ಪುಟ:Rangammana Vathara.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

68

ಸೇತುವೆ

ಆ ಬೀದಿ-ಮನೆಗಳನ್ನು ನೋಡಿದಳು.
ಆಕೆ ಅಲ್ಲಿ ನಿಂತಿದ್ದಂತೆಯೇ ವಠಾರದ ಹೆಂಗಸರು ಒಬ್ಬೊಬ್ಬರಾಗಿ ಬಂದು ತಮ್ಮ
ಬಿಂದಿಗೆಯನ್ನೋ ಬಕೀಟನ್ನೋ ಕೊಳಾಯಿಯಿಂದ ಮೊದಲ್ಗೊಂಡು ಒಂದರ
ಹಿಂದೊಂದಾಗಿ ಇರಿಸಿದರು. ಕೆಲವರು ತಮ್ಮ ಮನೆ ಗುರುತಿಗಾಗಿ ಬರಿಯ ಪಾತ್ರೆ
ಗಳನ್ನೂ ಇಟ್ಟರು.
ರಾತ್ರೆ ತನ್ನೊಡನೆ ಮಾತನಾಡಿದ ಪದ್ಮಾವತಿ ಬಂದಾಗ ಚಂಪಾ ಮುಗುಳು
ನಕ್ಕಳು
"ಇನ್ನು ಸ್ವಲ್ಪ ಹೊತ್ನಲ್ಲೇ ಕೊಳಾಯಿ ಬೀಗ ತೆಗೆದ್ಬಿಡುತ್ತಾರೆ ನಿಮ್ಮ ಬಿಂದಿ
ಗೇನು ಇಟ್ಬಿಡಿ, ಎಂದು ಪದ್ಮಾವತಿ ಹೊಸಬಳನ್ನು ಉದ್ದೇಶಿಸಿ ಹೇಳಿದಳು.
"ಹೊನ್ರಿ ಇಡ್ತಿನಿ ಎಂದಳು ಚಂಪಾವತಿ. ಅಷ್ಟಕ್ಕೆ ಮಾತು ನಿಲ್ಲಿಸಲಾರದೆ
ಅವಳೆಂದಳು.
"ನೀರಿಗೆ ಕ್ಯೂ ನಿಂತ್ಕೋಬೇಕು ಅಲ್ವೆ?
ಹಿ೦ದು ಮುಂದು ನೋಡಿ ಯಾರೊ ಇಲ್ಲವೆಂದು ಮನವರಿಕೆ ಮಾಡಿಕೊಂಡು
ಪದ್ಮವತಿ ಹೊಸಬಳನ್ನು ಉದ್ದೇಶಿಸಿ ಹೇಳಿದಳು.
"ಇಲ್ಲಿ ಇದೊಂದು ಗೋಳು.
ತಗ್ಗಿದ ಧ್ವನಿ. ಧ್ವನಿಯಲ್ಲಿ ಅಳುಕು.
"ಜಾಸ್ತಿ ಜನ ಇದ್ದ ಕಡೆ ಹೀಗೆಲ್ಲಾ ಮಾಡ್ಲೇಬೇಕಾಗುತ್ತೆ," ಎಂದು ನುಡಿದು,
ಪದ್ಮಾವತಿ ನಿಜ ವಿಷಯವನ್ನು ತಿಳಿಸಿದಳು:
"ಹೂಂ. ಮೊದ್ಲು ಮೀಟ್ರ ಇರ್ಲಿಲ್ವಂತೆ. ಆಗ ಎಷ್ಟು ಬೇಕಾದರೂ ಎಷ್ಟೊ
ತ್ತಿಗೆ ಬೇಕದರೊ ನೀರು ಹಿಡಕೋತಿದ್ರು. ಮೀ೨ಪಟರು ಬಂದ್ಮೇಲೆ ಬೀಗ ಹಾಕೋಕೆ
ಶುರು ಮಾಡಿದ್ದು, ಆಗಲೂ ಇಷ್ಟು ತಾಪತ್ರಯ ఇರಿಲ್ಲ, ಇಷ್ಟೆ ಹೊತ್ತು ಅಂತೇನೊ
ಇರಿಲ್ಲ, ಆಮೇಲೆ ನೀರು ಜಾಸ್ತಿ ಖರ್ಚಾಗುತ್ತೇಂತ ಗಲಾಟೆಯಾಯ್ತಮ್ಮ
ನಾನು ಮುಂಚೆ ನಾನು ಮುಂಚೆ ಅಂತ ಜಗಳ ಬೇರೆ.. ಗೊತ್ತೇ ಇದೆಯಲ್ಲ ನೀರಿನ
ಜಗಳ, ಇತ್ತಿಚೀಗೆ ನಾಲ್ಕೈದು ವರ್ಷಹಳಿಂದ ಹೀಗೆ ಕ್ಯೋ ನಿಲ್ಲೋಕೆ ರಂಗಮ್ಮ
ಕಲಿಸಿದ್ರು."
"ರಂಗಮ್ನೋರು ಕಲಿಸಿದ್ರೆ?"
ಉತ್ತರ ಕೊಡಲು ಹೊರಟ ಪದ್ಮಾವತಿಯ ಸ್ವರ ಮತ್ತಷ್ಟು ತಗ್ಗಿತು
"ಹೂಂ. ಅವರೇನೂಂತ ತಿಳಕೊಂಡ್ರಿ? ಒಂದು ದಿನ ಅವರು ಇಲ್ವೆ ಹೋಗ್ಲಿ
ಈ ವಠರಾ ನಡಿಯುತ್ಯ ಹೇಗೆ ನಡಿಯುತ್ಯೆ ಹೇಗೆ?"
"ಒಳಗೆ ಹೋಗ್ರೀನಪ್ಪ. ಮಗು ಎದ್ದಿದೆಯೋ ಏನೋ...?" ಎಂದು ಚಂಪಾ
ಅವಸರವಾಗಿ ತನ್ನ ಗೂಡಿನತ್ತ ಬಂದಳು.