ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಸ್ತು ಯಾರೇ ಆಗಲಿ, ತನ್ನ ಗ್ರಂಥಗಳಿಗೆ ಪೀಠಿಕೆಯೆಂದು ಸ್ವಲ್ಪವನ್ನು ಬರೆವುದು ಆಗ ಪಡ್ಡತಿಯಾಗಿರುವುದನ್ನೈ, ಅದೇ ಮಾರ್ಗವನ್ನು ಅನುಸರಿ ಸಿ ನಾನ ಇಲ್ಲಿ ಒಂದೆರಡು ಮಾತುಗಳನ್ನು ಬರೆವೆನು, ನನಗೆ ಬ್ಯಾಲ ದಲ್ಲಿ ಛಂದೋಬದ್ದವಾಗುವಂತ ಅಕ್ಷರಗಳನ್ನು ಜೋಡಿಸುವ ಚಾಪಲ್ಯನ ಕೊಂಚವಿತ್ತು, ೧೮೯೯ ನೆಯ ಇಸವಿ' ಯಲ್ಲಿ ನಾನು ಎಫ್. ಎ. ಪರೀ ಕೈಗೆ ಓದುತ್ತಿದ್ದಾಗ ಬ್ರ|| || ಶಿವಶಂಕರಶಾಸ್ತ್ರಿಗಳವರಿಂದ 'ಕನ್ನಡಕ್ಕೆ ಪರಿವರ್ತಿಸಲ್ಪಟ್ಟ ಚಂದ್ರಾಲೋಕವು ನನ್ನ ಪಠನೀಯ ಪುಸ್ತಕಗಳಲ್ಲಿ ಒಂ ದಾಗಿತ್ತು, ನನಗೆ ಸಂಸ್ಕೃತ ಶ್ಲೋಕಗಳು ಬೇಗನೆ ಬಾಯಿಗೆ ಬರ ತಿದ್ದ ಹಾಗೆ ಕನ್ನಡ ಪದ್ಯಗಳು ಬರುತ್ತಿರಲಿಲ್ಲ.ವಾಗಿ ಅಲಂಕಾರದ ಲಕ್ಷ ಲಕ್ಷಣಗಳನ್ನು ನೆನಪಿನಲ್ಲಿಟ್ಟು ಕೊಳ್ಳುವುದು ಕಷ್ಟ್ಯವಾಗಿ ಬರಲು ಈ ವಿಷಯವನ್ನು ನನ್ನ ಸಂಸ್ಕೃತಸಾಹಿತ್ಯಾಚಾರರಾದ ಬ್ರಹ್ಮ ಶ್ರೀ ವಿಶ್ವೇ ರಕಾಸ್ತ್ರಗಳಲ್ಲಿ ಪ್ರಸಂಗ ಸಂಗತಿಯಿಂದ ವಿಜ್ಞಾಪಿಸಿದೆನು. ಅದಕ್ಕ ವರು “ ಸಂಸ್ಕೃತ ಚಂದ್ರಾಲೋಕನವನ್ನೇ ನಿತ್ಯವೂ ಒಂದು ಕಾಲಘಂ ಟೆಯನ್ನು ಓದಿಬಿಡು ” ಎಂದುಹೇಳಿ ಅದರಂತೆ ಹೇಳಿಕೊಡುವುದಕ್ಕೆ ಆರಂ ಭಿಸಿ, ೮-೧೦ ದಿವಸಗಳಾದ ಮೇಲೆ ಕುವಲಯವನ್ನೇ ಓದುವಂತೆ ಅಪ್ರಣೆ ಕೊಟ್ಟರು, ಆಗತಾನೇ ನನಗೆ ನೀಲಕಂಠಶಂಭೂಪಾಠವು ಮುಗಿದ ಭಾರತಚಂಪೂಪಾಠವಾಗುತ್ತಿದ್ದರೂ ಆ ಮಹನೀಯರ ಅಭಯ ವಾಕ್ಷಿ೦ದ ಧೈಯ್ಯಹುಟ್ಟಿ ಕುವಲಯಾನಂದವನ್ನೇ ಓದಲಾರಂಭಿಸಿದೆನು. ಅವರ ಬೊ ಧನಾಶಕ್ತಿಯನ್ನು ಅವರಲ್ಲಿ ಓದಿದವರೇ ಬಲ್ಲರು, ಅವರಲ್ಲಿ ಓದಿ ಬಂದ ಪಾಠವನ್ನು ಮತ್ತೆ ಓದಿ ಭದ್ರಮಾಡಬೇಕಾದ ಕೆಲಸವೇ ನನಗಿರಲಿಲ್ಲ. ನನಗೆ ಮೇಲೆ ಹೇಳಿದ ಚಾಪಲ್ಯವಿದ್ದುದರಿಂದ ಆ ಆ ದಿವಸದ ಪಾಠಕ್ಕೆ ಲಕ್ಷವಾಗುವಂತ ಕುಲದೇವತೆಯಾದ ಲಕ್ಷ್ಮೀನೃಸಿಂಹನನ್ನು ಅಧಿಕರಿಸಿ ಕಂದ ಪದ್ಯಗಳನ್ನು ರಚಿಸುತ್ತಿದ್ದೆನು. ಹಾಗೆ ರಚಿತವಾದ ಪದ್ಯಗಳೆಲ್ಲವೂ ಸೇರಿ ಒಂದು ಗ್ರಂಥದಂತ ಆದುದರಿಂದ ಅದಕ್ಕೇನಾದರೂ ಒಂದು ಹೆಸರ ಬೇಡವೇ ಎಂದು ಆಕ್ಷನೃಸಿಂಹಸ್ತೋತ್ರವೆಂದು ಕರೆದೆನು, ಆದೆಲ್ಲಿಯೋ, ಸೇರಿಕೊಂಡಿತ್ತು, ಈಚೆಗೆ ನನ್ನ ಪರಮಮಿತ್ರರಾದ ಶ್ರೀಯುತ ಬೆನಗಲ್ ಶಾಮರಾಯರವರಿಂದ ಆ ವಿಪಯವನ್ನು ಕೇಳಿ ಸಂದಿನೀ ಕರ್ತ್ರೀಯರಾದ