ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

41

ಶರಣರ ಪುರುಷದ ಕಣಿಯಾಗಿ ನಿತ್ಯಸಖಿಯಾಗಿ... ಭಕ್ತರಂ ಗೆಲಿಸಿ, ಪ್ರತ್ಯಕ್ಷಂಗಳಂ ತೋರಿ, ಲೌಕಿಕ ಧರ್ಮಮಂ ಮೀರಿ, ಕಡುನಿಷ್ಠೆಯಿಂ ಹೇರಿ, ಪರಮಸುಖದಿಂದ ಇರ್ಪುದು!೧೬
ಅ೦ದಿನ ಅರುಣೋದಯವು ಬಸವಣ್ಣನಿಗೆ ಹರನ ಕರುಣೋದಯವಾಗಿ ಪರಿಣಮಿಸಿತು. ಆತನು ನಿದ್ರೆಯಿಂದೆದ್ದಾಗ ಆತನ ಮೈಮೇಲೆ ಪುಳಕಂಗಳು, ಕಂಗಳಲ್ಲಿ ಆನಂದಾಶ್ರುಗಳು! ಹೃದಯದಿಂದ ಹರುಷವು ಹೊರಸೂಸುತ್ತಿತ್ತು, ಹರಕರುಣದ ಪ್ರತೀತಿಯನ್ನು ಕಾಣಲು ಬಸವಣ್ಣನು ಕೂಡಲೆ ಅಲ್ಲಿಂದೆದ್ದ, ಪ್ರಾತರ್ವಿಧಿಗಳನ್ನು ಮುಗಿಸಿದ. ಸ್ನಾನವನ್ನು ಮಾಡಿ, ಸಂಗಮೇಶ್ವರನನ್ನು ಭಕ್ತಿಯಿಂದ ಪೂಜಿಸಿದ. ಅನಂತರ ರಂಗಮಂಟಪದಲ್ಲಿ ಹೋಗಿ ನಂದಿಕೇಶ್ವರನನ್ನು ವಂದಿಸಿದ. ಸಾಷ್ಟಾಂಗ ಎರಗಿದ. ಎದ್ದು ನೋಡುವಷ್ಟರಲ್ಲಿ ಆತನ ಕೊಂಬುಗಳ ಮಧ್ಯದಲ್ಲಿ ಬಸವಣ್ಣನಿಗೆ ಒಂದು ದಿವ್ಯ ಲಿಂಗವು ಕಾಣಿಸಿತು. ಅದೇ ಸಂಗನ ಪ್ರಸಾದವೆಂದು ಬಗೆದು, ಅದನ್ನು ಆನಂದದಿಂದ ಸ್ವೀಕರಿಸಿ, ಅಂದು ನಡೆದ ಸೋಜಿಗವಾದ ಸಂಗತಿಗಳನ್ನೆಲ್ಲ ಸದ್ಗುರುಗಳಿಗೆ ಅರುಹಲು ಬಸವಣ್ಣನು ಆಶ್ರಮಕ್ಕೆ ಬಂದನು.
ಈಶಾನ್ಯ ಮುನಿಗಳು ತಮ್ಮ ಅಂತರ್ದೃಷ್ಠಿಯಿಂದ ಇದನ್ನೆಲ್ಲ ಮೊದಲೇ ಅರಿತಿದ್ದರು. ಬಸವಣ್ಣನು ಬಂದು ಅವರನ್ನು ವಂದಿಸಿದೊಡನೆ ಅವರೆಂದರು : ಬಾರಯ, ಬಸವ, ಪಡೆದೆಯಾ ಪ್ರಸಾದವ? ಇನ್ನು ಸಂಗನ ಆಜ್ಞೆಯಂತೆ ನಡೆಯಯ್ಯಾ, ಇಲ್ಲಿಯ ನಿನ್ನ ಸಿದ್ಧತೆಯು ಪೂರ್ಣವಾಯಿತು. ಮುಂದಿನ ಮಹಾಕಾರ್ಯಕ್ಕಾಗಿ ಮಂಗಳವಾಡಕ್ಕೆ ತೆರಳು! ಜಯಜಯಕಾರ ಆಗುವದು! ಸದ್ಗುರುಗಳ ಅಲೌಕಿಕ ಸಾಮರ್ಥ್ಯವನ್ನು ಅರುಹುವ ಈ ಹರಕೆಯ ಭವಿಷ್ಯವಾಣಿಯನ್ನು ಕೇಳಿ ಅವರ ಬಗೆಗಿನ ಬಸವಣ್ಣನ ಆದರವು ನೂರ್ಮಡಿಯಾಯಿತು. ಆದರಭಾವದಿಂದ ಆತನ ಎದೆ ತುಂಬಿಹೋಯಿತು. ಬಾಯಿಂದ ಮಾತೇ

೧೬. ಬ. ರ. ಪು. ೨೨