ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ) ವೆಂಕಟನಾಥ C ಶಿಕ್ಷಿತರಾಗಿ ಆಚಾತ್ಯಾನಂತರ ಕ್ರಮವಾಗಿ ತುರೀಯಾಶ್ರಮವನ್ನು ವಹಿಸಿದುದಾಗಿ ಮಧ್ವವಿಜಯವು ಹೇಳುತ್ತದೆ. ಮಧ್ವಾಚಾರರ ಕಾಲವ್ಯವಸ್ಥೆಯು ಅವ್ಯವಸ್ಥಿತ ವಾಗಿಯೇ ಇದೆ. ಪ್ರಕೃತಮಧ್ವಾಚಾರರ ಕಾಲವಿಚಾರವಾಗಿ ಹೇಳಿರುವುವಾದ, (7) ಮಹಾಭಾರತ ತಾತ್ಪಯ್ಯನಿರ್ಣಯ. (೨) ಕ್ರಮವಾಗಿ ಬರೆಯಲ್ಪಟ್ಟು ಕಾದಿಡಲ್ಪಟ್ಟಿರುವ ಆಯಾಮಠೀಯ ರಲ್ಲಿರುವ ಆಚಾರಕ್ರಮಾನುಸರಣ. (೩) ನರಹರಿತೀರ್ಥರಶ್ಲೋಕಗಳನೊಳಕೊಂಡಿರುವ ಶಾಸನಗಳು, (೪) ದಕ್ಷಿಣಕನ್ನಡಜಿಲ್ಲೆಯ ಕೈಪಿಡಿ (ಮ್ಯಾನ್ಯೂಯಲ್) ಮಹಾಭಾರತ ತಾತ್ಪರನಿರ್ಣಯದಲ್ಲಿ ಆಚಾರರ ಕಾಲವು ಕಲಿ ೪೩೦೦ ಎಂದು ಹೇಳಿದೆ. $ ಎಂದರೆ ಇದು ದಕ್ಷಿಣಕನಡಾ ಜಿಲ್ಲೆಯ ಕೈಪಿಡಿಯಲ್ಲಿ ಹೇಳಿರುವ ಕ್ರಿ. ಶ. ೧೧ರ್೯ಕ್ಕೆ ಸರಿಹೋಗುತ್ತದೆ. ಉತ್ತರಾದಿ ಮಠಗಳಲ್ಲಿ ಆಯಾ ಮಠದ ಸ್ವಾಮಿಗಳು ತುರೀಯಾಶ್ರಮವನ್ನು ಸಾಧಿಸಿದಕಾಲ, ಜನ್ಮತಿಥಿ, ಪುಣ್ಯತಿಥಿ ಮೊದಲಾದವುಗಳೆಲ್ಲವೂ ಸಾಂಗೋಪಾಂಗವಾಗಿ ಸಂಶಯಾಸ್ಪದವಿಲ್ಲ ದಂತೆ ಕ್ರಮವರಿತು ಬರೆಯಲ್ಪಟ್ಟಿವೆ, ಈ ಬರವಣಿಗೆಗಳ ಸಥ್ಯಾಂಶವನ್ನು ನೋಡಿ ಸಮರ್ಪಕವೆಂದು ನಂಬಿ, ಡಾ, ಅಫಿಷಿ ಬ” (Aufrecht) ರವರೂ, ಡಾ. ರಾವ ಕೃಷ್ಣ ಭಂಡಾರಕರವರೂ ಆ ಕಾಲವನ್ನೇ ಹೇಳಿಕೊಂಡಿರುವರು. ನರಹರಿತೀರ್ಥ ರವರ ಶ್ಲೋಕಗಳನೊಳಗೊಂಡಿರುವ ಶಾಸನಗಳಲ್ಲಿ ಹೇಳಿರುವ ಕಾಲವು ವಿಚಾರ ಗ್ರಸ್ತವಾಗಿದೆ. ಮಧ್ಯಾಚಾರೈರ ಜನ್ಮಸಂವತ್ಸರವು ವಿಳಂಬಿಯೆಂದೂ, ಗತಿಸಿದ ಸಂವತ್ಸರವು ಸಿಂಗಳವೆಂದು ಮಾತ್ರ ಹೇಳಿದೆ. ಆದರೆ ಯಾವವಿಳಂಬಿ, ಯಾವ ಪಿಂಗಳ ಎಂಬುದನ್ನು ನಿಷ್ಕರ್ಷಿಸಿ ಹೇಳಿರುವುದಿಲ್ಲ, ವಿಳಂಬಿಯು ಶಕ. ೧೦೪೦ .... ಕ್ರಿ. ಶ. ೧೧೧೮ .... .... ೧೦೦ .... » ೧೧೭೮ ... ೧೧೬೦ ... ೨೨ ೧೨೩೮ ರಲ್ಲಿ ಆಗಿದೆ. ಪಿಂಗಳಸಂವತ್ಸರವು ಶಕ ೧೧೧೯ .... ೨ ೧೧೯೭ - ... ೧೧೭೯ .... ೨, ೧೨೫೭ .... ೧೨೩೯ .... , ೩೧೭ಕ್ಕೆ ಬೀಳುತ್ತದೆ. ಮೆ|| ಸುಬ್ಬರಾಯರ ಮತ್ತು ಮಠದಲ್ಲಿರುವ ಪೀಳಿಗೆಯ ಕ್ರಮದ ಹೇಳಿಕೆ ಯನ್ನು ನೋಡಿದರೆ ವೆಂಕಟನಾಥನೂ ವಿದ್ಯಾರಣ್ಯರೂ ಹುಟ್ಟುವ ಎಷ್ಟೋ $ See Chapter XXXII. Verse 131 and Chap. IX Verse 100