ಪುಟ:Hosa belaku.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨

ಸಾಲ ಪರಿಹಾರ

ದ್ದನ್ನು ಕಂಡು “ಏನೋ ಸೋಮ, ಚಳಿಗಾಲದಲ್ಲಿಯೂ ಬೆಂವತಿದ್ದಿಯಲ್ಲೋ ” ಎಂದರು.

“ಹೊರಗೆ ಚಳಿ ಇದ್ದರೂ ಹೊರಗೆ ಸಾಲದ ಶಕೆ ಕುದಿಯುತ್ತಿದೆಯಮ್ಮಾ” ಎಂದುಹೇಳಿ ಮತ್ತೊಮ್ಮೆ ಬಗ್ಗಿ ನಮಸ್ಕರಿಸಿ ಭಾರವಾದ ಹೊರೆಯನ್ನು ಹೊತ್ತವನಂತೆ ಹೊರಟು ಹೋದ. ಸೋಮನ ಮಾತು ಕೇಳಿದ ವೇಣಕ್ಕನಿಗೆ ಏಕೋ ಹೃದಯ ಹಿಂಡಿದಂತಾಯ್ತು. ಕೊಂಕು ಮಾತುಗಳನ್ನರಿಯದ ಅವಳು ಸಹಜ ನಗೆಯಾಡುವದಕ್ಕೆ ಹಾಗೆ ಹೇಳಿದ್ದಳು. ಆ ನಗೆಮಾತು ಹೊಗೆಯ ನಾಂದಿಯಾಗುವದೆಂದು ಅವಳು ತಿಳಿದಿರಲಿಲ್ಲ. ಅರೆಕ್ಷಣ ವೇಣಕ್ಕ ಮೈಮರೆತು ನಿಂತಳು. ಗಂಡನ ಎಲೆ ಅಡಿಕೆ ತಟ್ಟೆಯಲ್ಲಿ ಬದಾಮ ಹಾಕುವದನ್ನು ಮರೆತು ಸೋಮ ಹೋದ ನೋಡುತ್ತ ನಿಂತಳು. ರಾಯರು ಮಾತ್ರ ಗಹಗಹಿಸಿ ನಕ್ಕರು. ಗಾಯದ ಮೇಲೆ ಉಪ್ಪುನೀರು ಚಿಮುಕಿಸಿದಂತಾಗಿ ವೇಣಕ್ಕ-

"ಹೀಗೆ ನಗೋದಕ್ಕೇನಾಯ್ತು ? ”
"ಇರಲಿ, ಬದಾಮು ಇಡು ಇಲ್ಲಿ. ಗಾಳಕ್ಕೆ ಮೀನ ಈಗ ತಾನೇ ಸಿಲುಕಿದೆ."

ವೇಣಕ್ಕ ಅಲ್ಲಿ ನಿಲ್ಲಲಿಲ್ಲ, ಅಡಿಕೆ ತಟ್ಟೆಯಲ್ಲಿ ಬದಾಮು ಚೆಲ್ಲಿ ನೇರಾಗಿ ಒಳನಡೆದರು, ದೇವರ ಕೋಣೆಗೆ ಹೋಗಿ ಮನಸೋ ಕಂಬನಿಗರೆಯಬೇಕೆಂದು ದೇವರ ಕೋಣೆಯತ್ತ ನಡೆದರು. ದೇವರ ಕೋಣೆಯ ಬಾಗಿಲು ಹಾಕಿತ್ತು. ಇನ್ನು ದೂಡುವವರಿದ್ದರು. ಆದರೆ ಒಳಗಣ ಧ್ವನಿ ಅವರನ್ನು ನಿಂತಲ್ಲಿಯೇ ನಿಲ್ಲಿಸಿತು.

"ದೇವರೇ, ಅವಳಿಗೆ ಮಕ್ಕಳಾಗಲಿಲ್ಲ ಅಂತ ರಾಯರು ನನ್ನ ಲಗ್ನವಾಗಿದ್ದಾರೆ. ಆದರೆ ಈಗ ಈ ತಿಂಗಳು ಅವಳು ಮುಟ್ಟೇ ಕೂಡಲಿಲ್ಲ. ತಿಂಗಳ ಮೇಲೆ ೩-೪ ದಿನಗಳಾಗಿ ಹೋಯಿತಲ್ಲ. ಅವಳ ಮದುವೆಯಾಗಿ ೧೧ ವರುಷವಾಗಿ ಹೋಯಿತು ಈ ಹನ್ನೊಂದು ವರುಷ ಸಂತಾನವಿಲ್ಲದಂತೆ ಮುಂದೂ ಸಂತಾನ ಕೊಡಬೇಡ. ಈ ನನ್ನ ಕೋರಿಕ ಫಲಿಸಿದರೆ ಈ ಸಲ

ಮಾರಮ್ಮನ ಜಾತ್ರೆಯಲ್ಲಿ ನಿನ್ನ ಹೆಸರ್ಲೆ ೨ ಕುರಿ......."