ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
26

ಈ ಕಾಗದವನ್ನು ಓದಿದೊಡನೆ ಅವರಿಗೆ ಕೊಂಚ ಸಮಾಧಾನವಾಯಿತು. ಬಸವಣ್ಣನನ್ನು ಅವನ ಕಾಲುಗಳು ಒಂದು ಕಿರಿದಾರಿಯಿಂದ ಒಯ್ದ ಮೂಲಕ, ಹಿರಿದಾರಿಗಳಿಂದ ತೆರಳಿದ ಆಳುಗಳು ಆತನನ್ನು ಕಾಣದೆ ಮರಳಿ ಬಂದರು. ಬಸವಣ್ಣನು ಒಮ್ಮೆಲೆ ಊರು ಬಿಟ್ಟು ತೆರಳಿದ ಸುದ್ದಿಯು ಊರಲ್ಲೆಲ್ಲ ಹಬ್ಬಿದ ಒಡನೆ ಆತನ ನೆಚ್ಚಿನ ಗೆಳೆಯರಿಗೆ- ವಿಶೇಷವಾಗಿ ಕೃಷ್ಣನಿಗೆ-ಅದನ್ನು ಕೇಳಿ ತುಂಬ ವ್ಯಸನವಾಯಿತು. ಆದರೆ ಊರಲ್ಲಿಯ ಹಿರಿಯರಿಗೆ ಸಂತೋಷವಾಯಿತು. "ಮದ್ದಿಲ್ಲದೆ ಬೇನೆಯಳಿಯಿತು. ಈ ಹಾಳು ಹುಡುಗ ನಮ್ಮ ಮಕ್ಕಳ ತಲೆಯನ್ನು ತಿರುಗಿಸಬಹುದಾಗಿತ್ತು! ಪೀಡೆಯೇ ಹೋಯಿತು! ಎಂದು ಬಗೆದು ಸಂತಸದ ಉಸಿರನ್ನು ಎಳೆದರು ಅವರು.

ಸಂಗನನ್ನು ನೆನೆಯುತ್ತ ನಡೆದ ಬಸವಣ್ಣನಿಗೆ ತನ್ನ ದೇಹದ ಪರಿವೆಯೇ ಇರಲಿಲ್ಲ. ಅವನು ಹಗಲೆಲ್ಲ ಇರುಳೆನ್ನಲಿಲ್ಲ, ಕೂಳೆನ್ನಲಿಲ್ಲ, ನೀರೆನ್ನಲಿಲ್ಲ. ಸತತವಾಗಿ ದಾರಿ ನಡೆದು ಕೂಡಲಸಂಗಮನನ್ನು ತಲುಪಿದ. ಅದೇ ಬೆಳಗು ಆಗಿತ್ತು, ಆರುಣನ ಹೊಂಬೆಳಕು ಗುಡಿಯ ಗೋಪುರವನ್ನು ಬೆಳಗುತ್ತಿತ್ತು. ಊರೊಳಗಿಂದ ಹಾದು ಬಸವಣ್ಣನು ನೇರವಾಗಿ ಸಂಗನ ಮಂದಿರಕ್ಕೆ ಬಂದ. "ಸಂಗಾ, ಸಂಗಾ! ಎಂದು ಆತನು ಸಾಷ್ಟಾಂಗವೆರಗಿದನು. "ದೇವದೇವ! ಅನಾಥನಾಥ!... ತಾಯ್ತಂದೆ ಬಂಧುಬಳಗವೇ ಕುಲವೇ! ಛಲವೇ! ತವರೇ! ಕಣೇ! ಗತಿಯೇ! ಮತಿಯೇ ಪುಣ್ಯವೇ! ಪ್ರಾಣವೇ! ಕಾವುದು! ಎಂದು ಅನನ್ಯಭಾವದಿಂದ ಪ್ರಾರ್ಥಿಸಿದ. ಆಗ ಬೆಳಗಿನ ಪೂಜೆ ನಡೆದಿತ್ತು ಮುನಿಗಳೊಬ್ಬರು ಸಂಗಮೇಶನ ಪೂಜೆಯಲ್ಲಿ ತಲ್ಲೀನರಾಗಿದ್ದರು. ಬಸವಣ್ಣನನ್ನು ಕಂಡೊಡನೆ ಅವರೆಂದರು: "ಬಾರಯ್ಯಾ, ಬಾ ಬಸವ. ಕಾಯುತಿರುವನು ದೇವ!” ಮುನಿಗಳು ತಮ್ಮ ಪ್ರೀತಿಯ ಕಂದನನ್ನು ಕರೆದಂತೆ ಬಸವಣ್ಣನನ್ನು ಕರೆದರು. ಮುನಿಗಳನ್ನು ಕಂಡೊಡನೆ ಬಸವಣ್ಣನು ಸೋಜಿಗಗೊಂಡ, ಅವರ ಮಾತನ್ನು ಕೇಳಿ ಅವನ ಅಚ್ಚರಿಯು ಮತ್ತಷ್ಟು ಬೆಳೆಯಿತು. ಬಾಗೇವಾಡಿಯ ಶಿವಾಲಯದಲ್ಲಿ ತಾನು