ಪುಟ:Katha sangraha or Canarese selections prose Part VI Proverbs.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

550

CANARESE SELECTIONS.

ತಟಸ್ಥನಾದವನಿಗೆ ತಂಟೆ ಏನು?
ತರ್ಕಾ ಮಾಡುವವ ಮೂರ್ಖನಿಂದ ಕಡೆ.
ತಲೆ ಘಟ್ಟ ಎಂದು ಕಲ್ಲನ್ನು ಹಾಯ ಬಾರದು.
ತಾ ಕಳ್ಳನಾದರೆ ಪರರನ್ನು ನಂಬ.
ತಾನಾಗಿ ಬೀಳುವ ಮರಕ್ಕೆ ಕೊಡಲಿ ಯಾಕೆ?
ತಾನು ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು.
ತಾಸಿಗೊಂದು ಕೂಸು ಹೆತ್ತರೆ, ಈಸೀಸು ಮುತ್ತು.
ತಾಳಿದವ ಬಾಳಿಯಾನು.
ತಿಪ್ಪೇ ಮೇಲೆ ಮಲಗಿ, ಉಪ್ಪರಿಗೇ ಕನಸ ಕಂಡ ಹಾಗೆ.
ತೀರಕ್ಕೆ ಬಂದ ಮೇಲೆ ತೆರೆಯ ಭಯವೇ?
ತೀರದಲ್ಲಿರುವ ಮರಕ್ಕೆ ನೀರು ಯಾಕೆ?
ತುಂಟ ಕುದುರೆಗೆ ಗಂಟು ಲಗಾಮು.
ತುಂಡಿಲ್ಲದವನಿಗೆ ತುಂಟನ ಭಯವೇನು?
ತುಂತುರು ಮಳೆಯಿಂದ ತೂಬಿನ ಕೆರೆ ತುಂಬೀತೇ?
ತುಂಬಿದ ಕೊಡ ತುಳಕುವದಿಲ್ಲ.
ತುಚ್ಛನ ಸಂಗಡ ಬಾಳೋದಕ್ಕಿಂತ ಹುಚ್ಚನ ಸಂಗಡ ಬೀಳೋದು ವಾಸಿ.
ತುಚ್ಛ ಮಾತಾಡುವವನು ಹುಚ್ಚಿನಿಂದ ಕಡೆ.
ತುದಿಯಲ್ಲಿ ಕಾಣುವದು ಮದುವೇ ಗುಣ
ದಣಿದ ಎತ್ತಿಗೆ ಮಣುವೇ ಭಾರ.
ದಾರಿ ತಪ್ಪಿದ ಮೇಲೆ ಹಾರಿ ಏನು ಫಲ?
ದಾಸೈಯ ತಿರುಪತಿಗೆ ಹೋದ ಹಾಗೆ.
ದಾಹ ಹತ್ತಿದವನಿಗೆ ಹತ್ತೀ ಕುಡಿಯೋದಕ್ಕೆ ಕೊಟ್ಟ ಹಾಗೆ.
ದಿಕ್ಕಿಲ್ಲದ ಮನುಷ್ಯನಿಗೆ ದೇವರೇ ಗತಿ.
ದಿಕ್ಕು ದಿಕ್ಕಿಗೆ ಹೋದರೂ ದುಖ್ಖ ತಪ್ಪೀತೇ?
ದುಖ್ಖದ ಮೇಲೆ ಸುಖ; ಸುಖದ ಮೇಲೆ ದುಖ್ಖ.
ದುಮ್ಮಿನಿಂದ ಹಮ್ಮ ಕಳ ಕೊಂಡ.
ದೂರಕ್ಕೆ ಬೆಟ್ಟ ನುಣ್ಣಗೆ.
ದೆಬ್ಬೆ ಕೊಟ್ಟು, ಬೊಬ್ಬೇ ಕೊಂಡ.