ಪುಟ:ಶ್ರೀ ಮದಾನಂದ ರಾಮಾಯಣ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಶ್ರೀಮದಾನಂದ ರಥಯಣ, ತೀರಕ್ಕೆ ಸ್ನಾನಮಾಡಲು ತೆರಳಿದರು. ಅಲ್ಲಿ ಸ್ನಾನವನ್ನು ವಿಧ್ಯುಕ್ತ ರೀತಿಯಿಂದ ಮುಗಿಸಿಕೊಂಡು ಆತರುಣಿಯರು ತಮ್ಮ ತಮ್ಮ ದ್ವೀಪಗಳಿಗೆ ತೆರಳಿದರು. ಒಂದಾನೊಂದು ದಿವಸ ಶ್ರೀರಾಮನು ಮಂಚದ ಮೇಲೆ ಕುಳಿತಿದ್ದನು. ತಾಂಬೂಲದ ಪ್ರಥಮರಸವನ್ನು ನುಂಗಬಾರದೆಂದು ತಿಳಿದ ಶ್ರೀರಾಮನು ಅರಸ ವನ್ನು ಉಗಳಲು ಪೀಕದುನಿಯನ್ನು ನೋಡಿದನು. ಅದು ಹತ್ತಿರದಲ್ಲೆಲ್ಲೂ ಕಾಣಿ ಸಲಿಲ್ಲ. ಸಮೀಪದಲ್ಲಿ ನಿಂತಿದ್ದ ಸುಗುಣ ಎಂಬ ಸಿಯು ಶ್ರೀರಾಮನ ಈ ಅಭಿ ಪ್ರಯವನ್ನು ತಿಳಿದು, ಕದನಿಯು ಹತ್ತರ ಇಲ್ಲದ್ದನ್ನು ನೋಡಿ, ತನ್ನ ಅಂಗೈ ಯ್ಯಲ್ಲಿ ಶ್ರೀರಾಮನ ಆ ಮುಖರಸವನ್ನು ಸ್ವೀಕರಿಸಿದಳು. ಮತ್ತು ಈ ದಿವಸ 'ಅದೊಂದು ಅಲಭ್ಯಲಾಭವೆಂದು ತಿಳಿದು, ಆದಾಸಿಯ ಅಂಗೈಯಲ್ಲಿದ್ದ ರಸವನ್ನು ಪುನಮಾಡಿದಳು. ಇದನ್ನು ನೋಡಿ ಶ್ರೀರಾಮನು ಬಹಳ ಹರ್ಷವನ್ನು ಹೊಂದಿ ಹೇ ಸುಗುಣ, ನಿನಗೇನು ಬೇಕು ಬೇಡು? ಕೊಡುವೆನು ಎಂದು ಕೇಳಿದನು. ಈ ವಚನವನ್ನು ಕೇಳಿ ದೇಸಿಯು 'ರಾಮಚಂದ್ರ, ಈ ಅವತಾರದಲ್ಲಿ ಏಕಪತ್ನಿ ವ್ರತ ದನ್ನು ಧರಿಸಿರುತ್ತೀ ಅಗಲಿ ಮುಂದಿನ ಜನ್ಮದಲ್ಲಾದರೂ ನಿನ್ನ ಅಂಗ ಸಂಗವು ನನಗೆ ಲಭಿಸುವಂತ ದಯಪಾಲಿಸಿ ಎಂದು ಕೇಳಿಕೊಂಡಳು. ಅಗ ಶ್ರೀರಾಮನು ಎಲೈ ಸುಗುಣಿಯೇ, ನೀನು ಕೃಷ್ಣಾವಶರ ಕಾಲದಲ್ಲಿ ರಾಧೆಯಾಗಿ ಅವತರಿಸು, ಆಗ ನಿನ್ನೊಡನೆ ನಾನು ಕ್ರೀಡೆಗಳನ್ನಾಡಿ ಸಂತೋಷಗೊಳಿಸುವನು ನೀನು ಗೋಪಿಕಾಸ್ತ್ರೀಯರಲ್ಲಿ ಶ್ರೇಷ್ಠ ಪದವಿಯನ್ನು ಹೊಂದುತ್ತಿ, ಎಂದು ಹೇಳಿದನು. ಈ ವಚನಗಳನ್ನು ಕೇಳಿ ಬಸಿಯು ಪರಮಾನಂದವನ್ನು ಹೊಂದಿದಳು, ಒಂದು ಸಮಯದಲ್ಲಿ ಶ್ರೀದನು ಬಂಧುಪುತ್ರವಿತ್ರರೊಡನೆ ಸಭೆಯಲ್ಲಿ ಕುಳಿತಿದ್ದನು ಅಷ್ಟರಲ್ಲಿ ಒಬ್ಬ ತರುಣ ಬ್ರಹ್ಮಚಾರಿಯು ಅಲ್ಲಿಗೆ ಬಂದನು. ಆತನು ಕರುಂಡಲು ಅಜಿನ, (ಕಾಡೆಯವ) ಕಾವಿ ಬಟ್ಟೆ ಇವುಗಳನ್ನು ಧರಿಸಿದ್ದನು. ಅವನನ್ನು ನೋಡಿದೊಡನೆ ಶ್ರೀರಾಮನು ಅಸನದಿಂದ ಎದ್ದು, ಆತನಿಗೆ ನಮಸ್ಕರಿಸಿ ಶ್ರೇಷ್ಠ ಪಕ ಅಸನದ ಮೇಲೆ ಕುಳ್ಳಿರಿಸಿದನು, ಶ್ರೀ ಕಾಮನು ಅರ್ಥ್ಯಪದ್ಯದಿಗಳಿಂದ ಆತನನ್ನು ಪುಜಿಸಿ 'ನಾನು ಈ ದಿವಸ ಧನ್ಯನಾದನು, ಕೃತಕೃತ್ಯನಾದನು, ಡುಲ್ ಭವದ ತನ್ನ ದರ್ಶನದಿಂದ ನಾನು ಬದುಕಿದ್ದು ಸಾರ್ಥಕವೆನಿಸಿತು. ಮುಕ್ ಸ್ವಾಮಿ, ಜನ ನನ್ನ ಬಳಿಗೆ ಬರಲು ಕಾರಣವೇನು?” ಎಂದು ಕೇಳಿದನು, ಮರಗಳನ್ನು ಕೇಳಿ ಆಬ್ರಹ್ಮಚಾರಿಯು, ಹೇ ಅದು, ನಾನು ಬಲ್ಮೀಕಿಮಹ ಮಿಗಳ ಆಶ್ರಮದಿಂದ ಬಂದಿರುವೆನು ಆ ನನ್ನ ಗುರುಗಳು ಮಹಾಯಜ್ಞವನ್ನು