ಪುಟ:Rangammana Vathara.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಳೆಯಾದ ಪುಸ್ತಕಗಳನ್ನಷ್ಟೇ ಬಯಸುವುದು ಜಯರಾಮುಗೆ ಆಭ್ಯಾಸವಾಯಿತು.

ಆಣ್ಣ-ತಂಗಿ ಆ ದೊಡ್ಡ ಪೆಟ್ಟಿಗೆಯನ್ನು ತೆರೆದು ನೋಡಿದರು. ತಂದೆ ಹೋಗುತ್ತ ಒಯ್ದಿದ್ದ ಪುಸ್ತಕಗಳಲ್ಲಿ ಹೆಚ್ಚಿನವು ಹಾಗೆಯೇ ಇದ್ದುವು. ಪರ ಊರಿನ ಪ್ರಕಾಶಕರಿಂದ ಪಡೆದಿದ್ದ ಕೆಲವನ್ನು ಮಾತ್ರ ಈ ಮೊದಲು ಅಣ್ಣ-ತಂಗಿ ಕಂಡಿರಲಿಲ್ಲ.

ಓ! ಇದು ಚೆನ್ನಾಗಿದೇಂತ ತೋರುತ್ತೆ. ಅಲ್ವೆ ಅಣ್ಣ?" ಎಂದಳು ರಾಧಾ ಗಾತ್ರದೊಂದು ಕಾದರಿಬರಿಯನ್ನೆತ್ತಿಕೊಂಡು.

ತಂಗಿಯ ಪ್ರಶ್ನೆಗೆ ಅಣ್ಣ ಉತ್ತರ ಕೊಡಲಿಲ್ಲ. ಪುಸ್ತಕಗಳನ್ನು ನೋಡುತ್ತ ಅವನ ಹೃದಯ ಕುಗ್ಗಿ ಹೋಯಿತು. ಕಣ್ಣುಗಳಿಗೆ ಮಂಜು ಕವಿಯಿತು. ಈ ಸಲದ ಪ್ರವಾಸದಲ್ಲಿ ಹೆಚ್ಚು ಮಾರಾಟವಾಗಿಯೇ ಇಲ್ಲವೆಂಬುದು ಸ್ಪಷ್ಪವಾಗಿತ್ತು. ಆತ ತಂದೆಗೆ ಬೆನ್ನು ಮಾಡಿ ಪುಸ್ತಕಗಳೆದುರು ಸುಮ್ಮನೆ ಕುಳಿತ. ರಾಧೆಯೇ ಆರೇಳು ಪುಸ್ತಕ ಆರಿಸಿದಳು.

"ಅಣ್ಣ ಇಷ್ಹೂ ಇಟ್ಕೂಂಡ್ಬಿಡೋಣ್ವೆನೋ?"

-ಎಂದು ರಾಧಾ ಕೇಳಿದಳು.

ಜಯರಾಮು ಆಕೆ ತೋರಿಸಿದ ಪುಸ್ತಕಗಳನ್ನು ನೋಡಿದ. ಆವೆಲ್ಲವೂ ಮೈಸೂರಿನ ಪ್ರಕಟಣೆಗಳಾಗಿದ್ದವು. ತನ್ನದಲ್ಲವೆಂಬಂತೆ ಕಂಡ ಸ್ವರದಲ್ಲಿ ಆತ ಹೇಳಿದ:

"ಆಪ್ಪ ಇನ್ನೊಂದ್ಸಲ ಹೋಗೋವರೆಗೂ ಇಲ್ಲೇ ಇರತ್ತೆ. ಓದಿ ನೋಡಿದ ರಾಯ್ತು."

"ಯಾಕೆ,ನಮ್ಮನೇಲೇ ಇಟ್ಕೊಳ್ಳೋದು ಬೇಡ್ವಾ?"

"ಥೂ! ಇದೆಲ್ಲಾ ಕಚಡಾ ಪುಸ್ತಕ. ಯಾಕೆ ಮನೇಲಿ ಇಟ್ಕೂಳ್ಳೋದು?"

-ಎಂದು ಜಯರಾಮು, ನಿಜ ಸಂಗತಿ ಏನೆಂಬುದನ್ನು ವಿವರಿಸಲಾಗದೆಯೇ, ರೇಗಿ ಹೇಳಿದ.

ಮಕ್ಕಳ ಸಂಭಾಷಣೆಯನ್ನು. ಕೇಳುತ್ತಿದ್ದ ತಂದಗೆ ಮಗನ ವರ್ತನೆ ವಿಚಿತ್ರ ವೆನಿಸಿತು.

"ಏನೊ ಅದು?" ಎಂದು ಅವರು,ಮಗನ ಧ್ವನಿ ತನಗೆ ಇಷ್ಟವಾಗಲಿಲ್ಲ ಎಂಬು ದನ್ನು ಸೂಚಿಸಿದರು.

"ಏನೂ ಇಲ್ಲ," ಎಂದು ಜಯರಾಮು ದುಗುಡದ ಸ್ವರದಲ್ಲಿ ಊತ್ತರವಿತ್ತು, ಹೊರಕ್ಕೆ ಹೊರಟ.

"ಎಲ್ಲಿಗೆ ಹೋಗ್ತಿದೀಯೋ?"

-ತಾಯಿ ಕೂಗಿ ಕೇಳಿದರು.

ಜಯರಾಮು ತಿರುಗಿ ನೋಡಲಿಲ್ಲ. ದಡದಡನೆ ಮೆಟ್ಟಲಿಳಿಯುತ್ತ ಗಟ್ಟಿಯಾಗಿ ಹೇಳಿದ:

"ಇಲ್ಲೇ ವಾಚನಾಲಯಕ್ಕೆ ಹೋಗ್ಬರ್ತೀನಮ್ಮ."