ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವು ಕೂಡಾ ಬದಲಾಗುತ್ತ ಹೋಗುತ್ತಿವೆ. ಏನೇ ಆದರೂ ಕರಾವಳಿ ಜಿಲ್ಲೆಯ ಮೂಲಕ ನಿವಾಸಿಗಳು ಹಾಗೆಯೇ ಇಲ್ಲಿ ಬಂದು ಸೇರಿಕೊಂಡ ಪರದೇಶಿಯರು ಒಟ್ಟಾಗಿ ಒಂದು ವಿಶಿಷ್ಟ ಸಂಸ್ಕೃತಿಯನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಅದು ಈ ಜಿಲ್ಲೆಯ ಜನರ ವೈಶಿಷ್ಟ್ಯವನ್ನು ತೋರಿಸುತ್ತದೆ.

ಈ ಕಲೆಗಾರಿಕೆ, ಸಂಸ್ಕೃತಿ, ಜಿಲ್ಲೆಯಲ್ಲಿ ಎಲ್ಲ ಜನಾಂಗಗಳ ನಡುವಿನ ಸಾಮರಸ್ಯವನ್ನು ತೋರಿಸುತ್ತದೆ. ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು ದಕ್ಷಿಣ ಕನ್ನಡದಲ್ಲಿ ಸಾಮರಸ್ಯದಿಂದ ಬದುಕಿದ್ದಾರೆ. ಕ್ರಿ.ಶ. ಆದಿಭಾಗದಲ್ಲಿಯೇ ದಕ್ಷಿಣ ಕನ್ನಡಿಗರಿಗೆ ಅನ್ಯ ದೇಶೀಯರ ಜತೆ ಹೊಂದಾಣಿಕೆ ಸ್ವಭಾವ ಅನಿವಾರ್ಯವಾಗಿ ಒದಗಿದುದರಿಂದಾಗಿ ಜಿಲ್ಲೆಯೂ ವೈವಿಧ್ಯಮಯ ಸಂಸ್ಕೃತಿಯ ಒಂದು ಏಕಧಾರೆಯಾಗಿ ಸಾಮೂಹಿಕ ಜೀವನವನ್ನು ಬೆಳೆಸಿದೆ.

ಧಾರ್ಮಿಕ ಕೇಂದ್ರಗಳು ಮತ್ತು ಉತ್ಸವಗಳು

ದಕ್ಷಿಣ ಕನ್ನಡ ಜಿಲ್ಲೆಯು ಧಾರ್ಮಿಕ ಕೇಂದ್ರಗಳಿಂದ ಕೂಡಿದ ಜಿಲ್ಲೆ. ಈ ಧಾರ್ಮಿಕ ಕೇಂದ್ರಗಳ ವೈಶಿಷ್ಟ್ಯ ಒಂದರಿಂದ ಒಂದು ಬೇರೆ. ಇಡಿಯ ದೇಶದಲ್ಲಿ ಹೆಸರಾಂತ ಎರಡು ಧಾರ್ಮಿಕ ಕೇಂದ್ರಗಳೆಂದರೆ ಉಡುಪಿ ಮತ್ತು ಧರ್ಮಸ್ಥಳ. ಉಡುಪಿಯಲ್ಲಿ ಶ್ರೀಕೃಷ್ಣ ವಿಗ್ರಹವನ್ನು ಶ್ರೀ ಮನ್ಮಧ್ವಾಚಾರ್ಯರು ಸಾಧಾರಣ 800 ವರ್ಷ ಹಿಂದೆ ಸ್ಥಾಪಿಸಿದರು.

ಧರ್ಮಸ್ಥಳದ ಲಕ್ಷದೀಪೋತ್ಸವ ಬಹುದೊಡ್ಡ ಹಬ್ಬ. ಇಲ್ಲಿಯ ಮಂಜುನಾಥ ವಿಗ್ರಹವು ಮಂಗಳೂರಿನ ಕದ್ರಿಕ್ಷೇತ್ರದಿಂದ ಸಾಧಾರಣ 520 ವರ್ಷಗಳ ಹಿಂದೆ ಸ್ಥಾಪಿತವಾಯಿತು.

ಉಡುಪಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಲಕ್ಷಾಂತರ ಜನರನ್ನು ಸೆಳೆಯುತ್ತದೆ. ಇನ್ನುಳಿದಂತೆ ಸುಳ್ಯ ತಾಲೂಕಿನಲ್ಲಿ ಎರಡು ದೇವಸ್ಥಾನಗಳಿವೆ. ಒಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ. ಇನ್ನೊಂದು ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ. ಹಾಗೆಯೇ ಉಡುಪಿ ತಾಲೂಕಿನ ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ, ಪೆರ್ಡೂರಿನ ಅನಂತ ಪದ್ಮನಾಭ ದೇವಸ್ಥಾನ, ಹಿರಯಡಕ ವೀರಭದ್ರ ದೇವಸ್ಥಾನ, ಅಂಬಲಪಾಡಿ ಮತ್ತು ಕಡಿಯಾಳಿ

29