ಪುಟ:Duurada Nakshhatra.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಇಲ್ಲ!!”

ಆ ಮಾತನ್ನು ನಂಬದವರ ಹಾಗೆ ನಂಜುಂಡಯ್ಯ ಜಯದೇವನನ್ನೆ ನೋಡಿ, ಆತ ನಿಜವನ್ನೆ ಆಡುತ್ತಿದ್ದನೆಂಬುದು ಮನವರಿಕೆಯಾದ ಬಳಿಕ ಸಿಗರೇಟನ್ನು ಎರಡು ಸಾರೆ ಮೇಲಿಂದ ಮೇಲೆ ಸೇದಿ ಹೊಗೆಬಿಡುತ್ತ ಅಂದರು:

*ರಂಗರಾಯರಿಗೆ ಬೇಗನೆ ವರ್ಗವಾಗಬಹುದು.”

“ಓ! ನನಗೆ ಗೊತ್ತೇ ఇల్లి. ಹಾಗೇನು ?

“ಹೂಂ.. ಕಾರಣ ಗೊತ್ತೆ ? ಅವರ ಮೇಲೆ ಆರೋಪಗಳಿವೆ. ಡಿ.ಪಿ.ಐ. ಯವರವರೆಗೂ ಹೋಗಿದೆ ವಿಷಯ. ದೂರ, ಬೇರೆ ಜಿಲ್ಲೆಗೇ ವರ್ಗಮಾಡ್ತಾರೆಂತ ಸುದ್ದಿ.”

ಆ ಮಾತುಕತೆಯೇನೂ ಹಿತಕರವಾಗಿರಲಿಲ್ಲ. ಹಿಂದಿನ ದಿನವಷ್ಟೇ ಬಲು ಒಳ್ಳೆಯವರೆಂದು ತಾನು ಭಾವಿಸಿದ್ದ ರಂಗರಾಯರೇ ಇಂಥವರಾಗಬೇಕೇ?... ಅಥವಾ ಈ ಶಾಲೆಗೆ ಇಬ್ಬರು ಉಪಾಧ್ಯಾಯರೇ ಸಾಕು ಎನ್ನುವುದಕ್ಕೋಸ್ಕರ ಅವರನ್ನು ವರ್ಗಾಯಿಸುತ್ತಿರಬಹುದೆ?

“ಹಾಗಾದರೆ ಇಲ್ಲಿ ಸಾಲೆಗೆ ಸಾಕೇನು??”

“ಯಾಕೆ, ಇನ್ನೂ ಒಬ್ಬರ್ನ ಸಹಾಯಕ್ಕೆ ಕಳಿಸ್ತಾರೆ.”

'ಸಹಾಯಕ್ಕೆ' ಎನ್ನುವ ಪದ ಹೊಸ ವಿಷಯವನ್ನು ಜಯದೇವನಿಗೆ ತಿಳಿಸಿತು. ಹಾಗಾದರೆ, ನಂಜುಂಡಯ್ಯನೇ ಇನ್ನು ಮುಖೇಯ್ಯೋಪಾಧ್ಯಾಯರಾಗುವರು... :

ಆ ತಿಳಿವಳಿಕೆ ಜಯದೇವನಿಗೆ ಆಯಿತೆ ಇಲ್ಲವೆ ಎಂಬುದನ್ನೂ ನಂಜುಂಡಯ್ಯ ಗವುನಿಸಿದಂತೆ ತೋರಿತು.

ಅವರು ಪೋಷಾಕು ಧರಿಸಿದರು. ಹಿಂದಿನ ದಿನ ತಾನು ಅದೇ ಸೂಟಿನಲ್ಲಿದ್ದ ಅವರನ್ನು ಕಂಡಿದ್ದ.

“ಸೈನ್ಸ್ ಗ್ರಾಜುಯೇಟು ನಾನು ಈ ಕೊಂಪೇಲಿ ಯಾಕಿದೀನೀಂತ ನಿವುಗೆ ಆಶ್ಚರ್ಯ ಆಗ್ಬಹುದಲ್ವೆ?"

“ಮನೆ ಇಲ್ಲೇ ಇದೆ, ಅದಕ್ಕೋಸ್ಕರ.”

“ಹೌದು, ಸರಿಯಾಗೇ ಊಹಿಸಿದಿರಿ. ಊರಲ್ಲೆಲ್ಲಾ ಇಲ್ಲಿ ಒತ್ತಾಯ ಮಾಡ್ತಿದ್ದಾರೆ: ಬೇಗ್ನೇ ಒಂದು ಹೈಸ್ಕೂಲು ತೆರೀಬೇಕು, ನಾನು ಎಚ್.ಎಂ.ಆಗ್ಬೇಕೂಂತ..ಇವತ್ತಲ್ಲ ನಾಳೆ ಆಗಿಯೇ ಆಗುತ್ತೆ.”