ್ಯ ನಿರ್ಮಿತಿಯು ಅದರ ಇನ್ನೊಂದು ಪ್ರಧಾನ ಅಂಶ, ಪ್ರಭುವಿನ ಸಾಹಿತ್ಯದಂತೆ ಬಸವಣ್ಣನವರ ಸಾಹಿತ್ಯವೂ “ಒಂದು ಕಲ್ಪವೃಕ್ಷ'. ಅದು ಅನುಭಾವದ ಅಮೃತಸಾಗರದಲ್ಲಿ ನಿಂತಿದೆ. ಅಲ್ಲಿಂದ ಭಕ್ತಿಯುತ ಶಾಂತಿರಸವನ್ನು ಹೀರಿದೆ. ಅದಕ್ಕೆ ದಿವ್ಯ ಕಲ್ಪನೆಯ ಬಗೆಬಗೆಯ ರೆಂಬೆಗಳಿವೆ. ಅಲಂಕಾರಗಳ ಬಣ್ಣ ಬಣ್ಣದ ಪಲ್ಲವವಿದೆ. ಅದರಲ್ಲಿಯ ಸದ್ಭಾವದ ಸದ್ಗುಣದ ದೇಟುಗಳಿಗೆ ಅಂಟಿಕೊಂಡ ಸುಜ್ಞಾನದಲಗಳ ಪುಷ್ಪಗಳು, ಭಕ್ತಿಮಕರಂದವನ್ನು ಎಲ್ಲೆಲ್ಲಿಯೂ ಬೀರಲಿವೆ ಮತ್ತು ಆನಂದಾಮೃತದಿಂದ ನಳನಳಿಸುವ ಅನುಭಾವದ ತನಿವಣ್ಣುಗಳನ್ನು ಅದು ಭಕ್ತರಿಗೆ ವಿಪುಲವಾಗಿ ನೀಡಲಿದೆ. ಆದರೆ ಅವನ್ನು ಬೇಡಲು ಬಗೆಯು ಬಯಸಬೇಕು, ಪಡೆಯಲು ಕೈಗಳು ಹೆಣಗಬೇಕು. ಅಂದರೆ ಆ ಅಮೃತ ಫಲವು ಎಲ್ಲರಿಗೆ ಆ ಅಮರ ಆನಂದವನ್ನು ನೀಡದಿರದು. ಎಲ್ಲರೂ ಅದನ್ನೆಯೇ ಬಲವಾಗಿ ಬಯಸಬೇಕು, ಪಡೆಯಲು ಹಗಲಿರುಳು ಹೆಣಗಬೇಕು. ಅದನ್ನು ದಯಪಾಲಿಸುವ ಸಾಮರ್ಥ್ಯವನ್ನು ಈ ಸುರತರುವು ಪಡೆದಿರುವದು.
ಹಿರಿಯರ ಹಿರಿಮೆಯನ್ನು ಹಿರಿಯರೇ ಚೆನ್ನಾಗಿ ಅರಿಯಬಲ್ಲರು, ಅರುಹಬಲ್ಲರು. ಆದುದರಿಂದ ಅಂಥ ಕೆಲ ಹಿರಿಯರು ಅರುಹಿದ ಬಸವಣ್ಣನವರ ಹಿರಿಮೆಯನ್ನು ಮುಂದೆ ಕಾಣಿಸಲಿರುವೆ. ಮೊದಲು ಸಂತಕವಿ ಹರಿಹರನು, ಶರಣರ ಮುಖಾಂತರ ಅರುಹಿದ ಬಸವಣ್ಣನವರ ಹಿರಿಮೆಯನ್ನು ಅರಿತುಕೊಳ್ಳುವಾ ! ಅದರಲ್ಲಿ ಬಸವಣ್ಣನವರ ಹಿರಿಯ ವ್ಯಕ್ತಿತ್ವದ ಯಥಾರ್ಥ ದರ್ಶನವಾಗದಿರದು. ಶರಣರು ಬಸವಣ್ಣನವರನ್ನು ಹೀಗೆ ಕೊಂಡಾಡುವರು :
"ಎಲೆ ಬಸವ, ಬಸವಣ್ಣ... ಕೇಳಯ್ಯ, ನಿಮ್ಮ ನೇಮವಿದಾರ್ಗುಂಟು! ಗುರುಲಿಂಗದೊಳೆರಡಿಲ್ಲದಿಪ್ಪೆ, ಶರಣಂ ಸಂಗನೆಂದೆ ಕಾಣ್ಪೆ ಬಂದ ಭಕ್ತರಂ ಅತ್ಯಾದರಿಪೆ. ಬಪ್ಪ ಭಕ್ತರಂ