ಪುಟ:Rangammana Vathara.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

166

ಸೇತುವೆ

ಹಾಗೆ ಹೇಳಿ ಸೆರಗು ಸರಿಪಡಿಸಿಕೊಳ್ಳುತ್ತ ಆಕೆ ಹೆಬ್ಬಾಗಿಲಿನತ್ತ ಸರಿದಳು.
ಬಂದ 'ಯಜಮಾನರು' ಹೆಂಡತಿಯನ್ನು ನೋಡಿದರು. ಮುಗುಳುನಗೆ ಆ ಮುಖವನ್ನು
ಅಲಂಕರಿಸಿದಂತೆ ತೋರಿತು. ಹೆಂಡತಿಯನ್ನು ಹಿಂಬಾಲಿಸಿ ಅವರು ಒಳಕ್ಕೆ ಕಾಲಿರಿ
ಸಿದರು.
ಸಾಲ ಕೇಳಲು ಬಂದಾಕೆ ಆಗ ಬಾಗಿಲಲ್ಲಿರಲಿಲ್ಲ. ವೆಂಕಟಸುಬ್ಬಮ್ಮನ ಗಂಡ
ಬಂದ ಸುದ್ದಿಯನ್ನು ಮನೆ ಮನೆಗೂ ತಿಳಿಸುವ ಕಾರ್ಯದಲ್ಲಿ ನಿರತಳಾಗಿದ್ದಳು.
ಯಜಮಾನರು ರುಮಾಲು ತೆಗೆದಿರಿಸಿ ಹೆಂಡತಿ ಹಾಸಿದ ಚಾಪೆಯ ಮೇಲೆ ಕುಳಿ
ತರು. ಮಗನತ್ತ ನೊಡುತ್ತ ಕೇಳಿದರು:
"ಸ್ಕೂಲ್ಗೆ ಹೋಗೋ ಹೊತ್ತಾಗ್ಲಿಲ್ವೇನೋ?"
ಅವರ ದೃಷ್ಟಿಯಲಿ ಸ್ಕೂಲು_ಕಾಲೇಜು ಎಲ್ಲಾ ಒಂದೇ.
"ಇನ್ನು ಹೊರಟ್ಬಿಡ್ತಾನೆ. ಕಂಠಿ ಆಗ್ಲೇ ಹೋದ," ಎಂದು ತಾಯಿಯೇ
ಉತ್ತರವಿತ್ತಳು.
ಮಗ ಕೈ ತೊಳೆದು, ಪುಸ್ತಕಗಳನ್ನೆತ್ತಿಕೊಂಡು, "ಬರ್ತ್ತಿನಪ್ಪಾ-ಅಮ್ಮಾ
ಬರ್ತೀನಿ," ಎಂದು ಹೀಳಿ ಹೊರಕ್ಕೆ ಧಾವಿಸಿದ.
ವೆಂಕಟಸುಬ್ಬಮ್ಮನ ಯಜಮಾನರು ಮನೆಯೊಳಗಿನ ಕತ್ತಲೆಯನ್ನು ಕಂಡು
ಮೂಗು ಮುರಿದರು.
"ಇದೊಳ್ಳೇ ಮನೆ!" ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
"ಇಲ್ಲಿ ಒಳ್ಳೇ ಮನೆ ಸಿಗೋದೇ ಕಷ್ಟ," ಎಂದಳು ವೆಂಕಟಸುಬ್ಬಮ್ಮ.
ಆ ಬಾಗಿಲಿನ ಎದುರಿನೆಂದ ಆತ್ತಿತ್ತ ಹಾದು ಹೋಗುವ ಹೆಂಗಸರ ಸಂಖ್ಯೆ
ಒಮ್ಮೆಲೆ ಹೆಚ್ಚಿತು. ಅವರೆಲ್ಲ ಒಳಗೆ ಕುಳಿತ್ತಿದ್ದ ಗಂಡಸಿನತ್ತ ದೃಷ್ಟಿ ಬೀರಿದರು. ಹೆಂಗ
ಸರ ದೃಷ್ಟಿರನ್ನು ಎದುರಿಸುವುದರಲ್ಲಿ ವೆಂಕಟಸುಬ್ಬಮ್ಮನ ಯಜಮಾನರು ಎಂದೂ
ಹಿಂದಾದವರಲ್ಲ
"ಅಂತೂ ಪರವಾಗಿಲ್ಲ ವಠಾರ!" ಎಂದರು ಯಜಮಾನರು, ಅಷ್ಟೊಂದು ಜನ
ತಮ್ಮನ್ನು ನೋಡುತ್ತಾ ಅತ್ತಿತ್ತ ಹೋದ ಬಳಿಕ.
ನಡೆಗೋಲಿನ ಸದ್ದಾಯಿತು. ರಂಗಮ್ಮ ಬಂದು ಬಾಗಿಲ ಬಳಿ ನಿಂತರು.
"ಇವರೇ ರಂಗಮ್ನೋರು," ಎಂದಳು ವೆಂಕಟಸುಬ್ಬಮ್ಮ. ಆಕೆಯ ಯಜ
ಮಾನರು ಮುಗುಳ್ನಕ್ಕರು. ಅವರನ್ನು ನೋಡಿ ರಂಗಮ್ಮನೂ ನಕ್ಕರು.
"ಯಾವಾಗ ಬರೋಣವಾಯ್ತು?"
"ಇದೇ ಈಗ ಬಸ್ನಲ್ಲಿ ಬಂದೆ."
"ವಠಾರಕ್ಕೆ ಬರ್ತಿರೋದು ಇದು ಮೊದಲ್ನೇ ಸಲ."
"ಹೌದು."

ರಂಗಮ್ಮ, ಆ ಗಂಡಸನ್ನು ಮಾತಿನಿಂದ ತಿವಿದು ನೋಡಲು ಬಯಸಿದರು.