ಪುಟ:Rangammana Vathara.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

5

ರಂಗಮ್ಮನ ವಠಾರ

ಮನೆಯೊಳಗಿಂದ ಹೊರಟಿತು.

ಹೆಂಗಸರು ಬೇಗಬೇಗನೆ ಹೆಜ್ಜೆ ಹಾಕಿದರು. ನಾರಾಯನಣಿಯ ಗಂಡ ತನ್ನ

ಹೆಂಡತಿಯ ಬಳಿಯಲ್ಲಿ ದೇಹ ಮುದುಡಿಕೊಂಡು ಗೋಳಾಡುತ್ತಿದ್ದ.ಪುಟ್ಟ ಮಗು ತಾಯಿಯ ಎದೆಗೆ ಆತುಕೊಂಡು, ತನ್ನೆರಡೂ ಕ್ಶೀಣ ಅಂಗೈಗಳಿಂದ ಸುಕ್ಕುಗಟ್ಟಿದ್ದ ಸ್ತನವನ್ನು ಹಿಡಿದುಕೊಂಡಿತ್ತು.ತೆರೆದ ಕಣ್ಣುಗಳನ್ನೂ ಚಾಚಿದ ಕೈಗಳನ್ನು ಹಾಗೆಯೇ ಬಿಟ್ಟು ನಾರಾಯಣಿ ಹೊರಟ್ಟು ಹೋಗಿದ್ದಳು.

ಬೇಸಗೆಯ ಸೂರ್ಯ ಒಂದೆರಡು ಕಡೆ ಹಂಚಿನ ಎಡೆಗಳಿಂದ ಇಣಿಕಿ ನೋಡು

ತ್ತಿದ್ದ.ಆ ರಶ್ಮಿಗಳು ಆಕಾಶದಿಂದಿಳಿದು ಭೂಮಿ ತಲಪಿದ ಬಳಕಿನ ಹೊಗೆಹಾದಿಗಳ ಹಾಗಿದ್ದುವು.

ಸಾವಿನ ಮನೆ...ವಠಾರದ ಹದಿನಾಲ್ಕು ಮನೆಗಳಲ್ಲೊಂದರಲ್ಲಿ ಸಾವು..

ಹೆಂಗಸರೆಲ್ಲ ಕ್ಷಣಕಾಲ ಆ ಮನೆಯ ಬಾಗಿಲ ಬಳಿ ನಿಂತು ನಾರಾಯಣಿಯೆಂಬ

ಹೆಂಗಸೊಬ್ಬಳು ಬದುಕಿದ್ದ ಳೆಂಬುದಕ್ಕೆ ಸಾಕ್ಶಿಯಾಗಿದ್ದ ಮೃತದೇಹವನ್ನು ನೋಡಿ ಮುಖ ತಿರುಗಿಸಿ ಬದಿಗೆ ಸರಿದರು. ಅಳುವಿನ ಅಕ್ಷಯಪಾತ್ರೆಯಗಳಾಗಿದ್ದ ಅ ನಿಸ್ತೇಜ ಕಣ್ಣುಗಳಿಂದ ಕಂಬನಿ ಚಿಮ್ಮಿತು.

"ನನ್ನ ಬಿಟ್ಟು ಹೋದೆಯಲ್ಲೇ! ನಾನೇನು ಮಾಡ್ಲೇ ಇನ್ನು? ಊ...

ಊ...ಊ..."

ಮಗುವಿನ ಹಾಗೆ ಅಳುತ್ತಿದ್ದ ನಾರಾಯಣಿಯ ಗಂಡ.. ಆತ ಅಸಹಾಯನಾಗಿದ್ದ.

ಆತನ ಸಂಪಾದನೆಯೊಂದೇ ఆ ಸಂಸಾರಕ್ಕೆ ಆಧಾರವಾಗಿದ್ದರೂ ಕೈಹಿಡಿದವಳ ಮೇಲ್ವಿ ಚಾರಣೆಯಲ್ಲೇ ಆತ ಬದುಕಿದ್ದವನು. ಈಗ ಆಸರೆ ತಪ್ಪಿದ ಹಾಗೆ ಆಗಿತ್ತು ಅವನ ಸ್ಥಿತಿ. ಆ ನಾಲ್ವರು ಎಳೆಯ ಮಕ್ಕಳು-ಅವುಗಳಲ್ಲೆರಡು ಹೆಣ್ನು. ಸಂಪಾದನೆ ಶೂನ್ಯ.

"ಅಯ್ಯೋ! ಹೀಗಾಯ್ತಲ್ಲೇ ನನ್ಗತೀ...ನಾನೇನು ಮಾಡ್ಲೇ?"

ಆತನ ರೋದನ ನಾರಾಯಣಿಯ ಸಾವನ್ನು ಜಾಹೀರು ಮಾಡಿತು. ಗಂಡಸರೆಲ್ಲ

ಕೆಲಸಕ್ಕೆ ಹೋಗಿದ್ದ ನಡುಹಗಲು. ಆ ಓಣಿ ಅರ್ಧ ಕ್ಷಣದಲ್ಲಿ ವಠಾರದ ಹೆಂಗಸರಿಂದ ತುಂಬಿಹೋಯಿತು. ಒಂದೇ ಒಂದಾಗಿದ್ದ ಗಂಡು ಧ್ವನಿಯೊಡನೆ ಹೆಂಗಸರ ಕಲರವ ಬೆರತು, ಛಾವಣಿಗಳೆಡೆಯಿಂದ ತೂರಿಕೊಂಡು, ಎದುರುಭಾಗದ ಮುರುಕು ಮಹಡಿ ಯನ್ನೂ ದಾಟಿ, ಶ್ರೀರಾಮಪುರದ ಅಕ್ಕಿಪಕ್ಕದ ಬೀದಿಗಳಲ್ಲಿ ಮರಣವಾರ್ತೆಯನ್ನು ಹೊತ್ತು ಹರಿದಾಡಿತು.

ಎಲ್ಲರೂ ಹೆಬ್ಬಾಗಿಲಿನತ್ತ ನೋಡಿದರು. ಅಲ್ಲ್ಲಿ ಬಲಭಾಗದಲ್ಲೆ ವಠಾರದ

ಒಡತಿ ರಂಗಮ್ಮನ ಮನೆ.

"ರಂಗವ್ನೋರಿಗೆ ಹೇಳೀಮ್ಮಾ ಯಾರಾದ್ರೂ."

ಹೋಗಿ ಹೇಳುವ ಅಗತ್ಯವಿರಲಿಲ್ಲ. ನಿಂತಿದ್ದ ಹೆಂಗಸರು ಮಕ್ಕಳೆಡೆಯಿಂದ