ಪುಟ:ಶ್ರೀ ಮದಾನಂದ ರಾಮಾಯಣ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಕಂಡ. ಮುಂದೆ ಲಕ್ಷಾವಧಿ ಜನಗಳಾದರು. ಅವರಿಂದ ಈ ದಿವಸವೇ ನಿನ್ನ ನಾಶಪಡಿ ದೀತು ವ್ಯರ್ಥವಾಗಿ ಆಯುಷ್ಯವನ್ನು ಹಾಳುಮಾಡಿಕೊಳ್ಳಬೇಡ. ನನ್ನ ದ ಚನವು ಎಂದಿಗೂ ಸುಳ್ಳಾಗಲಾರದು. ನೀನು ಬದುಕಬೇಕೆಂದಿಷ್ಟವಿದ್ದರೆ, ಆ ವದನ್ನು ಸುಮ್ಮನೆ ಅಯೋಧ್ಯೆಗೆ ಕಳುಹಿಸಿಬಿಡು” ಎಂದು ಹೇಳಿದನು, ಈ ಬಾತುಗಳನ್ನು ಕೇಳಿ, ರಾವಣನು ಪೆಟ್ಟಿಗೆಯನ್ನು ಅಯೋಧ್ಯೆಗೆ ಕಳುಹಿಸಿ ಜನು, ಕುಜನು ಕೌಸಲ್ಯ-ಸುಮಂತ್ರರೊಡನೆ ಸುಖವಾಗಿ ಪಟ್ಟಣವನ್ನು ಸೇರಿದ್ದನ್ನು ಕೇಳಿ, ಅಯೋಧ್ಯೆಯ ಹಾಗೂ ಕೋಸಲದೇಶದ ಪ್ರಜೆಗಳಿಗೆ ಬಹಳ ಹರ್ಷದಾ ಯಿತು, ಕೋಸಲರಾಜನು ಸಂತೋಷದಿಂದ ಮಗಳ ವಿವಾಹವನ್ನು ಲೋಕಪದ್ದ ತಿಯಂತೆ ಬಹು ವಿಜೃಂಭಣೆಯಿಂದ ನಡೆಸಿದನು. ಕೆಲವುಕಾಲದನಂತರ ದಶರಥ ನು ದುಗಧರಾಜನ ಮಗಳಾದ ಸುಮಿತ್ರೆಯನ್ನೂ, ಕೇಕಯಭೂಪಾಲನ ಮಗಳ ದ ಕೈಕೇಯಿಯನ್ನೂ ಲಗ್ನ ವಾದನು, ಈ ಮೂವರೊಳಗೆ ಕೈಕೇಯಿಯು ಪರವು ಸೌಂದರ್ಯವತಿಯಾದ್ದರಿಂದ ಈಕೆಯಲ್ಲಿ ದಶರಥನ ಪ್ರೇಮವು ಹೆಚ್ಚಿನದಾಗಿ ತು, ಕೌಸಲ್ಯಯೇ ಮೊದಲಾದ ರಾಜಪುತ್ರಿಯರಾದರೂ ಪತಿಯ ಮನೋವೃ ಶ್ರೀಯನ್ನನುಸರಿಸಿ ನಡೆಯುತ್ತಿದ್ದರು.

  • ದಯಾಶಾಲಿಯಾದ ಆ ದಶರಥನು ರಾಜ್ಯಭಾರ ಮಾಡುವಾಗ, ದೇವತೆಗ ಳಿಗೂ, ರಾಕ್ಷಸರಿಗೂ ಯುದ್ಧವು ಪ್ರಾರಂಭವಾಯಿತು. ಅಯುದ್ಧದ ಸಮಾರಂಭ ನಡೆ ಯುತ್ತಿರುವಾಗ ಯಾವಪಕ್ಷದಲ್ಲಿ ದಶರಥಮಹಾರಾಜನು ಸೇರುವನೋ, ಆ ಪಕ್ಷಕ್ಕೆ ಜಿಯವಾಗುವದು,' ಹೀಗೆಂದು ಅಶರೀರವಾಣಿಯುಂಟಾಯಿತು. ದೇವತೆಗಳು ಕಡಿ ಡಲೆ ದಶರಥನ ಬಳಿಗೆ ಬಂದು, 'ಪ್ರಭೂ, ಧರ್ಮ ರಕ್ಷಣೆಗಾಗಿ ಅವತರಿಸಿರುವ ನೀನು ನಮಗೆ ಈಗ ಬಂದಿರುವ ರಾಕ್ಷಸರ ಬಾಧೆಯನ್ನು ತಪ್ಪಿಸು, ಎಂದಿ ಮೊರಬಿದ್ದ ರು. ಆಗ ಕರುಣಾನಿಧಿಯಾದ ದಶರಥನು ಯುದ್ಧಕ್ಕೆ ಹೊರಡಲು ಸಿದ್ಧನಾದನು, ಆ ದನ್ನು ನೋಡಿ ಕೈಕೇಯಿಯು; ನಾನೂ ಜೊತೆಗೆ ಬರುವೆನೆಂದು ಆಗ್ರಹ ಮಾಡಿದ ಳು, ಬಳಿಕ ಕೈಕೇಯಿಯನ್ನು ಕರೆದುಕೊಂಡು ದಶರಥನು ಸ್ವರ್ಗಕ್ಕೆ ಪ್ರಯಾಣ ಬೆಳೆಸಿದನು ಆಗ ದೇವದಾನವರಿಗೆ ದೊಡ್ಡ ಯುದ್ಧವಾಯಿತು. ಶೂರನಾದ ದಶರ ಥನಿಂದ ಎಣಿಕೆಯಿಲ್ಲದಷ್ಟು ರಾಕ್ಷಸರು ಹತರಾದರು. ಈ ಮಧ್ಯದಲ್ಲಿ ದುರಥಮ ಹಾರಾಜನ ರಥದ ಕೀಲು ಬಿದ್ದುಹೋಗಿತ್ತು. ಯುದ್ಧದಭರದಲ್ಲಿ ಆತನು ಈ ಆ ನಾಹುತವನ್ನು ನೋಡಲೇ ಇಲ್ಲ. ಇದನ್ನೆಲ್ಲ ನೋಡುತ್ತಿದ್ದ ಕೈಕೇಯಿಯು ಸ ತಿಗೆ ಜಯವಾಗಲೆಂದು ತನ್ನ ಕೈಯ್ಯನ್ನು ಆಕೀಲಿನಸ್ಥಾನದಲ್ಲಿಟ್ಟುಕೊಂಡು, ರಥ