ಪುಟ:Chirasmarane-Niranjana.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೪೭

    ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:
    "ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ, 
    ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು; 
   ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
    ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."
   ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ  ಮೈ ಪುಲಕ
   ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
   ತಿಳಿದು, ಅವರಿಗೆ ಅನಂದವಾಯಿತು.
   ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು. 
   "ಎನೇ ಅದು?"
   ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.
   ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
   ಬಳಿ ಸಾರಿ, ಮೆಲ್ಲನೆ-ಆದರೆ ಎಲ್ಲರಿಗೂ ಕೇಳಿಸುವಂತೆ-ಹೇಳಿದಳು:
   "ಅಮ್ಮ ಹೇಳಿದ್ಲು-ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ 
   ಎಲ್ರೂ ಬರ್ವೌದಂತೆ  . ಹೋಗಿ ಹೆಳು ಅಂದ್ರು."
   ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರೆದ್ದು, ಉಳಿದವರಿಗೆಲ್ಲ 'ಏಳಿ'
   ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:
   "ಅದ್ಯಾತರದೆ ನಾಚಿಕೆ?ಹೋದಸೌಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು 
   ಮಾತಾಡಿದ್ದೆ, ಈಗಾಗ್ಗೆ ಮರೆತೋಯ್ತೆ?"
   ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ 
   ಜತೆಯಲ್ಲೆ ನಡೆದಳು.
   ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:
   "ಎಲ್ಲಿ ಕಯ್ಯೂರು ಮೀರರು ಎದುರಿಗ್ಬನ್ನಿ.ಮೊದಲೇ ನಡೀರಿ."
   ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ 
   ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
   ....'ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
   ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು 
   ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸಿ ಬಯಸಲಿಲ್ಲ.
   ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ