ಈ ಪುಟವನ್ನು ಪರಿಶೀಲಿಸಲಾಗಿದೆ
ಚಿರಸ್ಮರಣೆ ೨೪೦
ಕೇಳಬಾರದು.ಕಾನೂನು ಪ್ರಕಾರ_"
ಜೇಲರಿಗೆ ಕಾನೂನು ಗೊತ್ತಿತ್ತು. ಜೋರಾದ ಕರಿ ಇರುವೆ ಬೆರಳಿಗೆ
ಕುಟುಕಿದಂತಾಗಿ, ಅವರೆದ್ದು ಹೊರಹೋದರು.
"ಈ ಭೇಟಿಗೆ ಸಮಯ ನಿಬ್ರಂಧವಿಲ್ಲ, ನೀವು ಕೂತ್ಕೊಳ್ಳೋದೇ ವಾಸಿ"
ಎಂದರು ರಾಜಾರಾಯರು.
ಚಿರುಕಂಡ, ಅಪ್ಪು ಮತ್ತು ಮಾಸ್ತರು ಗೋಡೆಗೊರಗೆ ಕುಳಿತರು. ಅವರ
ಎದುರು. ಕುಚ್ರಿಯ ಮೇಲೆ ಕೂತುಕೊಂದು ವಕೀಲರು ಆ ಮೂವರು ಯಾರು
ಯಾರೆಂದು ಕೇಳಿ ತಿಳಿದರು.
"ಮೊದಲು ಒಂದನೆಯ ಮತ್ತು ಎರಡನೆಯ ಆರೋಪಿಗಳಾಗಿ ಶೇಖರ
ಉರುಷ್ ಪಂಡಿತ, ಮಾಧವನ್ ಉರುಷ್ ವಮ್ರ ಅಂತ ಹಾಕಿದ್ದರು.ಹಾಗೆ
ಇಬ್ಬರಿಲ್ಲಾಂತ ನನಗೆ ತಿಳಿದಿದೆ. ಗುಟ್ಟು ಬಿಡಬಾರದು.ಮುಂದೆ ಮೊಕದ್ದಮೆಯಲ್ಲಿ
ಅದನ್ನು ಉಪಯೋಗಿಸೋಣ. ಈಗ ಪಟ್ಟೀಲಿ, ಆ ಎರಡು ಹೆಸರುಗಳನ್ನು
ಕೊನೇದಾಗಿ ಹಾಕಿದ್ದಾರೆ. ಮೊದಲ್ನೇ ಆರೋಪಿ ಅಪ್ಪು, ಎರಡನೆಯದಾಗಿ
ಮಾಸ್ತರ್, ನಂಬರ್ ಮೂರು ಚಿರುಕಂಡ ನಾಲ್ಕು ಪ್ರಭು, ದು ಕೋರೆ ಆರು
ಕಣ್ಣ, ಏಳು ಕುಟ್ಟಿಕ್ರಿಷ್ಣ, ಎಂಟು ಅಬೂಬಕರ್ ಹೀಗೆ...."
ವಕೀಲರ ಕೈಯಲ್ಲಿದ್ದ ಕಾಗದದಲ್ಲಿ ಆ ವಿವರವಿತ್ತು.
ಮಾಸ್ತರ ಪ್ರಶ್ನೆಗಳಿಗೆ ಉತ್ತರವಾಗಿ ಅವರೆಂದರು:
"ಈ ತಿಂಗಳ ಕೊನೇಲಿ ವಿಚಾರಣೆ ಶುರುವಾಗ್ಬಹುದು. ತಮ್ಮ ಕಡೆಯಿಂದ
ಅವರು ಮೂವತ್ತು ನಾಲ್ವತ್ತು ಜನ ಸಾಗಳ ಹೆಸರು ಕೊಟ್ಟಿದ್ದಾರೆ."
"ಅಷ್ಟು ಜನ! ಸಾಧ್ಯವೇ ಇಲ್ಲ. ನಮ್ಮ ವಿರುದ್ದ ಅಷ್ಟು ಜನ ಸಾ
ಕೊಡಲಾರರು" ಎಂದ ಅಪ್ಪು.
ಮಾತಿನ ಆ ರೀತಿ ರಾಜಾರಾಯರಿಗೆ ಹಿಡಿಸಲಿಲ್ಲ. ಅವರು ಸ್ವರವೇರಿಸಿ ಅಂದರು:
"ಹುಂ! ನಿಮ್ಮ ಪರವಾಗಿ ಸಾ ಹೇಳೋರು ಎಷ್ಟು ಜನ ಸಿಗಬಹುದು?"
"ಇಡೀ ಕಯ್ಯೂರೇ ನಮ್ಮ ಕಡೆ!"
ಅಪ್ಪುವನ್ನು ತಡೆದು ಮಾಸ್ತರೆಂದರು:
"ದಬ್ಬಾಳಿಕೆಯಿಂದಾಗಿ ಸಾಗಳು ಸಿಗೋದು ಸ್ವಲ್ಪ ಕಷ್ಟವಾದೀತು." ವಕೀಲರು
ತಾವು ಗೆದ್ದೆವೆಂದು ನಕ್ಕು ನುಡಿದರು:
"ಸ್ವಲ್ಪ ಎಂಥದು? ಪೂರಾ ಕಷ್ಟವೇ, ಆ ಊರಿನಲ್ಲಿ ಏನಾಗಿದೇಂತ ನಿಮಗೆ
ಗೊತ್ತುಂಟೊ? ಸಾ ತರಬೇಕಾದರೂ ನಾನೇ ಅಲ್ಲಿಗೆ ಹೋಗಬೇಕಾದೀತು."