ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

6

ಎಂದು ಪ್ರಭುದೇವರು 'ಆಶಾಪಾಶದಲ್ಲಿ ಸಿಲುಕಿ, ಕಾಮಕ್ರೋಧಪರಾಯಣರಾದ' ಅಂದಿನ ಹಿರಿಯರನ್ನು ಬಣ್ಣಿಸಿರುವರು.

ಒಂದೆಡೆ ಇಂಥ ಸುಸಂಸ್ಕೃತ ಹಿರಿಯರ ದಾಂಭಿಕ ಅನಾಚಾರವು ಬೆಳೆದಂತೆ, ಇನ್ನೊಂದೆಡೆ ಅಸಂಸ್ಕೃತ ಸಾಮಾನ್ಯರ ಮೂಢ ದುರಾಚಾರವು ಪ್ರಬಲವಾಗಿದ್ದಿತು. ಅದನ್ನು ಬಸವಣ್ಣನವರು ತಮ್ಮ ಕೆಲವು ವಚನಗಳಲ್ಲಿ ಚೆನ್ನಾಗಿ ಚಿತ್ರಿಸಿರುವರು.

ಹಾಳು ಮೊರಡಿಗಳಲ್ಲಿ, ಊರ ದಾರಿಗಳಲ್ಲಿ,
ಕೆರೆ, ಬಾವಿ, ಹೂ, ಗಿಡ, ಮರಂಗಳಲ್ಲಿ ;
ಗ್ರಾಮಮಧ್ಯದಲ್ಲಿ, ಚೌಪಥ ಪಟ್ಟಣಪ್ರದೇಶದಲ್ಲಿ.
ಹಿರಿಯಾಲಯದ ಮರದಲ್ಲಿ, ಮನೆಯ ಮಾಡಿ,
ಕೆರೆಮ್ಮೆಯ, ಹಸುಗೂಸು, ಬಸುರಿ, ಬಾಣತಿ,
ಕುಮಾರಿ, ಕೊಡಗೂಸೆಂಬವರ ಹಿಡಿದು ತಿಂಬ ತಿರಿದುಂಬ,
ಮಾರಯ್ಯ, ಬೀರಯ್ಯ, ಕೇರಚಗಾವಿಲ, ಅಂತರಬೆಂತರ,

'ಕಾಳಯ್ಯ, ಮಾರಯ್ಯ, ಗೂಳಯ್ಯ, ಕೇತಯ್ಯಗಳೆಂಬ... ನೂರು ಮಡಕೆ' ಗಳಿಗೆ ಜನರು ನಡೆದುಕೊಳ್ಳುತ್ತಿದ್ದರು. ಅವರು ಮಾರಿಕವ್ವೆಯನೊಂತು ಕೊರಳಲ್ಲಿ ಕಟ್ಟಿಕೊಂಬರು'; 'ಮೊರನ ಗೋಟಿಗೆ ಬರ್ಪ ಕಿರುಕುಳ ದೈವಕ್ಕೆ ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು. ಕುರಿ ಸತ್ತುಕಾವುದೇ ಹರ ಮುಳಿದವರ?' ಆದರೆ ಇದನ್ನು ಲೆಕ್ಕಿಸುವರಾರು? 'ಅರಗು ತಿಂದು ಕರಗುವ' ಇಂಥ ದೈವಗಳೇ ಎಲ್ಲೆಲ್ಲಿಯೂ ಅಂದು ಮೆರೆಯುತ್ತಿದ್ದವು. ಇನ್ನೂ ಮೆರೆಯಲಿರುವವು.

ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ !
ಹಣಿಗೆ ದೈವ, ಬಿಲ್ಲನಾರಿ ದೈವ ಕಾಣಿರೋ !
ಕೊಳಗ ದೈವ, ಗಿಣ್ಣಿಲು ದೈವ ಕಾಣಿರೋ !
ದೈವದೈವವೆಂದು ಕಾಲಿಡಲಿಂಬಿಲ್ಲಾ!
ದೈವನೊಬ್ಬ ಕೂಡಲಸಂಗಮದೇವ !

_____________________
೩. ಪ್ರ. ಪ್ರ. ಪು. ೩೯-೪೨