ಪುಟ:Chirasmarane-Niranjana.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಚಿರಸ್ಮರಣೆ

"ಇಲ್ಲಿ ಯಾಕೆ ಗುಂಪು ಕೂಡ್ತೀರಾ?ಹೊರಡಿ!"ಎಂದು ಜಮೀನ್ದಾರರು ಗರ್ಜಿಸಿದರು. ಘೌಜದಾರರೂ ಸನ್ನೆ ಮಾಡಿದುದನ್ನು ಕಂಡು ಪೋಲೀಸರು,"ಹೋಗಿ, ಮನೆಗ್ಹೋಗಿ!"ಎಂದು ಮೆಲ್ಲಮೆಲ್ಲನೆ ಜನರನ್ನು ಹಿಂದಕ್ಕೆ ತಳ್ಳಿದರು. ಗುಂಪು ಅಲ್ಲಿಂದ ಹೊರಟಿತು.ಅಪ್ಪು ಮತ್ತು ಚಿರುಕಂಡರಿಗೆ ಅಂಟಿಕೊಡೇ ಸಂವಾದದ ವಿವರ ಕೇಳುತ್ತ,ಜನ ಮುಂದಕ್ಕೆ ಚಲಿಸಿದರು. ಅಪ್ಪುವಿನ ತಂದೆ ಕೇಳಿದ: "ಮಾಸ್ತರು ಊರಲ್ಲಿಲ್ವ?" ಆ ಪ್ರಶ್ನೆಗೆ ಕೋರ ಉತ್ಸಾಹದ ಧ್ವನಿಯಲ್ಲಿ ಉತ್ತರವಿತ್ತ: "ಇಲ್ಲ,ಊರಲಿಲ್ಲ.ಇವರಿಬ್ಬರೂ ಬರೋಕ್ಮುಂಚೆ ಮಾಸ್ತರ ವಿಷಯ ಬಂದಿತ್ತು.ಜಮೀನ್ದಾರರು ಮಾಸ್ತರನ್ನು ಬಾಯಿಗೆ ಬಂದ ಹಾಗೆ ಅಂದ್ರು."ಇವತ್ತು ಊರಲ್ಲಿಲ್ಲ.ಇದ್ದಿದ್ರೆ ನಿಮ್ಮ ಮೂಲಕ ಬಿಸಿ ಮುಟ್ಟಿಸ್ಭಹುದಾಗಿತ್ತು.ಅಂತ ಘೌಜದಾರರಿಗೆ ಹೇಳಿದ್ರು.ಏನು ಧೈರ್ಯ!" ಮಾಸ್ತರನ್ನು ಕುರಿತು ಅಷ್ಟು ಹಗುರವಾಗಿ ನಂಬಿಯಾರರು ಮಾತನಾಡಿದರೆಂಬ ವರದಿ ಅಸಹ್ಯವಾಗಿತ್ತು.ಚಿರುಕಂಡನೆಂದ: "ಅವರು ಬಿಸಿ ಮುಟ್ಟಿಸೋ ರೀತಿ ಎಂಥದೂಂತ ಇವತ್ತು ನೋಡಿದೆವಲ್ಲ!ತಮ್ಮ ಸಾಮರ್ಥ್ಯ ತೋರಿಸ್ಬೇಕೂಂತ ನಂಬಿಯಾರರೇ ಪೋಲೀಸರನ್ನ ಕರೆಸಿದದ್ದು. ಕಡೆಗೆ ಏನಾಯ್ತು?ನಾವು ಬಗ್ಗಿದ್ದರೆ ಬೆನ್ನಿಗೊಂದು ಗುದ್ದು ಬೀಳ್ತಿತ್ತು.ಬಗ್ಗಲಿಲ್ಲ-ಸುಮ್ಮನಾದ್ರು." ಅಷ್ಟರಲ್ಲೆ ಗುಂಪಿನಿಂದ ಒಬ್ಬನೆಂದ: "ಇನ್ನು ಸ್ವಲ್ಪ ಹೊತ್ತಿನಲ್ಲೇ ಘೌಜದಾರರೂ ಪೋಲೀಸರೂ ರೈಲು ಸ್ಟೇಷನ್ನಿಗೆ ಹೊರಡ್ತಾರೆ.ಮೂರೇ ಜನ.ನಾವು ಅವರಿಗೆ ಬಿಸಿಮುಟ್ಟಿಸೋಣ್ವೇನು?" "ಶ್!"ಎಂದು ಚಿರುಕಂಡ,ಯಾರು ಹಾಗೆ ಅಂದರೆಂದು ತಿರುಗಿನೋಡುತ್ತ. "ಅಂಥ ವಿಚಾರ ಮಾಡ್ಬೇಡಿ.ಬೀದೀಲಿ ಹೋಗೋ ಮಾರೀನ ಮನಗೆ ಕರೆಯೋದೂಂತ ಅದಕ್ಕೇ ಹೇಳೋದು." ಆ ಮಾತು ಒಪ್ಪಿಗೆ ಎಂಬಂತೆ ಇನ್ನೊಬ್ಬನೆಂದ: "ಕೈತುರಿಸ್ತದೇಂತ ಕಲ್ಲು ಬಂಡೆಗೆ ಗುದ್ದೋಕಾಗ್ತದೇನಪ್ಪ?" ಅಲ್ಲಿಯೇ ಇದ್ದ ಕಣ್ಣ ಮಾತು ಸೇರಿಸಿದ: "ಕಲ್ಲುಬಂಡೆ ಕೀಳೋದು ಬರಿ ಕೈಯಿಂದಲ್ಲ;ಅದಕ್ಕೆ ಬೇರೆ ಸಾಮಾನು ಬೇಕು!"