ಈ ಪುಟವನ್ನು ಪ್ರಕಟಿಸಲಾಗಿದೆ
ಬಾಪೂಜಿ!... ಬಾಪೂ!... 3
“ನನಗೆ ಪ್ರಣಾಮ ಮಾಡಲು ಅರ್ಹತೆಯಿಲ್ಲ ನಿನಗೆ!” ಎಂದು ಆ ರುಂಡ ಮೆಲ್ಲನೆ ಮಾತಾಡಿತು: "ನನ್ನನು ನೀನು ವಂಚಿಸಿದ್ದೀಯ." ಸೇಠ್ ಜಿ ಕುಸಿಕುಳಿತರು. ರುಂಡ ಮಾತಾಡಿತು ನಿಧಾನವಾಗಿ: “ಸತ್ಯ..ಅಹಿಂಸೆ..ಗ್ರಾಮಗಳ ಉದಾರ...ಆ..ಆ...” ಕಂಬನಿ ತಟಕುತಟಕಾಗಿ ಆ ರುಂಡದ ಗುಳಿಗಳಲ್ಲಿ ಅಡಗಿದ್ದ ಕಣ್ಣುಗಳಿಂದ ಕೆಳಗೆ ಹರಿದು ಉರುಳಿತು.. ... ಸೇಠ್ ಜಿಗೆ ಪುನಃ ನಿದ್ರೆ ಬಂದಿತು... ...ಸತ್ಯ? ಅಹಿಂಸೆ? ಗ್ರಾಮೋದ್ಧಾರ ? ಚಹಾಪಾನ ಮಾಡುತ್ತಿದ್ದ ಸೇಠ್ ಜಿ ಮುಗುಳ್ನಕ್ಕರು. ಸತ್ಯ? ರಾಜಕಾರಣದಲ್ಲಿ ಸತ್ಯಕ್ಕೆ ಸ್ಥಾನವೆಲ್ಲಿ? ಒಬ್ಬರು ಮತೊಬ್ಬರನ್ನು ವಂಚಿಸುವ, ಸೋಲಿಸುವ, ನಾಶಮಾಡುವ ತಂಡ ರಾಜಕಾರಣಜ್ಞರದು. ಅಹಿಂಸೆ? ಈ ಮಾತಿಗೆ ಅರ್ಥವಿಲ್ಲ. ಕೂಲಿಗಾರರಿಗೆ ಹಿಂಸೆ ಕೊಡದೆ ಹೋದರೆ ಅವರು ದುಡಿಯುವರೆ? ಹಿಂಸೆ ಇಲ್ಲದೆ ಸ್ವತಂತ್ರ ಭಾರತದ ರಕ್ಷಣೆ ಯಾಗುವುದೆ? ಹುಂ!? ಗ್ರಾಮೋದ್ಧಾರ? ಜಮೀನ್ದಾರರು ಆ ಭಾರ ಹೊತ್ತಿರುವರಲ್ಲ! ಇಷ್ಟ ರಿಂದ ಬಾಪೂಜಿ ಸಂತುಷ್ಟರಾಗಲೇಬೇಕಲ್ಲ? * * * “ನನ್ನ ಸರ್ವಸ್ವವೇ!” ಎಂದು ಹೋರಿಗಳನ್ನು ಪ್ರೀತಿಯಿಂದ ಮೈದಡವುವ ರೈತನಿಲ್ಲ-ತನ್ನ ಹೊಲ ಇದೆಂದು ಮಣ್ಣನ್ನು ಆತ ಮುದ್ದಿಸುವ ಹಾಗಿಲ್ಲ... ಹಗಲು ಹೊಲದಲ್ಲಿ ದುಡಿದು ಹೊತ್ತು ತಿರುಗಿದಾಗ, ಹೆಂಡತಿ ತರುವ ಬುತ್ತಿಯನ್ನು ತಿಂದು ತೇಗುವ, ತನ್ನ ದುಡಿತದ ಫಲವೆಂದು ತೆನೆ ಬಿಟ್ಟು ಜೂಲಾಡುವ ಭತ್ತದ ಸಸಿಗಳನ್ನು ಕಂಡು ತಲೆದೂಗುವ- ಬೋರೇಗೌಡನಿಲ್ಲ! ಓ!..ಅದೆಷ್ಟು ಜನ ನಿರುದ್ಯೋಗಿಗಳು! * * * ಸರ್ರ್ ಸರ್ರ್ರ್... ಚರಕದ ಸದ್ದು! ಹ್ಹಾ! ಅಲ್ಲೊಬ್ಬ ಮುದುಕ ನೂಲೆಳೆಯುತ್ತಿದ್ದಾನೆ-ಎಣ್ಣೆಯಾರುತ್ತಲಿರುವ