ಈ ಪುಟವನ್ನು ಪ್ರಕಟಿಸಲಾಗಿದೆ
೧೮ | ನಾವೂ ಮನುಷ್ಯರು!
ಚೂರು ಸಾ ಇಲ್ಲ, ಕಿಟು ತಂದ ಕಟ್ಟಿಗೆ ಚೂರಿಂದ
ಬೆ೦ಕಿಯಾಗಬೇಕು;ಗ೦ಜಿ ಬೇಯಬೇಕು.
ರಾಮಣ್ಣ : ಹೌದೊ ರುಕ್ಕು,ಪೊರ್ಬುಗಳು ನಿನ್ನನ್ನು ಕೇಳಿ ಬಂದದ್ದು.
ಬಾಯಿಯವರಿಗೆ -
ರುಕ್ಕು :ಗೊತ್ತು೦ಟು,ಗೊತ್ತು೦ಟು.ನೀವಿಬ್ಬರೂ ಇಲ್ಲಿರುವಾಗ,
ಕಟ್ಟಿಗೆಗೆ ಹೋದ ನಾನು ಬಾಯಿಯವರನ್ನು ಕಂಡಿದ್ದೆ.
ರಾಮಣ್ಣ : ಹಾ೦. ನೋಡಿ, ನನಗೆ ಗೊತ್ತಿತ್ತು....ಆದರೆ ಕಟ್ಟಿಗೆ
ಕೇಳಾಲಿಲ್ಲವಷ್ಟೆ ಅಲ್ಲಿ?
ಲಸ್ರಾಜೋ:(ಹಲ್ಲು ಗಳನೆಲ್ಲ ತೋರಿಸುತ್ತ)
ಕಟ್ಟಿಗೆ ಅಲ್ಲಿ ಇದ್ದ ರಲ್ಲವೊ?
(ಎಲ್ಲರೂ ನಗುವರು)
ರುಕ್ಕು : ನಾನು ಗಂಜಿ ಕುಡಿದು ರಾತ್ರೆಯೇ ಬರ್ರೇನೆ
ಪೊರ್ಬುಗಳೆ-
. (ಲಸ್ರಾದೋ ಹೊರಡುವನು. ರುಕ್ಕು ಒಳಹೋಗುವಳು...
ರಾಮಣ್ಣ ಎದ್ದುನಿ೦ತು, ಕುಂಟುತ್ತ ಬೀಲಳ್ಕೊಡಲು
ಹೊರಬಾಗಿಲವರೆಗೆ ಬರುವನು.....)
ರಾಮಣ್ಣ : ನೋಡಿ. ಇಲ್ಲವಾದ್ರೆ ಅವರಿಗೇನು ಕಡಿಮೆಯೋ?ಇ೦ಗ್ಲೀಷು
ಗೊತ್ತು೦ಟು,ಎಲ್ಲ ಉ೦ಟು.ಬಿ.ಎ. ಕಲ್ತವರಿಗೆ ಒ೦ದು ಮೂವತ್ತು ರೂಪಾಯಿ ಕೆಲಸ ಎಲ್ಲಿಯೂ ಸಿಕ್ಕ
ಲಿಕ್ಕಿಲ್ಲವೊ? ಈ ಯೂನಿಯನ್ ಗೀನಿಯನ್ ಯಾಕೆ
ನಮ್ಮ ಕಾರ್ಯದರ್ಶಿಗೆ?
ಲಸ್ರಾದೋ : ಹೌದು,ಹೌದು,
ರಾಮಣ್ಣ : ಹಾ೦ - ಅದೇ, ಕಾಲ ಬದಲಾಗಿದೆ...ನಮ್ಮ ಜನಕ್ಕೆ
ಸಹಾಯ ಉ೦ಟು;ನಮ್ಮ ಜನ ಎದ್ದಿದ್ದಾರೆ.