ಪುಟ:Hosa belaku.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಜ್ಞಾನದ ವಿಷ

ನಗರ ಸಭಾಭವನದ ಅಟ್ಟ ಕಿಕ್ಕಿರಿದು ತುಂಬಿ ಹೋಗಿತ್ತು. ಒಳಗೂ ಹೊರಗೂ ಸ್ವಯಂಸೇವಕರ ಓಡಾಟ ನಡೆದಿತ್ತು. ಭವನದ ಹೊರಅಂಗಳದಲ್ಲಿ, ೧-೬ ಧ್ವನಿವಾಹಕ ಕರ್ಣಗಳು ಕಂಗೊಳಿಸುತ್ತಿದ್ದುವು. ಆ ಊರ ಪ್ರತಿಷ್ಠಿತ ಕಾರಖಾನೆದಾರರ ಕಾರುಗಳು, ಬದಿಯ ಆವಾರಿನಲ್ಲಿ ಸಾಲಾಗಿ ಶಿಸ್ತಿನಲ್ಲಿ ನಿಂತಿದ್ದುವು. ಈ ಎಲ್ಲ ಸಂಭ್ರಮ ಯಾವುದಕ್ಕೋಸ್ಕರ–– ಎಂಬುದು ನೋಡುವವನಿಗೆ ಒಮ್ಮೆಲೆ ತಿಳಿಯುವಂತಿತ್ತು. ಹೌದು! ಪರೀಕ್ಷೆಯ ಫಲಿತಾಂಶ ನೋಡಿ ಬಂದ ವಿದ್ಯಾರ್ಥಿಯ ಮುಖದ ಮೇಲಿನ ಕಳೆಯಿಂದ, ಅವನ ಪರಿಣಾಮವನ್ನು ಗುರುತಿಸುವುದು ಕಠಿಣವಲ್ಲ! ಹಾಗೆಯೇ, ಈ ಸಭಾಭವನದಲ್ಲಿ ನಲಿಯುತ್ತಿದ್ದ ಸಂಭ್ರಮ ಯಾರದೋ ಸ್ವಾಗತಕ್ಕಾಗಿ-ಎಂದು ಊಹಿಸುವುದು ಸುಲಭ ಸಾಧ್ಯವಾದ ಮಾತು.

ಆ ಊಹೆ ಸಂಪೂರ್ಣ ನಿಜ. ಅದೇ ಊರಿನ ಒಬ್ಬ ಮನುಷ್ಯ ಪರದೇಶಕ್ಕೆ ಹೋಗಿ, ಯ೦ತ್ರೀಕರಣ ವಿದ್ಯೆಯಲ್ಲಿ ಹೊಸ ಸಂಶೋಧನೆಯನ್ನು ಮಾಡಿ, ಆ ವರುಷದ ವಿಶೇಷ ಪ್ರಾಯಿಜ್ ಒಂದನ್ನು ಗಳಿಸಿದ್ದ. ಆ ವಿಜ್ಞಾನಿಯೆಂದರೆ ಆ ಊರ ರಾಜು. ಆ ತಾಲ್ಲೂಕಿನ ಒಂದು ಸಣ್ಣ ಹಳ್ಳಿಯ ಶಾಲಾ ಮಾಸ್ತರನ ಮಗ ರಾಜು.

ಆದರೆ ಇಂದು ಅವನು ಒಬ್ಬ ಶಾಲಾ ಮಾಸ್ತರನ ಮಗ ರಾಜು ಎಂದು ಎಣಿಸಲ್ಪಡುತ್ತಿರಲಿಲ್ಲ- ಒಬ್ಬ ಪ್ರಸಿದ್ಧ ವಿಜ್ಞಾನಿ ಎಂದು ಪ್ರಾಯಿಜ್ ಗಳಿಸಿಕೊಂಡ ಮಹಾ ವ್ಯಕ್ತಿ ಎಂದು! ಕರ್ನಾಟಕಕ್ಕೂ ಬೇರೆ ಪ್ರಾಂತಕ್ಕೂ ಒಂದು ಉಪಯುಕ್ತ ಹೊಸ ಮಶಿನ್‌ನ್ನು ಕಂಡುಹಿಡಿದ ಸಂಶೋಧಕನೆಂದು.

ಒಂದು ನಿಮಿಷದಲ್ಲಿ ೨೦೦ ಬೀಡಿಗಳನ್ನು ಕಟ್ಟುವ ಯಂತ್ರವನ್ನು ರಾಜು