ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
71

ಸೂರ್ಯನುದಯ ತಾವರೆಗೆ ಜೀವಾಳ.
ಚಂದ್ರಮನುದಯ ನೆಯ್ದಿಲೆಗೆ ಜೀವಾಳ.
ಕೂಸರ ಠಾನಿನಲ್ಲಿ ಕೂಟ ಜೀವಾಳ.
ಒಲಿದ ಠಾವಿನಲ್ಲಿ ನೋಟ ಜೀವಾಳವಯ್ಯಾ.
ಕೂಡಲಸಂಗನ ಶರಣರ ಬರವೆನಗೆ ಪ್ರಾಣಜೀವಾಳವಯ್ಯಾ.
ಆದುದರಿಂದ ಅವರು ಪರಶಿವನನ್ನು ಈ ರೀತಿ ಬೇಡಿಕೊಂಡರು:
ಅಯ್ಯಾ! ನಿಮ್ಮ ಶರಣರ ದಾಸೋಹಕ್ಕೆ
ಎನ್ನ ತನು-ಮನ-ಧನ-ವಲಸದಂತೆ ಮಾಡಯ್ಯಾ.
ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ,
ಪರಿಣಾಮಿಸುವಂತೆ ಮಾಡು, ಕೂಡಲಸಂಗಮದೇವಾ.
“ನಗುವುದು ನುಡಿವುದು ಶಿವಭಕರೊಡನೆ, ಶರಣರೊಡನೆ ಮನ ತೆರೆದು ಮಾತಾಡುವದಯ್ಯಾ' ಎಂಬುದು ಅವರು ಮಾಡಿ ಆಡಿದ ಮಾತು.

ಶರಣರ ಬರವನ್ನು ಅವರು ಸದೈವ ಹಾರೈಸುತ್ತಿದ್ದರು. ಶರಣರು ಬಂದರೆ ಅವರು ಆನಂದಭರಿತರಾಗುತ್ತಿದ್ದರು. ಅವರ ಆನಂದಾತಿರೇಕವು ಹೊರಹೊಮ್ಮುವ ಬಗೆಯನ್ನು ಹರಿಹರನು ಚೆನ್ನಾಗಿ ಬಣ್ಣಿಸಿರುವ :

“ಭಾಪು ! ಭಾಗ್ಯವೇ ನರಜನ್ಮದೊಳು ಬಂದು, ಗುರುಕರುಣಮಂ ಹೊತ್ತು ಹರಕಿಂಕರನಾಗಿ, ಶರಣರ ಬರವಂ ಪಡೆದ' ಎಂದುಬ್ಬಿ ಕೊಬ್ಬಿ, ಮುಗಳೊತ್ತಿ ಬಿರಿಬಿರಿದರಳ್ಳು, ಸಕಲ ಶರಣರಂ ನಿಜನಿಳಯದೊಳು ಬಿಜಯಂ ಗೈದು, ಸೈಗೆಡೆದು ನಿಂದು, ಕೈಗಳಂ ಮುಗಿದು, 'ದೇವ ದೇವ, ನಿಮ್ಮಂ ಕಂಡವನಾವಂ ಲೋಕಕ್ಕೆ ಕಣ್ಣಾಗ? ನಿಮ್ಮಡಿಗಳ ಕೆರ್ಪೆo ಪಿಡಿದವನ ಚರಣವಾರ ಮುಕುಟದೊಳು ಬೀಳದು? ದೇವದೇವ, ನಿಮ್ಮನಾರಾಧಿಸಿದ ಮನುಜನ ಕೈ ಆರ ಕೈಯಂ ಕೀಳ್ಳಾಡದು?... ದೇವ, ನಿಮಗೆ ತೊತ್ತಾದಂಗೆ ತೊತ್ತಾಗದ ಲಕ್ಷ್ಮೀಯಾವಳು? ನಿಮ್ಮಂ ಸ್ತುತಿಗೈದ ನಾಲಗೆಗೆ ಮರುಳಾಗದ ಸರಸ್ವತಿಯಾವಳು?... ನಿಮ್ಮ ಪೊಗಳನೆನ್ನಳವಲ್ಲ! ದೇವ, ನಿಮ್ಮೊಳಂ ಸಂಗನೊಳಭೇದಂ, ನಿಮ್ಮ ನೆನೆವುದೆ ಶಿವಚಿಂತೆ, ನೋಡುವುದೇ