ಪುಟ:KELAVU SANNA KATHEGALU.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಾಪೂಜಿ!... ಬಾಪೂ!... 3

  “ನನಗೆ ಪ್ರಣಾಮ ಮಾಡಲು ಅರ್ಹತೆಯಿಲ್ಲ ನಿನಗೆ!” ಎಂದು ಆ ರುಂಡ ಮೆಲ್ಲನೆ ಮಾತಾಡಿತು: 
"ನನ್ನನು ನೀನು ವಂಚಿಸಿದ್ದೀಯ."
ಸೇಠ್ ಜಿ ಕುಸಿಕುಳಿತರು.
 ರುಂಡ ಮಾತಾಡಿತು ನಿಧಾನವಾಗಿ:  
“ಸತ್ಯ..ಅಹಿಂಸೆ..ಗ್ರಾಮಗಳ ಉದಾರ...ಆ..ಆ...” 
 ಕಂಬನಿ ತಟಕುತಟಕಾಗಿ ಆ ರುಂಡದ ಗುಳಿಗಳಲ್ಲಿ ಅಡಗಿದ್ದ ಕಣ್ಣುಗಳಿಂದ ಕೆಳಗೆ ಹರಿದು ಉರುಳಿತು..
 ... ಸೇಠ್ ಜಿಗೆ ಪುನಃ ನಿದ್ರೆ ಬಂದಿತು...
 ...ಸತ್ಯ? ಅಹಿಂಸೆ? ಗ್ರಾಮೋದ್ಧಾರ ?
 ಚಹಾಪಾನ ಮಾಡುತ್ತಿದ್ದ  ಸೇಠ್ ಜಿ ಮುಗುಳ್ನಕ್ಕರು.
 ಸತ್ಯ? ರಾಜಕಾರಣದಲ್ಲಿ ಸತ್ಯಕ್ಕೆ ಸ್ಥಾನವೆಲ್ಲಿ? ಒಬ್ಬರು ಮತೊಬ್ಬರನ್ನು ವಂಚಿಸುವ, ಸೋಲಿಸುವ,      
 ನಾಶಮಾಡುವ ತಂಡ ರಾಜಕಾರಣಜ್ಞರದು.  
   ಅಹಿಂಸೆ? ಈ ಮಾತಿಗೆ ಅರ್ಥವಿಲ್ಲ. ಕೂಲಿಗಾರರಿಗೆ ಹಿಂಸೆ ಕೊಡದೆ ಹೋದರೆ ಅವರು 
 ದುಡಿಯುವರೆ? ಹಿಂಸೆ ಇಲ್ಲದೆ ಸ್ವತಂತ್ರ ಭಾರತದ ರಕ್ಷಣೆ ಯಾಗುವುದೆ?
 ಹುಂ!?
 ಗ್ರಾಮೋದ್ಧಾರ? ಜಮೀನ್ದಾರರು ಆ ಭಾರ ಹೊತ್ತಿರುವರಲ್ಲ! ಇಷ್ಟ ರಿಂದ ಬಾಪೂಜಿ
 ಸಂತುಷ್ಟರಾಗಲೇಬೇಕಲ್ಲ?
    *                   *                    * 
 “ನನ್ನ ಸರ್ವಸ್ವವೇ!” ಎಂದು ಹೋರಿಗಳನ್ನು ಪ್ರೀತಿಯಿಂದ ಮೈದಡವುವ ರೈತನಿಲ್ಲ-ತನ್ನ ಹೊಲ    
 ಇದೆಂದು ಮಣ್ಣನ್ನು ಆತ ಮುದ್ದಿಸುವ ಹಾಗಿಲ್ಲ... 
 
 ಹಗಲು ಹೊಲದಲ್ಲಿ ದುಡಿದು ಹೊತ್ತು ತಿರುಗಿದಾಗ, ಹೆಂಡತಿ ತರುವ ಬುತ್ತಿಯನ್ನು ತಿಂದು ತೇಗುವ, 
 ತನ್ನ ದುಡಿತದ ಫಲವೆಂದು ತೆನೆ ಬಿಟ್ಟು ಜೂಲಾಡುವ ಭತ್ತದ ಸಸಿಗಳನ್ನು ಕಂಡು ತಲೆದೂಗುವ-    
 ಬೋರೇಗೌಡನಿಲ್ಲ!
 ಓ!..ಅದೆಷ್ಟು ಜನ ನಿರುದ್ಯೋಗಿಗಳು! 
     *                    *                    *                                        
   ಸರ್ರ್ ಸರ್ರ್‍ರ್...
  ಚರಕದ ಸದ್ದು! ಹ್ಹಾ!
  ಅಲ್ಲೊಬ್ಬ ಮುದುಕ ನೂಲೆಳೆಯುತ್ತಿದ್ದಾನೆ-ಎಣ್ಣೆಯಾರುತ್ತಲಿರುವ