ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

89) ಹಸ್ತಿನಲ್ಲ, ರವಿವರ್ಮ ಭೂಪ ೨೫೩ ಮಂದರೋ;- ಇದಾವು ತಯಿ ಭರತಸೂನ್‌ ಮನು ಪ್ರಣಾ ಕೃಮಾವು ದಷು ದ್ರವಿಣಮಿಹ ನಃ ಪೈಕಮಿದಂ ವೈಜ ಸೈರಂ ಯುತ ಸೃಗೃಹಮಥವಾ ಪ್ರೇತಭವನ ಗತಿಸ್ತಾರ್ತಿ ಯಾಕಿ: ನ ಪುನರಿಹ ಕಾವ್ಯ ಭವತಃ ೪-f೧. ಎಳ್ಳೆ ! ನೀನು ಭಾರತಭೂಮಿಯವನಾಗಿರುವೆಯೆಂದು ನಿನ್ನ ಮೇಲೆ ನನಗೆ ಅಭಿವಾನವಿರುವುದರಿಂದಲೆ? ನಿನಗೆ ಹಿತವನ್ನು ಹೇಳುವೆನು ಕೆಳು. ನಿಮ್ಮಂಥವ ರಲ್ಲಿ ಕೃಪೆಯನ್ನು ತೋರಿಸುವುದು ನಮ್ಮ ಕುಲಕ್ರಮಾಗತ ಆಚರಣೆಯಾಗಿರುವುದು ಈಗ ಯುದ್ಧವನ್ನು ಬಿಟ್ಟು ಸುಮ್ಮನೆ ಹೊರಡು. ಇಲ್ಲವಾದರೆ ನಿನಗೆ ಯಮಲೋ ಕವೇ ಗತಿ ಈ ಎರಡನ್ನೂ ಬಿಟ್ಟು ಮೂರನೆಯದಾರಿಯು ಯಾವುದೂ ತೋರು ವದಿಲ್ಲ. ರ ವಿ ನ ರ್ಮ ಭೂ ಪ ಇವನು ಕೆರಳದೆಶದವನು. ಚಂದ್ರಕುಲದ ಯಾದವಜಯಸಿಂಹನ ಮಗನು. ಕ್ರಿ. ಶ. ೧೨೬೫ರಲ್ಲಿ ಹುಟ್ಟಿದನು. ಇವನಿಗೆ ಮಹಾರಾಜಪರಮೇಶ್ವರ, ದಕ್ಷಿಣಭೋಜರಾಜ, ಸಂಗಾಮಧೀರನೆಂಬ ಅಪರ ನಾಮಗಳಿದ್ದುವಾಗಿ ಅಸ್ತಿ ಕಿಲ ಸಂಗಿತಶಾಸ್ತ್ರ ಪಾರದೃಶ್ವನಾ ನಿಖಿಲಗುಣರತ್ನರೋಹಣಗಿರಿಣಾ ಕವಿಜನಮಯೂರ ಕಾಲಮೇಘನ ಸಾಹಿತ್ಯ ವಿದ್ಯಾ ವಿಚಕ್ಷಣೇನ ದಕ್ಷಿಣಭೋಜರಾಜೇನ ಮಹಾರಾಜ ಪರಮೇಶ್ವರೆ?ಣ ಸಂಗ್ರಾಮಧಿರವೀರನಾಮಧೇಯೇನ ಶ್ರೀರವಿವರ್ಮದೇವೇನ” ...... ಎಂಬುದರಿಂದಲೂ, ಸಂಗ್ರಾಮಭೂವಿಷು ಸಭಾಸು ಚ ಧೀರ ಏಷ - ಶಣ ಬುದ್ದಿ ವಿಭವೇನ ಚ ವೈಕ್ಸ್ ಭಾಜಿ ದರ್ಪಾಂಧಕಾರಿತಧಿಯೋ ನೃಪರ್ತೀ ಬುಧಾಂಶ್ಚ ಜತ ವಿಹರತೇ ಜಯಸಿಂಹಸೂನು: || ೧೪ ಎಂಬ ಸೂತ್ರಧಾರನ ಹೇಳಿಕೆಯಿಂದ ಸ್ಪಷ್ಟ ಪಡುವುದು. (ಅಲಂಕಾರಸರ್ವಸ್ವ' ಎಂಬ ಗ್ರಂಥದ ವ್ಯಾಖ್ಯಾತವಾದ ಸಮುದ್ರಬಂಧನು ಇವನನ್ನು ( ಕೂಪಕಭೂಪತಿಃ ” ಎಂದು ಹೇಳಿಕೊಂಡಿರುವುದರಿಂದ ಇವನು ಕೂಪಕದೇಶಕ್ಕೆ ರಾಜಧಾನಿಯಾದ ಕೊಲಂಬೋ ನಗರದ ರಾಜನಾಗಿದ್ದನೆಂದೂ ಆಗಣ ಕೊಲಂಬೊನಗರವು ಈಗಣ ಕೊಲ್ಲಂ ಅಥವಾ ಕೈರ್ಲಾ ಎಂದೂ ತಿಳಿಯ