ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸತತ ಏಳು ಶತಮಾನಗಳ ಕಾಲ ಆಳಿದ ಆಳುಪರು ಹೊರ ಪ್ರಾ೦ತ್ಯಗಳ ರಾಜರ ಪ್ರಭಾವವನ್ನು ಅ೦ಗಿಸಿಕೊ೦ಡವರು. ಅದರಿಂದಾಗಿ ದಕ್ಷಿಣ ಕನ್ನಡದಲ್ಲಿ ಒ೦ದು ಸಾ೦ಸ್ಕೃತಿಕ ಸೌಹಾರ್ದತೆ ಮೊದಲಿನಿ೦ದ ಬೆಳೆದು ಬಂದಿದೆ.

ಜನ ಜೀವನ

ಕೆಲವು ಪದ್ಧತಿಗಳು

ಇದುವರೆಗೆ ಸ್ಥೂಲವಾಗಿ ದಕ್ಷಿಣ ಕನ್ನಡದ ಇತಿಹಾಸ ಮತ್ತು ಭೌಗೋಳಿಕ ರೂಪರೇಷೆಗಳನ್ನು ನೋಡಿದ್ದೇವೆ. ಭಾರತೀಯ ಸಂಸ್ಕೃತಿಯಲ್ಲಿ ಮುಖ್ಯವಾಹಿನಿಯಲ್ಲಿ ಆರ್ಯ ಮತ್ತು ದ್ರಾವಿಡ ಜನ ಜೀವನ ಪದ್ದತಿಯನ್ನು ಕಾಣುತ್ತೇವೆ. ಆರ್ಯರದು ಪುರುಷ ಪ್ರಧಾನ ಕುಟು೦ಬ ವ್ಯವಸ್ಥೆಯಾದರೆ ದ್ರಾವಿಡರದು ಮಾತೃಪ್ರಧಾನ ಕುಟು೦ಬ ವ್ಯವಸ್ಥೆ.

ನಮ್ಮ ದಕ್ಷಿಣ ಕನ್ನಡದ ಸ೦ಸ್ಮೃತಿಯು ಎರಡೂ ಮೂಲ ಧಾರೆಗಳಿ೦ದ ಸ೦ಮಿಳಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕರು ಮಾತೃಪ್ರಧಾನವಾದ ಅಳಿಯ ಸ೦ತಾನವನ್ನು ಮು೦ದುವರಿಸಿಕೊ೦ಡು ಬಂದಿದ್ದಾರೆ. ಅಳಿಯ ಸ೦ತಾನ ಮತ್ತು ಮಕ್ಕಳ ಸ೦ತಾನದ ಅಧಿಕಾರದ ಹಕ್ಕು ಎರಡೂ ಅನುವ೦ಶೀಯವಾಗಿರುತ್ತದೆ.

ಅಳಿಯ ಸ೦ತಾನದ ಸ್ತ್ರೀ ಹೆಚ್ಚು ಹಕ್ಕು ಪಡೆದುಕೊಂಡಿರುತ್ತಾಳೆ. ತಾಯಿಯಿ೦ದ ಮಗಳಿಗೆ ನೇರಕವಾಗಿ ಹಕ್ಕು ದತ್ತವಾಗುವುದು, ಪಿತೃಪ್ರಧಾನ ಕುಟು೦ಬದಲ್ಲಿ ಮಕ್ಕಳಿಗೆ ಹಕ್ಕು ತ೦ದೆಯಿ೦ದ ಅನುವ೦ಶೀಯವಾಗಿ ಬರುತ್ತದೆ. ಇಲ್ಲಿ ಸ್ತ್ರೀಯರಿಗೆ ಅಧಿಕಾರವಿರುವುದಿಲ್ಲ. ಸ್ತ್ರೀಪ್ರಧಾನ ಅಧಿಕಾರದ ಪದ್ಧತಿ ಜಗತ್ತಿನ ನಾನಾ ಕಡೆ ಆಚರಣೆಯಲ್ಲಿದೆ. ಜಗತ್ತಿನ ಆನೇಕ ಮೂಲನಿವಾಸಿಗಳಲ್ಲಿ ಈ ಪದ್ಧತಿಯನ್ನು ಅನುಸರಿಸಿಕೊ೦ಡು ಬರುವವರಿದ್ದಾರೆ.

ಮುಖ್ಯವಾಗಿ ಜೈನರು, ಬಂಟರು ಮತ್ತು ನಾಡವರು, ಬಿಲ್ಲವರು, ಅಗಸರು, ಹಳೇಪೈಕರು, ಕು೦ಬಾರ, ಕ್ಷೌರಿಕ, ಬಾಕುಡರು, ಮುಂಡಾಲರು, ಪಂಬದರು, ಸಾಲಿಯ ಇತ್ಯಾದಿ ಜಾತಿಯವರು ಸ್ತ್ರೀ ಪ್ರಧಾನ ಅಧಿಕಾರವನ್ನು ಒಪ್ಪಿಕೊ೦ಡು ಬ೦ದಿದ್ದಾರೆ. ಕೇರಳದಲ್ಲಿ ಮರ್ಮಕತ್ತಾಯಮ್‌ ಕಾನೂನು ಇದೇ ರೀತಿಯನ್ನು

24