ಪುಟ:Duurada Nakshhatra.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಯದೇವ ಅವರೊಡನೆ ಬಲು ಎಚ್ಚರವಾಗಿ ವರ್ತಿಸುತ್ತಿದ್ದ ತಾನು. ಇಲ್ಲದಿದ್ದಾಗ ನಂಜುಂಡಯ್ಯನೊಡನೆ ತನ್ನ ವಿಷಯವಾಗಿ ಮಧುರವಲ್ಲದ ಮಾತುಕತೆ ನಡೆಯುತಿತ್ತೆಂಬುದು ಆತನಿಗೆ ಗೊತ್ತೇ ಇತ್ತು.

ಒಂದು ಕಾಲದಲ್ಲಿ ಜರಿ ಪೇಟವನ್ನು ಬಿಡದೆ ತೊಡುತಿದ್ದ ವೆಂಕಟ ರಾಯರು ಈಗ ಕಟ್ಟಾ ರಾಷ್ಟ್ರೀಯವಾದಿಯಾಗಿದ್ದಶು. ಅಲ್ಲದೆ ಅವರು ಆಧುನಿಕರು ಕೂಡಾ, ದೇವತಾ ಪಾರ್ಥನೆಯಲ್ಲಿ ಬದಲಾವಣೆಯಾಗಬೇಕೆಂದು ಅವರು ಸೂಚಿಸಿದರು.

“ಏನು ಜಯದೇವ, ಯಾವ ಹಾಡು ಸೂಚಿಸ್ತೀರಾ ನೀವು? 'ದೇವಿ ಭುವನ ಮನಮೋಹಿನಿ' ಇರ್ಲೋ??”

ಆ ಪ್ರಶ್ನೆಯಲ್ಲಿ ವ್ಯಂಗ್ಯವಿತ್ತು, ಜಯದೇವ ತಕ್ಷಣ ಉತ್ತರವೀಯಲಿಲ್ಲ.

ತಾವು ಸೂಚಿಸುವುದು ಅಗತ್ಯವೆಂದು ಭಾವಿಸಿ ನಂಜುಂಡಯ್ಯ ನೆಂದರು;

“ಬದಲಾಯಿಸಬೇಕು ನಿಜ. ನಾನು ಆ ಕಡೆ ಗಮನವನ್ನೇ ಕೊಟ್ಟಿರ್ಲಿಲ್ಲ. ಕಾಯೌ ಶ್ರೀಗೌರಿ ಚೆನ್ನಾಗಿರುತ್ತೆ--ಅಲ್ವೆ?"

ಕೊನೆಗೂ ಮನಸ್ಸಿನಲ್ಲಿದುದನ್ನು ಜಯದೇವ ಹೇಳಿದ:

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು-ಇಡೋಣ.”

“ಬೇಡೀಪ್ಪ ಸದ್ಯಃ !” ಎಂದು ವೆಂಕಟರಾಯರು ನಕ್ಕರು.

“ಯಾಕ್ಸಾರ್?"

“ನೆಹರೂ ಹೇಳಿದ್ದು ಓದಿಲ್ವೇನ್ರಿ? ಭಾಷಾದುರಭಿಮಾನ ಇರಕೂಡ್ದು,ಅಲ್ದೆ ಕರ್ನಾಟಕ ಅನ್ನೋದು ಎಲ್ಲಿದೆ? ನಾವು ಮೈಸೂರು ರಾಜ್ಯದಲ್ಲಿದೊಂಡು ಆ ಹಾಡು ಹೇಳೋದೆ? ಅದು ರಾಜಕೀಯ ವಿಷಯ ಬೇರೆ!"

ತಮ್ಮ ಸೂಚನೆಯೇ ವೆಂಕಟರಾಯರಿಗೂ ಮೆಚ್ಚುಗೆಯಾಗುತ್ತದೆಂದು ನಂಜುಂಡಯ್ಯ ನಂಬಿದರು. -

“ನೋಡಿ ನಂಜುಂಡಯ್ಯ, ನನ್ನ ವೈಯಕ್ತಿಕ ಅಭಿಪ್ರಾಯ ಹೇಳೋದಾದ್ರೆ ನಿಮ್ಮ ಸೂಚನೇನೇ ನನಗೂ ಮಾನ್ಯ, ಆದರೆ ನಮ್ಮ ಮಂತ್ರಿಮಂಡಲಕ್ಕೆ ಅದು ಹಿಡಿಸೋದಿಲ್ಲ.”