ಪುಟ:Duurada Nakshhatra.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭

ಜಯದೇವ ಮೇಷ್ಟು ಕಾಲೇಜು ವಿದ್ಯಾಭಾಸವನ್ನು ಪೂರ್ತಿಗೊಳಿಸಲೆಂದು ಹೊರಟು ಹೋಗಲು ನಿರ್ಧರಿಸಿದ ಸುದ್ದಿ ಊರಲ್ಲಿ ಹಬ್ಬಿತು. ರಜೆ ಬಂದಾಗ ಶಾಲೆಯನ್ನೇ ಮರೆತಿದ್ದ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಜಯದೇವನ ಕೊಠಡಿಗೆ ಬಂದು ಹೋದರು. ಬೀಳ್ಕೊಡುಗೆಯ ಮಾತುಗಳು ಆತನನ್ನ ಮೂಕನಾಗಿ ಮಾಡಿದುವು.

ಹುಡುಗರ ಕಣ್ಣತಪ್ಪಿಸಿ ಬಿಡುವು ದೊರಕಿಸಿಕೊಂಡು, ಪರೀಕ್ಷೆಯ ಉತ್ತರ ಪತ್ರಿಕೆಗಳನ್ನೆಲ್ಲ ತಿದ್ದಿ ಮುಗಿಸಿ ಜಯದೇವ ನಂಜುಂಡಯ್ಯನವರ ಮೂಲಕ ಮುಖ್ಯೋಪಾಧ್ಯಾಯರಿಗೆ ಕಳುಹಿಸಿಕೊಟ್ಟ.

ತಿಮ್ಮಯ್ಯನವರ ಜತೆಯಲ್ಲಿ ಅವರ ಹಳ್ಳಿಗೆ ಹೋಗಿ ಒಂದು ದಿನವೆಲ್ಲ ಅಲ್ಲಿದ್ದ.

ತಿಮ್ಮಯ್ಯ ನಿರ್ಮಲ ನಗೆಯೊಡನೆ ಹೇಳಿದರು :

“ನೀವಿನ್ನು ಡಿಗ್ರಿ ಮನುಷ್ಯರಾಗ್ತೀರಿ!”

ತಿಮ್ಮಯ್ಯನನ್ನು ನೋಡುತ್ತಲಿದ್ದಂತೆ ಒಂದು ವಿಷಯ ಜಯದೇವನಿಗೆ ಹೊಳೆಯಿತು.

“ತಿಮ್ಮಯ್ಯ, ವಾಪಸು ಬಂದ್ಮೇಲೆ ನಾನು ಪ್ರಾಥಮಿಕ ಶಾಲಾ ಉಪಾಧ್ಯಾಯನಾಗ್ಲೇನ್ರಿ?”

ತಿಮ್ಮಯ್ಯ ಗಟ್ಟಿಯಾಗಿ ನಕ್ಕರು.

“ತಮಾಷೆಯಲ್ಲ ತಿಮ್ಮಯ್ಯ ನಾನೂ ನನ್ನ ಹೆಂಡತೀನೂ ಇಬ್ಬರೂ ಉಪಾಧ್ಯಾಯರಾಗ್ತೀವಿ."

“ಮದುವೆಯಾದ್ಯೇಲೆ ಮಕ್ಕಳಾಗ್ತಾರೆ ಗೊತ್ತೆ ಸ್ವಾಮಿ?

“ಆಗಲಿ, ಅದಕ್ಕೇನು?

“ತಾಯಿ ತಂದೆ ಇಬ್ಬರೂ ಸೇರಿ ನಿಮ್ಮ ಮಕ್ಕಳಿಗೆ ನೀವೇ ಪಾಠ ಹೇಳ್ಕೊಡ್ಬೇಕೂಂತ ಮಾಡಿದೀರೊ?”

ತಮಾಷೆಯಲ್ಲ, ಇದು ತನ್ನ ಕನಸು, ಎನ್ನುವ ರೀತಿಯಲ್ಲಿ