ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

64
ಆದುದರಿಂದ ಅವರು ಬಾಳಿದ ಪುರುಷಾರ್ಥದಲ್ಲಿಯ ತಾರತಮ್ಯವನ್ನು ಅರಿತವರು. ಅದಕ್ಕಾಗಿ ಅವರು ಮೊದಲು ಜನತೆಯಲ್ಲಿ ನೆಲೆಸಿದ ಅಜ್ಞಾನಜನ್ಯ ಭ್ರಾಂತಿಯನ್ನು ಅಳಿಸಿ, ಅದರಲ್ಲಿ ಸುಜ್ಞಾನವನ್ನು ಬೆಳೆಸಲು ಯೋಚಿಸಿದರು, ಯತ್ನ ಮಾಡಿದರು. ಜನ ಜೀವನದಲ್ಲಿಯ ಕಸ-ಕಂಟಿಗಳನ್ನು ಕಡಿದು, ಅದನ್ನು ಹಸನು ಮಾಡಿ, ಅದರಲ್ಲಿ ಸವಿಚಾರದ-ಸದ್ಭಾವದ ಬೀಜವನ್ನು ಬಿತ್ತಲು ಬಯಸಿದರು. ತಾವು ಕಂಡುಂಡ ಕೆಲವು ಮಹಾತತ್ತ್ವಗಳನ್ನು ತಮ್ಮ ವಚನಗಳಲ್ಲಿ ಹೊಳೆಯಿಸಿ, ಆ ವಚನಗಳನ್ನು ತಮ್ಮ ಅನುಭವಮಂಟಪ' ಎಂಬ ಸಂಸ್ಥೆಯಲ್ಲಿ ತರಬೇತಿ ಪಡೆದ ಶರಣರ ಮುಖಾಂತರ ಜನತೆಯಲ್ಲಿ ಬೀರಿದರು. ಅವರಿಗೆ ಸರಿಯಾದ ಅರಿವಿನ ಬೆಳಕನ್ನು ನೀಡಿದರು.
ಈ ಜೀವನವು ಕ್ಷಣಭಂಗುರ. ಅದನ್ನು ಏಕೋದೇವನಾದ ಪರಶಿವನ ಸೇವೆಯಲ್ಲಿ ಬಳಸುವುದು ಜೀವನದ ಏಕಮೇವ ಗುರಿ. ಭಕ್ತಿಯು ಮುಕ್ತಿಯ ಜನನಿ, ದಯವು ಧರ್ಮದ ಮೂಲ ಭಕ್ತಿಯಿಂದ ಪರಮಸುಖ, ದಯದಿಂದ ಪರರ ಸುಖ, ಒಂದರಿಂದ ಅಲ್ಲಿಯ ಆನಂದ, ಇನ್ನೊಂದರಿಂದ ಇಲ್ಲಿಯ ಆನಂದ. ಇವು ಬಸವಣ್ಣನವರು ಅರುಹಿದ ಕೆಲವು ಪ್ರಧಾನ ತತ್ತ್ವಗಳು ಅವನ್ನು ಅವರ ಕೆಳಗಣ ವಚನಗಳಲ್ಲಿ ಕಾಣಬಹುದು :
ಸಂಸಾರವೆಂಬುದೊಂದು ಗಾಳಿಯ ಸೊಡರು.
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ !
ಇದ ನೆಚ್ಚಿ ಕೆಡಬೇಡ - ಸಿರಿಯೆಂಬುದ.
ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ.
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟು ಕೊಟ್ಟು
ಸುರಕ್ಷಿತ ಮಾಡುವ ಭರವ ನೋಡಾ.
ಮಹಾದಾನಿ ಕೂಡಲಸಂಗಮದೇವನ ಪೂಜಿಸಿ
ಬದುಕು ವೋ ಕಾಯುವ ನೆಟ್ಟಿದೆ.