ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
35

ಎಲವೋ, ಎಲವೋ, ಪಾಪಕರ್ಮವ ಮಾಡಿದವನೇ !
ಎಲವೋ, ಎಲವೋ, ಬ್ರಹ್ಮತ್ಯವ ಮಾಡಿದವನೇ !
ಒಮ್ಮೆ 'ಶರಣೆ'ನ್ನಲವೋ!
ಒಮ್ಮೆ 'ಶರಣೆಂದರೆ ಪಾಪಕರ್ಮ ಓಡುವವು.
ಓರ್ವಂಗೆ ಶರಣೆನ್ನು ! ನಮ್ಮ ಕೂಡಲಸಂಗಮದೇವಂಗೆ :
ಒಮ್ಮೆ ಬಸವಣ್ಣನೀರು ತರಲು ನದಿಗೆ ತೆರಳಿದಾಗ, ಅಲ್ಲಿ ಶಂಭೋ ಹರಹರ !' ಎಂದು ಗರ್ಜಿಸಿ ನದಿಯಲ್ಲಿ ಮರಮರಳಿ ಮುಳುಗಿ ಏಳುವ ಕೆಲ ಹಿರಿಯರನ್ನು (?) ಕಂಡ. ನೀರಿನ ಮೇಲೆ ಬಂದೊಡನೆ ಅವರ ಕಂಗಳು ಅಲ್ಲಿ ಮೀಯುತ್ತಿರುವ ಹೆಂಗಳೆಯರೆಡೆ ಹೊರಳುತ್ತಿದ್ದವು. ಅದನ್ನು ಕಂಡ ಖಂಡ ತುಂಡಾಗಿ ಬಸವಣ್ಣನೆಂದ :
ತೊರೆಯ ಮೀವಣ್ಣಗಳಿರಾ ! ತೊರೆಯ ಮೀವ ಸ್ವಾಮಿಗಳಿರಾ !
ತೊರೆಯಿಂ ಭೋ ! ತೊರೆಯಿಂ ಭೋ!
ಪರನಾರಿಯರ ಸಂಗ ತೊರೆಯಿಂ ಭೋ!
ಪರಧನದಾಮಿಷ ತೊರೆಯಿಂ ಭೋ !
ಇವ ತೊರೆಯದೆ ಹೋಗಿ ತೊರೆಯ ಮಿಂದರೆ
ಬರುದೊರೆ ಹೋಹುದು, ಕೂಡಲಸಂಗಮದೇವಾ!
ಸಂಗಮನಾಥನಿಗೆ ಎಲ್ಲ ಜಾತಿಯ ಜನರು ನಡೆದುಕೊಳ್ಳುತ್ತಿದ್ದರು. ಆದುದರಿಂದ ಆತನ ದರುಶನ ಆರಾಧನೆಯನ್ನು ಕುರಿತು ಮುನಿಗಳು ಕೆಲ ನಿಯಮಗಳನ್ನು ಮಾಡಿದ್ದರು. ಎಲ್ಲರು ಹೊರವಲಯದಲ್ಲಿ ನಿಂತು ಆತನನ್ನು ವಂದಿಸಬೇಕು. ಆತನಿಗೆ ಪತ್ರಪುಷ್ಪಗಳನ್ನು ಏರಿಸಬಯಸುವವರು ಸ್ನಾನ ಮಾಡಿ ಒದ್ದೆಯಿಂದ ಒಳವಲಯದಲ್ಲಿ ಬರಬೇಕು ಎಂಬುದು ಅಲ್ಲಿ ಬಳಸಲಾದ ರೂಢಿಯಾಗಿದ್ದಿತು. ಅಲ್ಲಿ ಭಕ್ತರೆಲ್ಲ ಅದನ್ನು ತಪ್ಪದೆ ಪಾಲಿಸುತ್ತಿದ್ದರು. ಒಂದು ದಿನ ವೈದಿಕರೊಬ್ಬರು ಸಂಗನಿಗೆ ರುದ್ರಾಭಿಷೇಕ ಮಾಡಿ ಯಥಾಸಂಗವಾಗಿ ಷೋಡಶ ಉಪಚಾರಗಳಿಂದ ಕೂಡಿದ ಪೂಜೆಯನ್ನು ಸಲ್ಲಿಸಿ ಅದೇ ಹೊರಬಂದಿದ್ದರು. ತಾವು ಅಂದವಾಗಿ ಮಾಡಿದ ಪೂಜೆಯನ್ನು ಎಲ್ಲರೂ