ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

68
ಆನೀ ಬಿಜ್ಜಳಂಗಂಜುವೆನೆ, ಅಯ್ಯಾ
ಕೂಡಲಸಂಗಮದೇವಾ !
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿನಗಂಜುವೆನಲ್ಲದೆ ?
ಬಸವಣ್ಣನವರು ಸಮತೆಯನ್ನು ಸಮಾಜದಲ್ಲಿ ನಿರ್ಮಿಸಲು ಯತ್ನಿಸಿದಂತೆ, ಸತ್ಯ-ಸದಾಚಾರಗಳನ್ನೂ ಕಾಯಕ- ಪ್ರೀತಿಯನ್ನೂ ಅದರಲ್ಲಿ ಹುಟ್ಟಿಸಲು ತುಂಬ ಹೆಣಗಿದರು. ಅವುಗಳ ಹಿರಿಮೆಯನ್ನು ಜನರಿಗೆ ಪರಿಪರಿಯಾಗಿ ತಿಳಿಹೇಳಿದರು. 'ದಿಟವ ನುಡಿಯಿರಿ ! ನುಡಿದಂತೆ ನಡೆ ಯಿರಿ ! ಅದರಿಂದ ಅಂತರಂಗ- ಬಹಿರಂಗಗಳನ್ನು ಪರಿಶುದ್ಧಗೊಳಿಸಿರಿ ! ದುಡಿದು ಪಡೆಯಿರಿ, ಪಡೆಯಲು ದುಡಿಯಿರಿ, ನೀಡಲು ಪಡೆಯಿರಿ. ಬರಿ ಇಡಬಲ್ಲ, 'ಆದಾನಂ ಹಿ ವಿಸರ್ಗಾಯ ಸತಾಂ ವಾರಿಮುಚಾಮಿವ.' 'ಹಿರಿಯರು ಮೋಡದಂತೆ, ನೀಡಲು ಪಡೆಯುವರು' ಎಂಬುದನ್ನು ಮರೆಯದಿರಿ.
ಆಯುಷ್ಯವುಂಟು, ಪ್ರಳಯವಿಲ್ಲೆಂದು, ಅರ್ಥವ ಮಡಗುವಿರಿ.
ಆಯುಷ್ಯವು ತೀರಿ, ಪ್ರಳಯ ಬಂದರೆ, ಅರ್ಥವನುಂಬುವರಿಲ್ಲ.
ನೆಲನನಗಿದು ಮಡುಗದಿರಾ ! ನೆಲ ನುಂಗಿದೊಡುಗುಳುವದೇ?
ಕಣ್ಣಲ್ಲಿ ನೋಡಿ, ಮಣ್ಣಿನಲ್ಲಿ ನರಹಿ, ಉಣ್ಣದೆ ಹೋಗದಿರಾ!
ಕೂಡಲಸಂಗನ ಶರಣರಿಗೊಡನೆ ಸವೆಸುವದು.
ದುಡಿದು ನೀಡಲು ಪಡೆಯುವದೆ ಕಾಯಕದ ಹಿರಿಯ ಗುರಿ, ಅಂಥ ಕಾಯಕದಿಂದಲೇ ಕೈಲಾಸದ ವೈಭವ, ಅದರಲ್ಲಿಯೇ ಕೈಲಾಸವ ದಿವ್ಯ ಆನಂದ ! ಎಂಬುದು ಬಸವಣ್ಣನವರ ಬೋಧೆ. ಈ ಬಗೆಯಾಗಿ ಕಾಯಕದಲ್ಲಿ ಅವರು ಸ್ವಾವಲಂಬನ ಸಮರ್ಪಣಗಳ ಸಮನ್ವಯ ಮಾಡಲು ಕಲಿಸಿದರು. ಅದರ ಜತೆಯಲ್ಲಿ 'ಹಿರಿಮೆಯು ಧನದ ರಾಶಿಯಲ್ಲಿರುವುದಿಲ್ಲ ಮನದ ಘನತೆಯಲ್ಲಿ ಇರುವುದು' ಎಂಬುದನ್ನು ಅರುಹಲು ಕೂಡ ಬಸವಣ್ಣನವರು ಮರೆಯಲಿಲ್ಲ. ಅವರ ಆದರ್ಶ