ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಲೆ:ಮೂರು

ಸಂಗಮನಾಥನ ದೇವಸ್ಥಾನದಲ್ಲಿ

ಆಶ್ರಮವಾಸ:
ಈ ಬಗೆಯಾಗಿ 'ಬಾಗೇವಾಡಿಯ ಭಾಗ್ಯ ಸಂಗಮಕ್ಷೇತ್ರವನ್ನು ಸೇರಿತು... ಅಲ್ಲಿ ಕೃಷ್ಣಾನದಿ ವಿಶಾಲವಾಗಿ ಗಂಭೀರವಾಗಿ ಹರಿಯುತ್ತ ಸಂಗಮನಾಥನ ಪಾದೋದಕವಾಗಿ ಪರಿವರ್ತನೆ ಹೊಂದಿ, ಭಕ್ತರನ್ನು ಪುನೀತರನ್ನಾಗಿ ಮಾಡುತ್ತದೆ. ಇತ್ತ ಕಡೆಯಿಂದ ಮಲಾಪಹಾರಿ ಕಿರುದೆರೆಗಳಿ೦ದ ಕೂಡಿ ಕಿರುದೊರೆಯಾಗಿ ಹರಿಯುತ್ತ ಕೃಷ್ಣವೇಣಿಯೊಡನೆ ಐಕ್ಯಳಾಗಿ ತನ್ನನ್ನು ತಾನು ಅರಿಯದೆ, ಕೃಷ್ಣವೇಣಿಯಾಗಿಯೇ ಪ್ರವಹಿಸುತ್ತಾಳೆ. ಸುತ್ತಲು ಫಲವತ್ತಾದ ಭೂಮಿ, ದೂರದಲ್ಲಿ ಸುತ್ತಲು ವನಶ್ರೇಣಿಯನ್ನು ಧರಿಸಿನಿಂತಿರುವ ಪರ್ವತಶ್ರೇಣಿ, ನದಿಯ ಇರ್ಕಡೆಗಳಲ್ಲಿಯೂ ಪೈರುಪಚ್ಚೆಗಳು. ಈ ಮನೋಹರ ಸನ್ನಿವೇಶದಲ್ಲಿ ಸಂಗಮನ ಎಡೆಯಲ್ಲಿ ಸ್ವಲ್ಪ ತಿಟ್ಟಿನ ಮೇಲೆ ಸಣ್ಣದೊಂದು ಗುಡಿ, ಎತ್ತರದ ಗೋಪುರದ ವೈಖರಿಯಿಲ್ಲ. ಸುಕನಾಸಿ ನವರಂಗಗಳ ಶಿಲ್ಪಚಾತುರ್ಯವಿಲ್ಲ. ಸಾಮಾನ್ಯವಾದ ಮಂಟಪ, ಆ ಮಂಟಪದಲ್ಲಿನ ಬಸವಣ್ಣನ ವಿಗ್ರಹ ಚಿಕ್ಕದು... ಆ ಬಸವಣ್ಣನಿಗೆ ಎದುರಾಗಿ ಗರ್ಭಗುಡಿಯಲ್ಲಿ ಹೆಚ್ಚುಕಡಿಮೆ ನೆಲದ ಮಟ್ಟದಲ್ಲಿಯೇ ಪಾಣಿಪೀಠ ಮತ್ತು ಸಣ್ಣದೊಂದು ಲಿಂಗ, ಆತನೇ ಕೂಡಲಸಂಗಮನಾಥ!... ಬಸವಣ್ಣನವರ ಮನಃಪ್ರೇರಕ... ಸೂತ್ರಧಾರ!೧೦

ಈ ದೇವಾಲಯದ ನೆರೆಯಲ್ಲಿ ಚಿಕ್ಕದೊಂದು ಆಶ್ರಮವಿದ್ದಿತು. ಕ್ಷೇತ್ರದ 'ಸ್ಥಾನಪತಿ' ಗಳಾದ ಮೇಲ್ಕಾಣಿಸಿದ ಈಶಾನ್ಯ ಮುನಿಗಳೇ೧೧ ಅದನ್ನು ನಡೆಸುತ್ತಿದ್ದರು. ಗುಲಾಬಿ ಕಂಟಿಗಳಿಂದ ಸುತ್ತುವರಿದ ಅಂದವಾದ


೧೦. ಭ.ಪ. ಪು. ೩೦-೩೧
೧೧. ಇವರನ್ನು 'ಜಾತವೇದ' ರೆಂದೂ ಕರೆಯುತ್ತಿದ್ದರು.