ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾಡುತ್ತಿದ್ದುದುಂಟು. ಇವೆಲ್ಲದರ ನಡುವೆ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಉದ್ಯಮ ನಿಧಾನವಾಗಿ ಬೆಳೆಯಿತು.

ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದ ಆರ್ಥಿಕ ಪ್ರಗತಿಗೆ ಬ್ಯಾಂಕಿಂಗ್‌ ಕ್ಷೇತ್ರದ ಕೊಡುಗೆ ಬಹಳ ದೊಡ್ಡದು. ಇಂದು ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಬ್ರ್ಯಾಂಚುಗಳಿರುವ ಹಲವು ಬ್ಯಾಂಕುಗಳು ದಕ್ಷಿಣ ಕನ್ನಡದ ಹೆಮ್ಮೆಯ ಕೊಡುಗೆ ಎಂದು ಹೇಳಬಹುದು. ಬ್ಯಾಂಕಿಂಗ್ ಕ್ಷೇತ್ರಗಳು ಉದ್ಯಮ ಕ್ಷೇತ್ರವನ್ನು ಧಾರಾಳವಾಗಿ ಬೆಳೆಸಿದವು. ಹಾಗೆಯೇ ನಿರುದ್ಯೋಗದ ಸಮಸ್ಯೆಯನ್ನು ಬಹುಪಾಲು ನಿವಾರಿಸಿದವು.

ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ನಾಲ್ಕು ಬ್ಯಾಂಕು ಈ ಜಿಲ್ಲೆಯಲ್ಲಿ ಹುಟ್ಟಿದವು ಎಂಬುದು ಗಮನಾರ್ಹ.

ಕೆನರಾಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್‌ ಬ್ಯಾಂಕ್, ವಿಜಯಾ ಬ್ಯಾಂಕ್‌ಗಳು ಅಂತಹ ಬ್ಯಾಂಕುಗಳಾಗಿದ್ದು ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿವೆ. ಅಲ್ಲದೆ ಕರ್ನಾಟಕ ಬ್ಯಾಂಕ್ ಒಂದು ಪ್ರಮುಖ ಪ್ರಾದೇಶಿಕ ಬ್ಯಾಂಕ್ ಆಗಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಕೂಡ, ಗಣನೀಯ ವ್ಯವಹಾರ ಹೊಂದಿದ್ದು, ದಕ್ಷ ಸಹಕಾರಿ ಬ್ಯಾಂಕ್ ಎಂದು ಖ್ಯಾತಿ ಗಳಿಸಿದೆ.

ಹೋಟೆಲ್ ಉದ್ಯಮ

ದಕ್ಷಿಣ ಕನ್ನಡದಲ್ಲಿ ಹುಟ್ಟಿ ದೇಶಾದ್ಯಂತ ವಿಸ್ತರಿಸಿದ ಉದ್ಯಮಗಳಲ್ಲಿ ಬ್ಯಾಂಕಿಂಗ್ ಒಂದಾದರೆ ಹೋಟೇಲು ಉದ್ಯಮ ಇನ್ನೊಂದು. ಇಂದು ದೇಶಾದ್ಯಂತ ಉಡುಪಿ ಹೋಟೇಲುಗಳಿಗೆ ವಿಶಿಷ್ಟವಾದ ಮನ್ನಣೆಯಿದೆ. ಮುಖ್ಯವಾಗಿ ಜಿಲ್ಲೆಯ ಸಾಹಸಿಗಳು ಮುಂಬೈಯಂಥ ಮುಖ್ಯ ನಗರಗಳಿಗೆ ಹೋಗಿ ಹೋಟೇಲು ಉದ್ಯಮವನ್ನು ಬೆಳೆಸಿದರು. ಇದರಿಂದಾಗಿ ಜಿಲ್ಲೆಗೆ ಹೊರಗಿನಿಂದ ಸಂಪತ್ತು ಹರಿದು ಬರುವಂತಾಯಿತು. ಜಿಲ್ಲೆಯ ಜನರ ಬಡತನವೂ ನೀಗಿತು.

ಇಂದು ಮುಂಬೈ ಮಾತ್ರವಲ್ಲದೆ ದೇಶದ ಎಲ್ಲೆಡೆ ದಕ್ಷಿಣ ಕನ್ನಡದವರ ಹೋಟೇಲುಗಳ ಉದ್ಯಮ ಪ್ರಖ್ಯಾತವಾಗಿದೆ. ಮುಂಬೈ, ಮದ್ರಾಸ್, ಡೆಲ್ಲಿಗಳಲ್ಲಿ ಎಲ್ಲ ಕಡೆ ಜಿಲ್ಲೆಯ ಹೋಟೇಲು ಉದ್ಯಮ ವಿಸ್ತರಿಸಿದೆ. ಎಲ್ಲ ರಾಜ್ಯಗಳ ಸಣ್ಣ ಸಣ್ಣ ನಗರಗಳಲ್ಲೂ ಹೋಟೇಲು ಈ ಜಿಲ್ಲೆಯ ಸಾಮಾನ್ಯ ಜನರು ನಡೆಸುವುದನ್ನು

38