ತುಂಗಮ್ಮನಿಗೆ ನಿರಾಶೆಯಾಯಿತು ಎಲ್ಲರೂ ಹೊರಟು ಹೋದ
ಮೇಲೆ ಅಳುಮೊರೆ ಹಾಕಿಕೊಂಡು ಮನೆಯೊಳಕ್ಕೆ ಬಂದಳು ಅಲ್ಲಿ ಅಕ್ಕ ಅಳುತಿದ್ದಳು. ಅಕ್ಕನ ಜತೆಯಲ್ಲಿ ತಂಗಿಯೂ ಅತ್ತಳು
ಆಮೇಲೆ ಎರಡು ವರ್ಷಗಳಕಾಲ ಆತನ ಪ್ರಸ್ತಾವವೇ ಬರಲಿಲ್ಲ.
ಆ ಅವದಿಯಲ್ಲಿ ತುಗಂಮ್ಮನ ಅಕ್ಕ ಗಂಡನ ಮನೆಗೆ ಹೋದಳು.ಅಲ್ಲಿಂದ, ಬೆಳಗಾಂವಿಯ ಕಾಲೇಗಿನಲ್ಲಿ ಪ್ರಾಧ್ಯಾಪಕ ಕೆಲಸ ದೊರೆತ ಗಂಡನೊಡನೆ ಆ ಊರಿಗೆ ಹೋದಳು. ಮನೆಗೆಲಸ ನೋಡಿಕೊಳ್ಳಲೆಂದು ತುಗಂಮ್ಮ ಹೈಸ್ಕೂಲಿನ ಓದು ನಿಲ್ಲಿಸಬೇಕಾಯಿತು
ಆ ಅವದಿಯ ಮೇಲೊಂದು ದಿನ ತುಗಂಮ್ಮನ ತಂದೆ ಕೇಳಿದರು:
"ತುಂಗಾ,ಅವತ್ತು ಪದ್ಮಾ ಮದುವೆಗೆ ಮೈಸೂರಿನಿಂದ ನಾರಾಯಣ
ಮೂರ್ತೀಂತ ಒಬ್ಬ ಬಂದಿದ್ದ ನೆನಪಿದೆಯೇನೆ?"
"ಎರಡು ವರ್ಷದ ಹಿಂದೆ?"
ಆ ಅವದಿ ಎಷ್ಟೆಂಬುದನ್ನು ತುಗಂಮ್ಮ ಮರೆಯುವುದು ಸಾಧ್ಯವಿತ್ತೆ?
"ಹೂಂ, ಪದ್ಮಾ ಮದುವೆಗೆ-"
"ಅದೇ,ಯಾರೋ ಹುಡುಗಿ ಬಂದು ನನ್ಜತೇಲಿ ಮಾತಾಡ್ತಿದ್ಲು.
ಅವಳಣ್ಣ ಇರ್ಬೇಕು."
"ಹೂಂ.ಹೂಂ.ಅವರೇನೇ ಆ ಹುಡುಗಿಗೆ ಮದುವೆಯಾಯಂತೆ.
ಮೈಸೂರಿನಿಂದ ಬಂದೋರು ಯಾರೋ ಹೇಳಿದ್ರು ಮೊನ್ನೆ."
"ಓ!" ಎಂದಳು ತುಗಂಮ್ಮ. ಅಷ್ಟೇನೆ-ಎಂದು ನಾಲಿಗೆ ಮೌನ
ವಾಗಿ ತೊದಲಿತು
ಆದರೆ ಆಕೆಯ ತಂದೆ,ಒಂದು ಕ್ಷಣ ತಡೆದು ಹೇಳಿದರು:
"ನಾರಾಯಣಮೂರ್ತಿಗೆ ಪಾಸಾಯ್ತಂತೆ."
ತಾನು 'ಹೂಂ' ಎಂದರೆ ಮಾತು ಅಲ್ಲಿಗೇ ನಿಂತು ಹೋಗುವುದೇನೋ
ಎಂದು ಹೆದರಿ ತುಂಗಮ್ಮ ಕೇಳಿದಳು:
"ಯಾವ ಪರೀಕ್ಷೆ ಆಣ್ಣ?"
ಉತ್ತರ ತನಗೆ ತಿಳಿದೇ ಇತ್ತು. ಆದರೂ ಕೇಳಿದ್ದಳಾಕೆ.
"ಬಿ.ಎ., ಮತ್ಯಾವುದು?"