ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
48

ಬರೆದಂತೆ ಕಾಣುವದು :
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರ್ಕು.
ಹರಿದು ಹೆದ್ದೊರೆಯೆ ಕೆರೆ ತುಂಬಿದಂತಯ್ಯಾ !
ನೆರೆಯದ ವಸ್ತು ನೆರೆವುದು ನೋಡಯ್ಯಾ !
ಅರಸು ಪರಿವಾರ ಕೈವಾರ ನೋಡಯ್ಯಾ !
ಪರಮ ನಿರಂಜನನೆ ಮರೆದ ಕಾಲಕ್ಕೆ
ತುಂಬಿದ ಹರವೆಯ ಕಲ್ಲು ಕೊಂಡಂತೆ
ಕೂಡಲಸಂಗಮದೇವ !

ಒಂದು ದಿನ ಸಿದ್ದರಸನ ಕೈಕೆಳಗೆ ರಾಜಭಾಂಡಾರದ ಅಧಿಕಾರಿಯು ವಂಚಕರಾದ ಗಣಕರಿಗೆ ಕೊಟ್ಟು ಅವರಿಂದ ಸುಳ್ಳು ಲೆಕ್ಕವನ್ನು ಬರೆಯಿಸಿ, ಭಾಂಡಾರದಲ್ಲಿಯ ವಿಪುಲ ಹಣವನ್ನು ಅಪಹರಿಸುವ ಹೊಂಚು ಹಾಕಿದನು. ಈ ಸಂಗತಿಯು ಚಾರರ ಮುಖಾಂತರ ಬಿಜ್ಜಳರಾಯನಿಗೆ ತಿಳಿದೊಡನೆ ಆತನು ಸಿದ್ಧರಸನನ್ನು ಕರೆಯಿಸಿ ಭಾಂಡಾರದ ಲೆಕ್ಕವನ್ನೂ ನಿಲವನ್ನು ಕೂಡಲೇ ಪರೀಕ್ಷಿಸಲು ಆತನನ್ನು ಆಜ್ಞಾಪಿಸಿದನು. ಆ ಮೇರೆಗೆ ಸಿದ್ಧರಸನು ಬಸವಣ್ಣನವರೊಡನೆ ಭಾಂಡಾರಗೃಹಕ್ಕೆ ಒಮ್ಮೆಲೇ ಸಂದರ್ಶನ ಇತ್ತು ಲೆಕ್ಕಪತ್ರಗಳನ್ನೂ ಅಂದಿನ ನಿಲವನ್ನೂ ತನಗೆ ತೋರಿಸಲು ಅಧಿಕಾರಿಗೆ ಹೇಳಿದನು. ಎಲ್ಲ ಬಗೆಯ ಪೂರ್ವಸಿದ್ಧತೆಯನ್ನು ಮಾಡಿಕೊಂಡಿದ್ದ ಅಧಿಕಾರಿಯು ಅವನ್ನು ಸಿದ್ಧರಸನಿಗೆ ತೋರಿಸಿದನು. ಆಯದಲ್ಲಿ ಬೀಯವನ್ನು ಕಳೆದು ಉಳಿದ ನಿಲವನ್ನು ಭಾಂಡಾರದಲ್ಲಿಯ ಹಣವನ್ನು ಎಣಿಸಿ ಅದರಲ್ಲಿಯ ಅಂದಿನ ನಗದು ಹಣವನ್ನು ಸರಿಹೋಲಿಸಲು, ಅವುಗಳಲ್ಲಿ ಹೊಂದಿಕೆಯಾಯಿತು. “ಇದು ಕೀಳು ಕೊಂಡೆಗಾರರ ಕಾಯಕ! ಎಂದು ಬಗೆದು ಸಿದ್ಧರಸನು ಅಲ್ಲಿಂದ ಹೊರಡುವರಲ್ಲಿದ್ದ. ಅಷ್ಟರಲ್ಲಿ ಗಣಕರನ್ನೂ ಅಧಿಕಾರಿಯನ್ನೂ ಸೂಕ್ಷ್ಮದೃಷ್ಟಿಯಿಂದ ನಿರೀಕ್ಷಿಸಿದ ಬಸವಣ್ಣನವರಿಗೆ ಅವರ ಪ್ರಾಮಾಣಿಕತನದ ಬಗೆಗೆ ಸಂದೇಹ ಬಂದಿತು. ಕೂಡಲೇ ಲೆಕ್ಕವನ್ನು ಪರೀಕ್ಷಿಸಲು ತಮಗೆ ಅನುಜ್ಞೆ ನೀಡಬೇಕೆಂದು ಅವರು ಸಿದ್ಧರಸನನ್ನು