ಪುಟ:ಶ್ರೀ ಮದಾನಂದ ರಾಮಾಯಣ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಶ್ರೀಕಾಂಡ, ಸೀತೆಯ ಈ ಮಾತುಗಳನ್ನು ಕೇಳಿ ಶ್ರೀ ರಾಮನು ಬಹಳ ಸಂತೋಷಒಟ್ಟು ದುತ್ತು ಬ್ರಹ್ಮ, ಶಂಕರ, ಇಂದ್ರ ಇವರೇ ಮೊದಲಾದ ಸಮಸ್ತ ದೇವತೆಗಳಿಗೂ ಇನ್ನು ಸ್ವಲ್ಪ ದಿವಸಗಳಲ್ಲಿ ತಾನು ಮಾಡುವ ಅಶ್ವ ಮೇಧಯಾಗಕ್ಕಾಗಿ ಅಯೋ ಧೈಗೆ ಬರುವಂತೆ ವಿಜ್ಞಾಪಿಸಿ, ಶ್ರೀ ರಾಮನು ವಿಮಾನಾರೂಢನಾಗಿ ಭಾಗೀರ ಈ ಮಾರ್ಗದಿಂದ ಹರಿದ್ವಾರಕ್ಕೆ ಬಂದನು. ಅಲ್ಲಿಂದ ಕುರುಕ್ಷೇತ್ರ, ಇಂದ್ರಪ್ಪ ಸ್ಪ, ಮಧುವನ, ವೃಂದಾವನ, ಗೋಕುಲ, ಗೋವರ್ಧನ, ಸೀಪ್ರಾನದಿಯ ಧ ಡದಲ್ಲಿ ರುವ ಅವಂತಿಕಾ ಇದೇ ಮೊದಲಾದ ಸಮಸ್ತ ಕ್ಷೇತ್ರಗಳನ್ನೂ ನೋಡಿ ಕೊಂಡು, ಮಹಾಕಾಲೇಶಿರಸಿಗೆ ವಂದನೆವಾಡಿ, ಹಸ್ತಿನಾಪುರಿಯನ್ನು ನೋಡಿ, ನಾಗಕೂಸದ ದರ್ಶನವನ್ನು ಹಾಂವಿ ಗೋವತಿಯಲ್ಲಿ ಸ್ನಾನಮಾಡಿ, ಶ್ರೀ ದುನು ನೈಮಿಷಾರಣ್ಯಕ್ಕೆ ಬಂದು ಸೇರಿದನು. ಅಲ್ಲಿ ಪ್:ಾಣಿಕರಾದ ಸೂತರು, ಶೋತೃಗಳಾದ ಇತರ ಮಹರ್ಷಿಗಳು ಇವರುಗಳಲ್ಲರನ್ನೂ ಪೂಜಿಸಿ, ಬ್ರಹ್ಮವೈವರ್ತಸರಸ್ಸಿನಲ್ಲಿ ಸ್ನಾನಮಾಡಿ, ತಮಾ ನದಿಯಿಂದ ಶ್ರೀರಾಮನು ಮುಂದೆ ಬಲು ಅಯೋಧ್ಯೆಯು ಕಂಡಿತು. ಶ್ರೀರಾಮನು ಪರಿಪಾರಸ -ತ ವಿಮಾನಾರೂಢನಾಗಿ ನಗರಿಗೆ ಬರುತ್ತಿರುವನೆಂಬ ವರ್ತಮಾನ ವನ್ನು ಕೇಳಿ, ಸುಮಂತ್ರನು ಅಯೋಧ್ಯಾ ನಗರವನ್ನೆಲ್ಲ ಅಲಂಕಾರ ಮಾಡುವಂತೆ ದೂರಿಗೆ ಆಜ್ಞಾಪಿಸಿದನು. ಮತ್ತು ಸುಮಂತ್ರನು ನಗರದಲ್ಲಿದ್ದ ಸೈನ್ಯವನ್ನು ಹಿಂದಿಟ್ಟು ಕೊಂಡು, ಅತಿ ವಿನಯದಿಂದ ಶರಯೂ ನದಿಯನ್ನು ದಾಟಿ ಶ್ರೀ ರಾಮನ ವಿಮಾನಕ್ಕೆ ಎದುರಾಗಿ ಹೊರಟನು. ಶ್ರೀ ರಾಮನನ್ನು ನೋಡಿದೊಡನೆ ಸು ಮಂತ್ರನು ಆತನಿಗೆ ಸಾಷ್ಟಾಂಗಸಮುತ್ಕರ ಮಾಡಿ, ನಿರುಕ್ತ ಪರಿಜನರ ಕ್ಷೇಮ ಲಾಭವನ್ನು ಅತಿ ವಿನಯದಿಂದ ವಿಚಾರಿಸಿದನು. ಬಳಿಕ ಅನೇಕ ಖಾದ್ಯಘೋಷ ಗಳಾಗುತ್ತಿರಲು ವಿಮಾನವು ಮೆಲ್ಲ ಮೆಲ್ಲನೆ ರಾಮತೀರ್ಥದ ಬಳಿಗೆ ಬಂತು. ಕೂಲ ಗುರುಗಳಾದ ವಸಿಷ್ಠರ ಆಜ್ಞೆಯಂತೆ ಶ್ರೀ ರಾಮನು ಆ ದಿವಸ ಉಪೋಣಮಾಡಿ ದಧಿಶ್ರಾದ್ಧ ಮಾಡಿದನು. ಆ ಕಾಲದಲ್ಲಿ ನಾನು ದಾನಧರ್ಮಗಳು ನಡೆದವು. ಬಳಿಕ ಶ್ರೀ ರಾಮನು ಪುಷ್ಪಕವಿಮಾನದಲ್ಲಿ ಕುಳಿತು ಪರಿವಾರಸಮೇತನಾಗಿ ಸು ಮುಹೂರ್ತದಲ್ಲಿ ಅಯೋಧ್ಯೆಯನ್ನು ಪ್ರವೇಶಿಸಿದನು. ಆ ಕಾಲದಲ್ಲಿ ನಾನಾ 5 ದ್ಯಗಳು ಧ್ವನಿಮಾಡಿದವ, ಪುಷ್ಪವೃಷ್ಟಿಯಾಯಿತು. ಶ್ರೀ ರಾಮನು ನಗರಿಯ ರಮ್ಯವಾದ ಸ್ಥಳಗಳನ್ನು ನೋಡುತ್ತಿರಲು ಸಭಾಮಂಟಪದ ಬಾಗಿಲಿಗೆ ಪುಷ್ಪಕವಿ ಮನವು ಹೋಗಿ ನಿಂತಿತು. ಆ ಕಾಲದಲ್ಲಿ ಸುಮಂತ್ರನ ಪತ್ನಿಯರು ಸೀತ೩೦ಧು