ಈ ಪುಟವನ್ನು ಪ್ರಕಟಿಸಲಾಗಿದೆ
- ಜನನ : ಜೂನ್ ೧೫, ೧೯೨೪. ಹೆಸರು : ಕುಳುಕುಂದ ಶಿವರಾಯ.
೧೩ನೆಯ ವಯಸ್ಸಿನಲ್ಲಿಕತೆ ಬರೆಯಲು ಆರಂಭ. ೨೬ನೆಯ
ವಯಸ್ಸಿನಲ್ಲಿ (೧೯೫೦) ಆಗಿನ ನಿರಂಜನ ಕಾವ್ಯನಾಮವನ್ನೇ ತನ್ನ
ನಾಮಧೇಯವಾಗಿ ಸ್ವೀಕಾರ. ಕನ್ನಡದ ಈ ವಿಶಿಷ್ಟ ಸಾಹಿತಿಯ
ಲೇಖನಿ ಕತೆ, ಕಾದಂಬರಿ, ನಾಟಕ, ರೂಪಕ - ಹೀಗೆ ಹಲವು ಪ್ರಕಾರ
ಗಳಲ್ಲಿ ಸಮೃದ್ಧವಾಗಿ ಹರಿದಿದೆ. ಪತ್ರಿಕೋದ್ಯಮದಲ್ಲಿ ಸುದ್ದಿಗಾರ,
ಉಪ ಸಂಪಾದಕ, ಸಹ ಸಂಪಾದಕ, ಸಂಪಾದಕ ಹುದ್ದೆಗಳಲ್ಲಿ ವಿವಿಧ
ಪತ್ರಿಕೆಗಳಲ್ಲಿ ದಕ್ಷತೆಯಿಂದ ದುಡಿದಿದ್ದಾರೆ. ೧೯೪೫ರ ಮೊದ
ಲುಗೊಂಡು ಅಂಕಣಸಾಹಿತ್ಯಕ್ಕೆ ನಿರಂಜನರಿಂದ ಸಂದಿರುವ ಕೊಡುಗೆ
ಅಸಾಧಾರಣವಾದದ್ದು. - ಪ್ರಧಾನ ಸಂಪಾದಕರಾಗಿ ನಿರಂಜನ ರಚಿಸಿರುವ ಏಳು ಸಂಪುಟಗಳ
ಕಿರಿಯ ವಿಶ್ವಕೋಶ 'ಜ್ಞಾನ ಗಂಗೋತ್ರಿ' ಮತ್ತು ಇಪ್ಪತ್ತೈದು
ಸಂಪುಟಗಳ 'ವಿಶ್ವ ಕಥಾ ಕೋಶ' ಕನ್ನಡಕ್ಕೆ ಬೆಲೆ ಬಾಳುವ ಕಾಣಿಕೆ. - ವಿದೇಶೀಯ ಭಾಷಗಳಿಂದ ಶ್ರೇಷ್ಠ ಕೃತಿಗಳನ್ನು ಕನ್ನಡಿಸಿ ನಮ್ಮ
ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. - ಅನ್ಯ ಭಾಷಗಳಿಗೆ ಅನುವಾದಗೊಂಡಿರುವ ಕನ್ನಡ ಬರೆಹಗಾರರಲ್ಲಿ
ನಿರಂಜನರದು ಅಗ್ರಸ್ಥಾನ. ಇವರ ಕೃತಿಗಳು ಬಂಗಾಳಿ, ಹಿಂದಿ,
ಮಲಯಾಳಂ, ಮರಾಠಿ, ತಮಿಳು, ತೆಲುಗು ಮತ್ತಿತರ ಭಾರತೀಯ
ಭಾಷಗಳಿಗೆ ತರ್ಜುಮೆಯಾಗಿವೆ. ವಿದೇಶೀಯ ಭಾಷೆಗಳಾದ
ಇಂಗ್ಲಿಷ್, ರಷ್ಯನ್, ಪೋಲಿಷ್ ಭಾಷಗಳಲ್ಲಿ ಬೆಳಕುಕಂಡಿವೆ. - ನಿರಂಜನರ ಗಳಿಕೆಯ ಚೀಲದಲ್ಲಿ ಅಭಿನಂದನ, ಗೌರವ, ಪ್ರಶಸ್ತಿ,
ಪಾರಿತೋಶಕಗಳಿವೆ. ಐಬಿಎಚ್ ಪ್ರಕಾಶನದ 'ನಿರಂಜನ :
ಮೂವತ್ತು ಸಂಪುಟಗಳಲ್ಲಿ' ಯೋಜನೆ ಆವರಿಗೆ ಸಲ್ಲುತ್ತಿರುವ
ಹಿರಿಯ ಮನ್ನಣೆ.